ಹಸೆಮಣೆಗೇರಿದ ‘ಶ್ರೀರಸ್ತು ಶುಭಮಸ್ತು’ ಸೀರಿಯಲ್ ನಟಿ – ಉಜಿರೆಯಲ್ಲಿ ಮಲೆನಾಡ ಹುಡುಗಿಯ ವಿವಾಹ
- ಮನರಂಜನೆ
- May 24, 2023
- No Comment
- 395
ನ್ಯೂಸ್ ಆ್ಯರೋ : ಕನ್ನಡ ಕಿರುತೆರೆಯಲ್ಲಿ ಈಗ ವಿವಾಹ ಪರ್ವ ಆರಂಭವಾಗಿದೆ. ಅಂದರೆ ಕಲಾವಿದರು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ದೀಪಾ ಕಟ್ಟೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ದೀಪಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಐಟಿ ಉದ್ಯೋಗಿ ರಕ್ಷಿತ್ ಜೊತೆ ದೀಪಾ ಸಪ್ತಪದಿ ತುಳಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಎರಡೂ ಕುಟುಂಬದ ಆಪ್ತರು, ಕಿರುತೆರೆ ಕಲಾವಿದರು ಆಗಮಿಸಿದ್ದರು.
ಮಲೆನಾಡಿನವರಾದ ದೀಪಾ ಮೂಲತಃ ಸಾಫ್ಟ್ ವೇರ್ ಎಂಜಿನಿಯರ್. ರಂಗಭೂಮಿ ಮೂಲಕ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟ ಅವರು ‘ಮಿಥುನ ರಾಶಿ’, ‘ಹಿಟ್ಲರ್ ಕಲ್ಯಾಣ’, ‘ಜೀವ ಹೂವಾಗಿದೆ’ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಸುಧಾರಾಣಿ ಪುತ್ರಿ ಸಂಧ್ಯಾ ಎಂಬ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದಾರೆ.