Honeytrap : ಫೇಸ್‌ಬುಕ್‌ ಬೆಡಗಿಯ ಪ್ರೀತಿಯಲ್ಲಿ ಯಾಮಾರಿದ ಯೋಧ ಆತ್ಮಹತ್ಯೆ – ಲಕ್ಷಾಂತರ ಲೂಟಿ ಮಾಡಿದಾಕೆ ವಿರುದ್ಧ ಪತ್ನಿಯಿಂದ ಎಫ್ಐಆರ್..!!

Honeytrap : ಫೇಸ್‌ಬುಕ್‌ ಬೆಡಗಿಯ ಪ್ರೀತಿಯಲ್ಲಿ ಯಾಮಾರಿದ ಯೋಧ ಆತ್ಮಹತ್ಯೆ – ಲಕ್ಷಾಂತರ ಲೂಟಿ ಮಾಡಿದಾಕೆ ವಿರುದ್ಧ ಪತ್ನಿಯಿಂದ ಎಫ್ಐಆರ್..!!

ನ್ಯೂಸ್ ಆ್ಯರೋ : ಪ್ರೀತಿ ಎನ್ನುವುದು ಒಂದು ರೀತಿಯ ನಶೆ. ಒಮ್ಮೆ ಇದರ ಪಾಶದಲ್ಲಿ ಹೊರಬರುವುದು ಅಷ್ಟು ಸುಲಭವಲ್ಲ. ಹೀಗಾಗಿ ಎಷ್ಟೋ ಮಂದಿಯ ಬದುಕು ದುರಂತದಲ್ಲಿ ಕೊನೆಯಾಗುತ್ತದೆ. ಅಪರೂಪ ಎಂಬಂತೆ ಕೆಲವರಿಗಷ್ಟೇ ತಾವು ಪ್ರೀತಿಸಿದವರೊಂದಿಗೆ ಸುಖಿ ಜೀವನ ನಡೆಸುವ ಅವಕಾಶ ದೊರೆಯುತ್ತದೆ.

ಇನ್ನು ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವವರಿಗೇನು ಕಮ್ಮಿ ಇಲ್ಲ. ಇಂತಹ ಮೋಸದ ಜಾಲಕ್ಕೆ ಸಿಲುಕಿದವರು ಸಾಕಷ್ಟು ಮಂದಿ ಇದ್ದಾರೆ.

ಆತ ದೇಶದ ಗಡಿ ಕಾಯುತ್ತಿದ್ದ ವೀರ ಯೋಧ. ಉಗ್ರರಿಗೂ ಬಗ್ಗಿದವನಲ್ಲ. ಆದರೆ ಪ್ರೀತಿಯ ಬಲೆಗೆ ಬಿದ್ದು ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

ಫೇಸ್‌ಬುಕ್‌ನಲ್ಲಿ ಪರಿಚಯವಾದ ಜೀವಿತಾ ಎನ್ನುವ ಯುವತಿಯ ಪ್ರೀತಿಯ ಬಲೆಯಲ್ಲಿ ಬಿದ್ದು ಮೃತಪಟ್ಟ ಸೈನಿಕ ಕೊಡಗಿನ ಸಂದೇಶ್.

ಮದುವೆಯಾಗಿದ್ದ ಸಂದೇಶ್ ನನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡ ಜೀವಿತಾ ಆತನೊಂದಿಗೆ ಹಲವಾರು ಕಡೆಗಳಲ್ಲಿ ಸುತ್ತಾಡಿ, ತಮ್ಮಿಬ್ಬರ ಕೆಲವು ಖಾಸಗಿ ಫೋಟೋ, ವಿಡಿಯೋಗಳನ್ನು ಮಾಡಿಕೊಂಡಿದ್ದಳು.

ಬಳಿಕ ವರಸೆ ಬದಲಿಸಿದ ಜೀವಿತಾ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಆತನಿಗೆ ಫೋಟೋ, ವಿಡಿಯೋಗಳನ್ನು ತೋರಿಸಿ ನಿರಂತರವಾಗಿ ಬ್ಲ್ಯಾಕ್‌ಮೇಲ್‌ ಮಾಡಿ ಹಂತ ಹಂತವಾಗಿ ಬರೋಬ್ಬರಿ 20 ಲಕ್ಷ ರೂ. ಹಣ, ಯೋಧನ ಬಳಿಯಿದ್ದ ಕಾರು, ಆಸ್ತಿಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾಳೆ. ಇಷ್ಟು ಸಾಲದು ಎಂದುಕೊಂಡು ಯೋಧನಿಗೆ ಏಕಾಏಕಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಪರಿಣಾಮ ಯೋಧ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಯುವುದಕ್ಕೂ ಮೊದಲು ಪತ್ನಿ ಯಶೋಧಳಿಗೆ ಎಲ್ಲವನ್ನೂ ಸಂದೇಶ್ ತಿಳಿಸಿದ್ದ. ಹೀಗಾಗಿ ಯೋಧನ ಪತ್ನಿ ಯಶೋಧ ಪೊಲೀಸ್‌ ಠಾಣೆಯಲ್ಲಿ ಜೀವಿತಾ ವಿರುದ್ಧ ದೂರು ನೀಡಿದ್ದಾಳೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *