ವಿಚ್ಛೇದನ ಪಡೆದಿದ್ದ ಪತ್ನಿಯನ್ನೇ ಮರು ಮದುವೆಯಾದ ಭೂಪ – ಪತ್ನಿಯಿಂದ ದೂರಾದ ಆತನಿಗೆ ಬಾಂಧವ್ಯದ ಮೌಲ್ಯ ಗೊತ್ತಾಗಿದ್ದು ಹೇಗೆ?

ವಿಚ್ಛೇದನ ಪಡೆದಿದ್ದ ಪತ್ನಿಯನ್ನೇ ಮರು ಮದುವೆಯಾದ ಭೂಪ – ಪತ್ನಿಯಿಂದ ದೂರಾದ ಆತನಿಗೆ ಬಾಂಧವ್ಯದ ಮೌಲ್ಯ ಗೊತ್ತಾಗಿದ್ದು ಹೇಗೆ?

ನ್ಯೂಸ್ ಆ್ಯರೋ : ಪತಿ- ಪತ್ನಿ ನಡುವೆ ಹೊಂದಾಣಿಕೆ ಬಹು ಮುಖ್ಯವಾಗಿರುತ್ತದೆ. ಇಲ್ಲವಾದರೆ ಕೌಟುಂಬಿಕ ಕಲಹ, ಮನಸ್ತಾಪ ಹೆಚ್ಚಾಗಿ ವಿಚ್ಛೇದನದ ಹಾದಿ ತುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವೈವಾಹಿಕ ಜೀವನದ ಆರಂಭದಲ್ಲಿ ಇರುವ ಪ್ರೀತಿ ಜವಾಬ್ದಾರಿಗಳು ಹೆಚ್ಚಾದಾಗ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಒಟ್ಟಿಗೆ ಇದ್ದಾಗ ನಮಗೆ ಸಂಬಂಧದ ಮಹತ್ವ ಗೊತ್ತಿರುವುದಿಲ್ಲ. ಆದರೆ ದೂರವಾದಾಗಲೇ ನಿಜವಾದ ಮೌಲ್ಯ ತಿಳಿಯುವುದು.

ಉದಾಹರಣೆಗೆ ಒಂದು ವಸ್ತು ನಮ್ಮಲ್ಲಿ ಇದ್ದರೆ ಅದರ ಮೌಲ್ಯ ನಮಗೆ ಗೊತ್ತಾಗುವುದಿಲ್ಲ. ಅದು ಕಳೆದು ಹೋದಾಗಲೇ ವಸ್ತುವಿನ ಮಹತ್ವ ಏನೆಂಬುದು ಅರಿವಾಗುವುದು.

ಎಷ್ಟೋ ಮನೆಗಳಲ್ಲಿ ಹೊರಗೆ ಎಲ್ಲರೊಂದಿಗೆ ನಗುತ್ತಾ ಮಾತನಾಡುವ ಜನರು ಮನೆಯೊಳಗೆ ಸಂಗಾತಿ, ಮಕ್ಕಳ ಜೊತೆ ಪ್ರೀತಿಯ ಮಾತನಾಡೋದಿಲ್ಲ. ಮುಖ್ಯವಾಗಿ ಸಂಗಾತಿ ಎಂದರೆ ನಿರ್ಲಕ್ಷ್ಯ, ತಾತ್ಸಾರವೇ ಅಧಿಕವಾಗಿರುತ್ತದೆ. ಪತಿ ಅಥವಾ ಪತ್ನಿ ಆಡಿದ ಮಾತುಗಳೆಲ್ಲ ಕಹಿಯಾಗ ತೊಡಗುತ್ತದೆ. ಮದುವೆ, ಮನೆ, ಮಕ್ಕಳು ಕೇವಲ ಒಂದು ಹೊರೆ ಎಂದೆನಿಸುತ್ತದೆ. ಇದರಿಂದ ಹೊರ ಬಂದರೆ ಸಾಕು ಎನ್ನುವವರು ಆತುರದ ನಿರ್ಧಾರ ಕೈಗೊಂಡು ಕೊನೆಗೆ ಪಶ್ಚಾತಾಪ ಪಡುತ್ತಾರೆ.

ಇಲ್ಲೊಬ್ಬ ವ್ಯಕ್ತಿಯ ಜೊತೆಗೆ ಆಗಿರುವುದು ಇದೆ. ಅವಸರದ ನಿರ್ಧಾರ ಕೈಗೊಂಡು ಸಂಗಾತಿಯಿಂದ ದೂರವಾಗಿ ಮತ್ತೆ ತನ್ನ ತಪ್ಪಿನ ಅರಿವಾಗಿ ಅವಳನ್ನೇ ಮರು ಮದುವೆ ಆಗಿದ್ದಾನೆ. ಅದು ಸರಿ ಸುಮಾರು 5 ವರ್ಷಗಳ ಬಳಿಕ.

ಉತ್ತರ ಪ್ರದೇಶದ ಪ್ರಯಾಗರಾಜ್ ವಿನಯ್ ಜೈಸ್ವಾಲ್ ಎಂಬಾತ ಈ ಬಗ್ಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 2012ರಲ್ಲಿ ಮದುವೆಯಾಗಿದ್ದ ವಿನಯ್ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ 2018 ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾನೆ. ಬಳಿಕ ಇಬ್ಬರಿಗೂ ತಪ್ಪಿನ ಅರಿವಾಗಿ ಐದು ವರ್ಷಗಳ ಬಳಿಕ ಮತ್ತೆ ಒಂದಾಗಲು ನಿರ್ಧರಿಸಿ ಮರು ಮದುವೆಯಾಗಿದ್ದಾರೆ.

ವಿಚ್ಛೇದನದ ಬಳಿಕ ವಿನಯ್ ಮತ್ತು ಪತ್ನಿ ಬೇರೆಬೇರೆಯಾಗಿ ವಾಸ ಮಾಡಲು ಶುರು ಮಾಡಿದ್ದರು. ಪತ್ನಿಗೆ ವಿನಯ್ ಮೇಲೆ ಇನ್ನೂ ಪ್ರೀತಿ ಇತ್ತು. ಒಂದು ಬಾರಿ ವಿನಯ್‌ಗೆ ಹೃದಯಾಘಾತವಾಗಿದೆ. ಸುದ್ದಿ ತಿಳಿದು ಬಂದ ಮಾಜಿ ಪತ್ನಿ ವಿನಯ್ ಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆದು ಆತ ಐಸಿಯುವಿನಿಂದ ಮನೆಗೆ ಬಂದು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಜೊತೆ ಇದ್ದು ಆತನ ಸೇವೆ ಮಾಡಿದ್ದಾಳೆ. ವಿನಯ್ ಗೆ ಆದ ಹೃದಯಾಘಾತ ಇಬ್ಬರನ್ನು ಮತ್ತೆ ಒಂದಾಗುವಂತೆ ಮಾಡಿದೆ.

ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿನಯ್ ಮತ್ತೆ ಮಾಜಿ ಪತ್ನಿಯ ಕೈ ಹಿಡಿದು ಎರಡನೇ ಮದುವೆಯಾಗಿದ್ದಾನೆ. ಈ ಮದುವೆ ನೋಂದಣಿಯಾಗಿದ್ದರಿಂದ ವಿಚ್ಛೇದನದ ತೀರ್ಪನ್ನು ರದ್ದುಗೊಳಿಸಲಾಗಿದೆ.

Related post

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…
ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ..?

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ…

ನ್ಯೂಸ್ ಆರೋ: ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕೆಕೆಆರ್…
17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ ನಿರೂಪಕಿ ಅನುಪಮಾ ಗೌಡ!

17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ…

ನ್ಯೂಸ್ ಆರೋ: ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ತಮ್ಮ ಕೆಂಪು ಬಣ್ಣದ ಥಾರ್ ಜೀಪ್ ಮಾರಾಟ ಮಾಡಿದ್ದಾರೆ. ಈಗ ಐಷಾರಾಮಿ ಬೆಂಜ್ ಖರೀದಿಸಲು ಕಾರಣ ರಿವೀಲ್ ಮಾಡಿದ್ದಾರೆ.…

Leave a Reply

Your email address will not be published. Required fields are marked *