ಈ ಗಾಯಕಿ ತ್ವಚೆ ಸೌಂದರ್ಯಕ್ಕಾಗಿ ಎದೆಹಾಲು ಬಳಸುತ್ತಾರಂತೆ..!! – ನಿಜಕ್ಕೂ‌ ಎದೆಹಾಲಿನ ಬಳಕೆ ಉತ್ತಮವೇ..!?

ಈ ಗಾಯಕಿ ತ್ವಚೆ ಸೌಂದರ್ಯಕ್ಕಾಗಿ ಎದೆಹಾಲು ಬಳಸುತ್ತಾರಂತೆ..!! – ನಿಜಕ್ಕೂ‌ ಎದೆಹಾಲಿನ ಬಳಕೆ ಉತ್ತಮವೇ..!?

ನ್ಯೂಸ್ ಆ್ಯರೋ‌ : ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಆದ್ದರಿಂದಲೇ ಮಕ್ಕಳಿಗೆ ಆರು ತಿಂಗಳ ವರೆಗೆ ಎದೆಹಾಲು ಹೊರತು ಬೇರೆ ಆಹಾರ ನೀಡಬಾರದು ಎನ್ನುತ್ತಾರೆ ವೈದ್ಯರು. ಇದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದೀಗ ಖ್ಯಾತ ಅಮೇರಿಕನ್ ಗಾಯಕಿ ಹಾಲ್ಸೆ ಎದೆಹಾಲು ಬಳಸಿ ತ್ವಚೆ ಸೌಂದರ್ಯ ಹೆಚ್ಚಿಸಬಹುದು ಎಂದಿದ್ದಾರೆ. ಅದರ ಕುರಿತಾದ ವಿವರ ಇಲ್ಲಿದೆ.

1994ರಲ್ಲಿ ಅಮೇರಿಕಾದಲ್ಲಿ ಹಾಲ್ಸೆ ಜನಿಸಿದರು. ಇತ್ತೀಚೆಗೆ ಅವರು ಸಂದರ್ಶನದಲ್ಲಿ ”ನಾನು ತ್ವಚೆ ಸೌಂದರ್ಯ ಹೆಚ್ಚಿಸಲು ಎದೆಹಾಲು ಉಪಯೋಗಿಸುತ್ತೇನೆ” ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ನ್ಯಾಷನಲ್‌ ಲೈಬ್ರರಿ ಆಫ್‌ ಮೆಡಿಸನ್ ಪ್ರಕಾರ ಎದೆಹಾಲನ್ನು ಹಲವು ತ್ವಚೆ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುವುದು. ಕೆಲವರು ಮಗುವಿನ ಮೈಯಲ್ಲಿ ಗುಳ್ಳೆಗಳು ಎದ್ದರೆ ಎದೆ ಹಾಲು ಹಚ್ಚುತ್ತಾರೆ. ಡಯಾಪರ್‌ ರ‍್ಯಾಶಶ್‌ಗೆ ಎದೆಹಾಲನ್ನು ಹಚ್ಚಿದರೆ ಬೇಗನೆ ಗುಣಮುಖವಾಗುತ್ತದೆ. ಮೊಡವೆ ನಿವಾರಣೆಗೂ ಎದೆಹಾಲು ಬಳಸುವವರು ಇದ್ದಾರೆ.

ಮಗುವಿನ ಮೇಲೆ ಅಡ್ಡ ಪರಿಣಾಮ
ಹಾಲ್ಸೆ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಎದೆಹಾಲನ್ನು ತ್ವಚೆ ರಕ್ಷಣೆಗೆ ಬಳಸಲಾರಂಭಿಸಿದರೆ ಮಗುವಿಗೆ ಸಾಕಷ್ಟು ಹಾಲು ಸಿಗದಂತಾಗುವುದು, ಮಗುವಿನ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ ಎನ್ನುವುದು ಅವರ ವಾದ.

ದುಷ್ಪರಿಣಾಮ

ಸರಿಯಾದ ಶುಚಿತ್ವ ವಿಧಾನವನ್ನು ಬಳಸದೆ ಎದೆಹಾಲನ್ನು ಮುಖಕ್ಕೆ ಹಚ್ಚಿದರೆ ಬ್ಯಾಕ್ಟಿರಿಯಾ ಸೋಂಕು ಉಂಟಾಗಬಹುದು, ಮಾತ್ರವಲ್ಲ ಕೆಲವರಿಗೆ ಅಲರ್ಜಿ ಉಂಟಾಗಿ ಊತ, ತುರಿಕೆ ಉಂಟಾಗುತ್ತದೆ ಎಂದು ಎಚ್ಚರಿಸುತ್ತಾರೆ ತಜ್ಞರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *