ಮೇ.1 ರಿಂದ ಈ‌ ನಿಯಮಗಳು ಬದಲಾಗಲಿದೆ – ಪ್ರತಿಯೊಬ್ಬನೂ ತಿಳಿಯಲೇ ಬೇಕಾದ ಸಂಗತಿ ಇಲ್ಲಿವೆ..

ಮೇ.1 ರಿಂದ ಈ‌ ನಿಯಮಗಳು ಬದಲಾಗಲಿದೆ – ಪ್ರತಿಯೊಬ್ಬನೂ ತಿಳಿಯಲೇ ಬೇಕಾದ ಸಂಗತಿ ಇಲ್ಲಿವೆ..

ನ್ಯೂಸ್ ಆ್ಯರೋ : 2023ರ ಏಪ್ರಿಲ್ ತಿಂಗಳು ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇದರೊಂದಿಗೆ ಕೆಲವು‌ ಪ್ರಮುಖ ನಿಯಮಗಳು ಕೂಡ ಬದಲಾಗಲಿದ್ದು, ಗ್ರಾಹಕರು ಇವುಗಳನ್ನು ತಿಳಿಯಲೇಬೇಕಾಗಿದೆ. ಮುಖ್ಯವಾಗಿ ಜಿ.ಎಸ್.ಟಿ, ಬ್ಯಾಟರಿ ಚಾಲಿತ ವಾಹನ, ಮ್ಯೂಚುವಲ್ ಫಂಡ್, ಬ್ಯಾಂಕ್ ವಹಿವಾಟು, ಎಲ್.ಪಿ.ಜಿ ಸಿಲಿಂಡರ್ ಬೆಲೆ ಮತ್ತು ಷೇರು ಮಾರುಕಟ್ಟೆಗೆ ಸಂಬಂಧಿಸಿದ ಕೆಲವು ಬದಲಾವಣೆ ಸಧ್ಯದಲ್ಲೇ ಆಗಲಿದೆ. ಇದು ಸಾರ್ವಜನಿಕರ ಆರ್ಥಿಕತೆಯ ಮೇಲೂ ಪರಿಣಾಮ ಬೀಳಲಿದ್ದು, ಯಾವ ಕ್ಷೇತ್ರದಲ್ಲಿ, ಏನು ಬದಲಾವಣೆಯಾಗಲಿದೆ ಎಂಬುದನ್ನು ನೋಡೋಣ ಬನ್ನಿ.

ಮ್ಯೂಚುವಲ್ ಫಂಡ್ ಬದಲಾವಣೆಗಳು?

ಮೇ.1 ರಿಂದ ಅನ್ವಯವಾಗುವಂತೆ ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್ ಗಳ ನಿಯಮಗಳಲ್ಲಿ ಪ್ರಮುಖ ಬದಲಾವಣೆಯಾಗಲಿದೆ. ಇದನ್ನು ಮಾರುಕಟ್ಟೆ ಸ್ನೇಹಿಯಾಗಿಸಲು, ಸೆಬಿ ನೂತನ ಬದಲಾವಣೆಯನ್ನು‌ ಬಯಸುತ್ತಿದೆ. ಹಾಗಾಗಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ‌ ಮಾಡಲು ಬಳಸುವ ವ್ಯಾಲೆಟ್ ಆರ್.ಬಿ.ಐ ನ ಕೆವೈಸಿ ಪಡೆಯಬೇಕಾಗುತ್ತದೆ.

ಜಿ.ಎಸ್.ಟಿ ನಿಯಮದ ಪ್ರಮುಖ ಬದಲಾವಣೆ?

ಮೇ.1 ರಿಂದ ಜಿ.ಎಸ್.ಟಿ ನಿಯಮದಲ್ಲೂ ಪ್ರಮುಖ ಬದಲಾವಣೆಗಳು ಕಂಡುಬರಲಿದೆ. ವರ್ಷಗಳು ಉರುಳಿದಂತೆ ವ್ಯವಹಾರದಲ್ಲೂ ಸಾಕಷ್ಟು ಬದಲಾವಣೆಯ ಅಗತ್ಯವಿರುತ್ತ
ದೆ. ಆ ಹಿನ್ನಲೆಯಲ್ಲಿ ಯಾವುದೇ ವಹಿವಾಟಿನ ಸ್ವೀಕೃತಿಯನ್ನು‌ ಇನ್ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ 7 ದಿನದೊಳಗೆ ಅಪ್ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.

ಬ್ಯಾಟರಿ ಚಾಲಿತ ವಾಹನಗಳ ನಿಯಮದಲ್ಲಿ ಬದಲಾವಣೆ?

ಮೇ.1 ರಿಂದ ಪ್ರಮುಖವಾಗಿ ಎಲೆಕ್ಟ್ರಿಕಲ್ ವಾಹನ ಕ್ಷೇತ್ರದಲ್ಲೂ ಕೇಂದ್ರ ಸರ್ಕಾರ ಬದಲಾವಣೆ ತರಲು ನಿರ್ಧರಿಸಿದೆ‌. ಆ ಪ್ರಕಾರ ಮುಂದಿನ ದಿನಗಳಲ್ಲಿ ಈ ವಾಹನಗಳಿಗೆ ಯಾವುದೇ ಯಾವುದೇ ಪರವಾನಗಿ ಶುಲ್ಕ ವಿಧಿಸುವುದಿಲ್ಲ. ಜೊತೆಗೆ ಈ ನಿಯಮಗಳಡಿ ಎಥೆನಾಲ್, ಮೆಥೆನಾಲ್ ಮತ್ತು ಎಲೆಕ್ಟ್ರಿಕ್ ಮೂಲಕ ಚಲಿಸುವ ವಾಹನಗಳಿಗೆ ಪರಿಹಾರ ಲಭಿಸಲಿದೆ.

ಎಟಿಎಂ ವ್ಯವಾಹಕ್ಕೆ ಯಾವುದೇ ಶುಲ್ಕವಿರುವುದು!

ಹೌದು, ಮೇ.1 ರಿಂದ ಜಾರಿಯಾಗುವ ಹೊಸ ನಿಯಮಗಳ ಪ್ರಕಾರ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೇ ತಿಂಗಳ ಪ್ರಾರಂಭದಿಂದ ಈ ನಿಯಮ ಜಾರಿ ಮಾಡಲಿದೆ. ಖಾತೆಯಲ್ಲಿ ಹಣವಿಲ್ಲದಿದ್ದರೆ, ಎಟಿಎಂ ವ್ಯವಹಾರ ನಡೆಸುವ ವೇಳೆ ಶುಲ್ಕ ಪಾವತಿಸಬೇಕಾಗುತ್ತದೆ. ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ, ಎಟಿಎಂ ವ್ಯವಹಾರ ಪೂರ್ಣಗೊಳ್ಳದಿದ್ದರೂ ಕೂಡ ನೀವು 10 ರೂ ಜಿ.ಎಸ್‌.ಟಿ ಪಾವತಿಸುವುದು ಕಡ್ಡಾಯವಾಗಿರಲಿದೆ.

ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುವ ಸಾಧ್ಯತೆ!

ಈಗಾಗಲೇ ಜನರು ಗ್ಯಾಸ್ ಹಾಗೂ ತೈಲೋತ್ಪನ್ನಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಆದರೆ ಮೇ.1 ರಿಂದ ಮತ್ತೆ ದರ ಹೆಚ್ಚಳವಾಗುವ ಸಾಧ್ಯತೆಗಳಿದೆ‌ ಎಂದು ಮೂಲಗಳಿಂದ ತಿಳಿದು ಬಂದಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *