ಸಿಸಿಎಲ್ ನಲ್ಲಿ ಸ್ಯಾಂಡಲ್ ವುಡ್ ತಾರೆಗಳದ್ದೇ ಹವಾ‌ – ಉಳಿದ ತಂಡಗಳಿಗಿಂತ ಬುಲ್ಡೋಜರ್ಸ್ ಎಷ್ಟು ಮುಂದಿದೆ ಗೊತ್ತಾ..!?

ಸಿಸಿಎಲ್ ನಲ್ಲಿ ಸ್ಯಾಂಡಲ್ ವುಡ್ ತಾರೆಗಳದ್ದೇ ಹವಾ‌ – ಉಳಿದ ತಂಡಗಳಿಗಿಂತ ಬುಲ್ಡೋಜರ್ಸ್ ಎಷ್ಟು ಮುಂದಿದೆ ಗೊತ್ತಾ..!?

ನ್ಯೂಸ್ ಆ್ಯರೋ : ಈ ಬಾರಿಯ ಸಂಪೂರ್ಣ ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಇದುವರೆಗೂ ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌, ಚೆನ್ನೈ ರೈನೋಸ್‌ ತಂಡಗಳೊಂದಿಗೆ ಆಡಿದ್ದು, ಈ ಮೂರು ಪಂದ್ಯಗಳಲ್ಲೂ ರೋಚಕ ಗೆಲುವು ಸಾಧಿಸಿ 6 ಪಾಯಿಂಟ್‌ಗಳೊಂದಿಗೆ ಸಿಸಿಎಲ್‌ 2023 ಮ್ಯಾಚ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

ಫೆಬ್ರವರಿ 18 ರಿಂದ ಆರಂಭವಾಗಿರುವ ಸೆಲೆಬ್ರಿಟಿ

ಕ್ರಿಕೆಟ್‌ ಲೀಗ್‌ ಪಂದ್ಯಗಳು ರೋಚಕವಾಗಿದ್ದು ಸದ್ಯಕ್ಕೆ ಕರ್ನಾಟಕ ಬುಲ್ಡೋಜರ್ಸ್‌ ತಂಡ ಮೊದಲ ಸ್ಥಾನ ಏರಿ ನಿಂತಿದೆ. ಶನಿವಾರ (ಮಾರ್ಚ್‌ 4) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೂಡಾ ಕರ್ನಾಟಕ ಬುಲ್ಡೋಜರ್ಸ್‌, ಚೆನ್ನೈ ರೈನೋಸ್‌ ವಿರುದ್ಧ ಗೆಲುಗು ಸಾಧಿಸಿದೆ.

ಅಗ್ರಸ್ಥಾನದಲ್ಲಿ ಕನ್ನಡಿಗರು

ಕರ್ನಾಟಕ ಬುಲ್ಡೋಜರ್ಸ್‌ ಇದುವರೆಗೂ ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌, ಚೆನ್ನೈ ರೈನೋಸ್‌ ತಂಡಗಳೊಂದಿಗೆ ಆಡಿದ್ದು, ಈ ಮೂರು ಪಂದ್ಯಗಳಲ್ಲೂ ರೋಚಕ ಗೆಲುವು ಸಾಧಿಸಿ 6 ಪಾಯಿಂಟ್‌ಗಳೊಂದಿಗೆ ಸಿಸಿಎಲ್‌ 2023 ಮ್ಯಾಚ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

ಆಡಿದ 2 ಪಂದ್ಯಗಳಲ್ಲೂ ಗೆಲುವು ಕಂಡಿರುವ ಭೋಜ್‌ಪುರಿ ದಬಾಂಗ್ಸ್‌ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳಲ್ಲಿ ಎರಡು ಬಾರಿ ಗೆದ್ದಿರುವ ತೆಲುಗು ವಾರಿಯರ್ಸ್‌ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಬಾರಿ ಮಾತ್ರ ಗೆಲುಗು ಸಾಧಿಸಿರುವ ಚೆನ್ನೈ ರೈನೋಸ್‌ 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್‌ ದಿ ಶೇರ್ಸ್‌, ಮುಂಬೈ ಹೀರೋಸ್‌, ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌ ಕ್ರಮವಾಗಿ 5,6,7 ಹಾಗೂ 8ನೇ ಸ್ಥಾನದಲ್ಲಿದೆ.

ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಕಳೆದ ಬಾರಿ ಅದ್ದೂರಿಯಾಗಿ ಆರಂಭಗೊಂಡಿದ್ದ ಟಿಪಿಎಲ್ ಇದೀಗ ಸೀಸನ್ -2ಕ್ಕೆ ರೆಡಿಯಾಗಿದೆ. ಮಾರ್ಚ್‌ನಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-2 ಆರಂಭವಾಗುತ್ತಿದೆ. ಸೀಸನ್ 2ಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಮಾರ್ಚ್ 12ರಿಂದ 15ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಇನ್ನೂ ಮೊದಲ ದಿನ ಬೆಂಗಾಲ್ ಟೈಗರ್ಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಗೆಲುವು ಸಾಧಿಸಿದೆ. ಬೆಂಗಳೂರು, ಜೈಪುರ್‌, ಹೈದರಾಬಾದ್‌, ರಾಯ್‌ಪುರ್‌, ಜೋಧ್‌ಪುರ್‌ ಹಾಗೂ ತಿರುವನಂತಪುರಂನಲ್ಲಿ ಪಂದ್ಯಗಳು ನಡೆಯಲಿವೆ. ಮಾರ್ಚ್‌ 19 ರಂದು ಫೈನಲ್‌ ನಡೆಯಲಿದೆ. ಕೊರೊನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸಿಸಿಎಲ್‌ ನಡೆದಿರಲಿಲ್ಲ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *