ಕಾಫಿ ಡೇ ಸಂಸ್ಥಾಪಕ ದಿ.ಸಿದ್ಧಾರ್ಥ್ ಅವರ ಜಮೀನು 700 ಕೋಟಿಗೆ ಖರೀದಿ ಪ್ರಸ್ತಾಪ – ಇದು ಅರಣ್ಯ ಇಲಾಖೆಯ ಹುನ್ನಾರ ಎಂದ ಪರಿಸರವಾದಿಗಳು : ಯಾಕ್ ಗೊತ್ತಾ…!?
- ವಾಣಿಜ್ಯ ಸುದ್ದಿ
- February 21, 2023
- No Comment
- 237
ನ್ಯೂಸ್ ಆ್ಯರೋ : ವರ್ಷಗಳ ಹಿಂದೆ ಉದ್ಯಮದಿಂದ ಆದ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ, ಔದ್ಯೋಗಿಕ ಕ್ಷೇತ್ರದ ದಿಗ್ಗಜ ದಿ.ಸಿದ್ಧಾರ್ಥ ಅವರಿಗೆ ಸೇರಿದ ಜಮೀನು ಬರೋಬ್ಬರಿ 708 ಕೋಟಿಗೆ ಖರೀದಿ ಮಾಡಲು ಅರಣ್ಯ ಇಲಾಖೆ ಪ್ರಸ್ತಾಪ ಮುಂದಿಟ್ಟಿದೆ ಎಂಬ ಮಾತುಗಳು ಕೇಳಿಬಂದಿದೆ.
ವಿ.ಜಿ.ಸಿದ್ದಾರ್ಥ ಅವರಿಗೆ ಸೇರಿದ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ 4,430 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಕರ್ನಾಟಕ ಅರಣ್ಯ ಇಲಾಖೆ ಪ್ರಸ್ತಾವ ಸಿದ್ಧಪಡಿಸಿದ್ದು, ಸದ್ಯದಲ್ಲೇ ಪ್ರಕ್ರಿಯೇ ಆರಂಭವಾಗಲಿದೆ ಎನ್ನಲಾಗಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೆಲ ಪರಿಸರ ವಾದಿಗಳು, ‘ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸಿದ್ಧಾರ್ಥ ಕುಟುಂಬವನ್ನು ಸಾಲದಿಂದ ಪಾರು ಮಾಡಲು ಅರಣ್ಯ ಇಲಾಖೆ ಈ ತಂತ್ರ ಮಾಡಿದೆ’ ಎಂದು ಆರೋಪಿಸಿದ್ದಾರೆ.
ಸಿದ್ಧಾರ್ಥ ಅವರಿಗೆ ಸೇರಿದ ಜಮೀನಿನ ಪ್ರತಿ ಎಕರೆಗೆ ₹16 ಲಕ್ಷದಂತೆ ಭೂಸ್ವಾಧೀನದ ಒಟ್ಟು ಮೊತ್ತ ₹ 708 ಕೋಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಸಿದ್ದಾರ್ಥ ಅವರ ಕುಟುಂಬವನ್ನು ಸಾಲದ ಸುಳಿಯಿಂದ ಪಾರು ಮಾಡುವ ಉದ್ದೇಶ ಈ ಪ್ರಸ್ತಾವದ ಹಿಂದಿದೆ ಎಂದು ಹೇಳಲಾಗಿದೆ.
ಈ ಬಗ್ಗೆ 2020ರ ಫೆ.14ರಂದು ಈ ಪ್ರಸ್ತಾವ ಸಿದ್ಧವಾಗಿದೆ. ಹುಲಿ ಸಂರಕ್ಷಿತ ಪ್ರದೇಶದ ಪಕ್ಕದ ತಣಿಗೆಬೈಲು ಹಾಗೂ ಮುತ್ತೋಡಿಯ ಜಮೀನು ಮಾರಾಟ ಪ್ರಕ್ರಿಯೆಯನ್ನು ಕಾಫಿ ಡೇ ಗ್ರೂಪ್ನವರು ಆಗಲೇ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.