ಚುನಾವಣಾ ಹೊಸ್ತಿಲಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಬ್ರೇನ್ ವಾಷ್ – ಭಾರತದಲ್ಲಿ ನಡೆಯುತ್ತಿದೆ ನಕಲಿ ಆನ್ಲೈನ್ ಪ್ರಚಾರ…!!

ಚುನಾವಣಾ ಹೊಸ್ತಿಲಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಬ್ರೇನ್ ವಾಷ್ – ಭಾರತದಲ್ಲಿ ನಡೆಯುತ್ತಿದೆ ನಕಲಿ ಆನ್ಲೈನ್ ಪ್ರಚಾರ…!!

ನ್ಯೂಸ್ ಆ್ಯರೋ : ದೇಶ ಚುನಾವಣಾ ಹೊಸ್ತಿಲ್ಲಿರುವಾಗಲೇ ಬ್ರಿಟನ್ನಿನ ‘ದಿ ಗಾರ್ಡಿಯನ್’ ಪತ್ರಿಕೆಯು ಒಂದು ಶಾಕಿಂಗ್ ಸುದ್ದಿಯೊಂದನ್ನು‌ ಹೊರ ಹಾಕಿದೆ. ಇಸ್ರೇಲ್ ಮೂಲದ ಸಾಫ್ಟ್‌ವೇರನ್ನು ಬಳಸಿಕೊಂಡು ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನಕಲಿ ಅಭಿಯಾನ‌ ಹಾಗೂ ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ ಎಂಬ ಆತಂಕಕಾರಿ ಅಂಶವನ್ನು ಈ ವರದಿ ಜಗಜ್ಜಾಹಿರುಗೊಳಿಸಿದೆ.

ಈ ವರದಿಯ ಪ್ರಕಾರ, ವ್ಯಕ್ತಿ ಸಂಸ್ಥೆ, ಪಕ್ಷ, ಅಥವಾ ಸರ್ಕಾರದ ಪರವಾಗಿದ್ದುಕೊಂಡು ಇಲ್ಲವೇ ಅದನ್ನು ಸಂಪೂರ್ಣವಾಗಿ ವಿರೋಧಿಸಿಕೊಂಡು ಬರುವ ರೀತಿಯಲ್ಲಿ ಆನ್ಲೈನ್ ಮೂಲಕ ವ್ಯವಸ್ಥಿತವಾಗಿ ಪ್ರಚಾರ ನಡೆಸಲಾಗುತ್ತಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಒಟ್ಟು 30ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಈ ರೀತಿ ಮತದಾರರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪ್ರಭಾವ ಬೀರುವಲ್ಲಿ ಇಸ್ರೇಲ್‌ನ ಒಂದು ತಂಡ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಅಲ್ಲಿ ಸೇನೆಯ ಮಾಜಿ ಯೋಧ ಟಲ್ ಹಾನಾನ್ ಎಂಬಾತ ‘ಜಾರ್ಜ್‘ ಎಂಬ ಗುಪ್ತ ನಾಮದಲ್ಲಿ ಈ ತಂಡವನ್ನು ಮುನ್ನಡೆಸುತ್ತಿದ್ದು, ಇದಕ್ಕಾಗಿ ‘ಅಡ್ವಾನ್ಸಡ್ ಇಂಪ್ಯಾಕ್ಟ್ ಮೀಡಿಯಾ ಸೆಲ್ಯೂಷನ್ಸ್’ ಎಂಬ ಸಾಫ್ಟ್‌ವೇರ್ ಬಳಸುವ ಮಾಹಿತಿಯೂ ಹೊರಬಿದ್ದಿದೆ‌.

ಡೇಂಜರಸ್ ಡಾರ್ಕ್ ವೆಬ್ ಏನೇನು ಮಾಡುತ್ತಿದೆ ಗೊತ್ತಾ?

‘ಜಾರ್ಜ್’ ಹೆಸರಿನ ತಂಡವು ಆನ್ಲೈನ್ ನಲ್ಲಿ ಹ್ಯಾಕಿಂಗ್ ಹಾಗೂ ದುರುದ್ದೇಶಪೂರಿತ ಮಾಹಿತಿ ಪ್ರಸಾರದ ಜೊತೆಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಆರೋಪ ವ್ಯಕ್ತವಾಗಿದೆ‌. ಮುಖ್ಯವಾಗಿ ಈ ತಂಡವು ಭಾರತ, ಬ್ರಿಟನ್, ಅಮೆರಿಕಾ, ಕೆನಡಾ, ಮೆಕ್ಸಿಕೋ, ಜರ್ಮನಿ, ಯುಎಇ, ಸೇರಿ ಒಟ್ಟು 30 ದೇಶಗಳಲ್ಲಿನ ವಾಣಿಜ್ಯ ವಿವಾದಗಳು ಮತ್ತು ಚುನಾವಣೆಯ ಮೇಲೆ ಪ್ರಭಾವ ಬೀರುವಂತಹ ಅಂಶಗಳನ್ನು ಬಿತ್ತರಿಸಿದೆ ಎಂಬುದು ಬಯಲಾಗಿದೆ. ಡಾರ್ಕ್ ವೆಬ್ ಮೂಲಕ ರಾಷ್ಟ್ರದ್ರೋಹಿ ಕೆಲಸಗಳನ್ನು‌ ಮಾಡುತ್ತಿರುವ ಜಾರ್ಜ್ ಹೆಸರಿನ ತಂಡದ ಪತ್ತೆಗಾಗಿ ಅಮೆರಿಕದ ಸೈಬರ್ ಸೆಕ್ಯುರಿಟಿ ತಜ್ಞರು ಈಗಾಗಲೇ ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ‌.

ಈ ಹಿಂದೆಯೂ ಹೀಗೆಯೇ ಆಗಿತ್ತು!

ಇಸ್ರೇಲ್ ಮೂಲದ ಎನ್ಎಸ್ಒ ಅಮೂಹ ಅಭಿವೃದ್ಧಿ ಪಡಿಸಿದ ‘ಪೆಗಾಸಸ್ ಸ್ಪೈವೇರ್’ ಸಾಫ್ಟ್‌ವೇರ್ ಬಳಸಿ ಕೇಂದ್ರ ಸರ್ಕಾರವೂ ಭಾರದ ಗಣ್ಯ ವ್ಯಕ್ತಿಗಳ ಮೊಬೈಲ್ ಗಳನ್ನು ಹ್ಯಾಕ್ ಮಾಡಿ ಡೇಟಾ ಕಳವು ಮಾಡಲು ಪ್ರಯತ್ನಿಸಿತ್ತು. ಜೊತೆಗೆ ಭಾರತೀಯ ಪ್ರಮುಖರ ಚಲನವಲನಗಳ ಮೇಲೆ ನಿಗಾ ಇಟ್ಟಿದೆ ಎಂಬ ವರದಿಯೂ ಈ ಹಿಂದೆ ಭಾರೀ ಸಂಚಲನ ಸೃಷ್ಟಿಸಿತ್ತು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *