ಚಂದನವನಕ್ಕೆ ಚಂದದ ಗೊಂಬೆಯ ಆಗಮನ – ಯಾರೀ ಸುಂದರಿ? ಇವರು ಶೃತಿ ತಂಗಿ ಮಗಳು ಅನ್ನೋದು ನಿಮಗೆ ಗೊತ್ತಾ?

ಚಂದನವನಕ್ಕೆ ಚಂದದ ಗೊಂಬೆಯ ಆಗಮನ – ಯಾರೀ ಸುಂದರಿ? ಇವರು ಶೃತಿ ತಂಗಿ ಮಗಳು ಅನ್ನೋದು ನಿಮಗೆ ಗೊತ್ತಾ?

ನ್ಯೂಸ್ ಆ್ಯರೋ : ಶೃತಿ ಹಾಗೂ ಶರಣ್ ಕನ್ನಡ ಚಿತ್ರಂಗದಲ್ಲಿ ಮೂಡಿಸಿದ ಛಾಪು ಅಂತಿಂತದ್ದಲ್ಲ. ಶರಣ್ ತನ್ನ ಕಾಮಿಡಿಯ‌ ಮೂಲ‌ಕ ಹಾಗೂ ನಟಿ ಶೃತಿ ತನ್ನ ಅದ್ಭುತ ನಟನೆಯ ಮೂಲಕ ಮನೆಮಾತಾಗಿದ್ದಾರೆ. ಇದೀಗ, ಈ ಕುಟುಂಬದ ಮೂರನೇ ತಲೆಮಾರು ಕನ್ನಡ ಚಿತ್ರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದೆ.

ಹೌದು, ನಟಿ ಶೃತಿ ಅವರ ಸಹೋದರಿ ಉಷಾ ಕೃಷ್ಣ ಅವರ ಸುಪುತ್ರಿ ಕೀರ್ತಿ ಕೃಷ್ಣ ಚಂದನವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈ ಹಿಂದೆಯೂ ಹಲವಾರು ನಿರ್ದೇಶಕರು, ನಟರು ಇವರನ್ನು ಚಿತ್ರಂಗಕ್ಕೆ ಕರೆತನ್ನಿ‌ ಎಂದು ಕೇಳಿಕೊಂಡಿದ್ದರು. ಇದೀಗ ಅವರು ಅಧಿಕೃತವಾಗಿ ಚಿತ್ರರಂಗಕ್ಕೆ ಆಗಮಸುತ್ತಿದ್ದಾರೆ. ಕನ್ನಡದಲ್ಲಿ ಬರುತ್ತಿರುವ ಹೊಸ ಚಿತ್ರ ‘ಧರಣಿ’ ಮೂಲಕ ಕೀರ್ತಿ ಕೃಷ್ಣ ಬಣ್ಣ ಹಚ್ಚುತ್ತಿದ್ದಾರೆ. ಮನೋಜ್ ನಟಿಸುತ್ತಿರುವ ಈ ಚಿತ್ರ ಕೋಳಿ ಅಂಕವನ್ನು ಪ್ರತಿನಿಧಿಸಲಿದೆ ಎನ್ನಲಾಗಿದೆ‌.

ಈ ಹಿಂದೆ, ಅಂದರೆ ಹನ್ನೆರಡು ವರ್ಷಗಳ ಹಿಂದೆ ಶೃತಿ‌ ಹಾಗೂ ರಾಮ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ‘ನಾಗ ಶಕ್ತಿ’ ಚಿತ್ರದಲ್ಲಿ ಕೀರ್ತಿ ಕೃಷ್ಣ ಬಾಲ ಕಲಾವಿದೆಯಾಗಿ ನಟಿಸಿದ್ದರು. ಬಿಬಿಎ ಪೂರ್ಣಗೊಳಿಸಿರುವ ಕೀರ್ತಿ ಕೃಷ್ಣ ಅವರಿಗೆ ಚಿತ್ರಗಳಲ್ಲಿ ನಟಿಸುವ ಬಯಕೆ ಇತ್ತಾದರು. ಒಳ್ಳೆಯ ಕತೆಗಾಗಿ ಕಾಯುತ್ತಿದ್ದರಂತೆ. ಸದ್ಯ, ‘ಧರಣಿ’ ಚಿತ್ರದ ಕತೆ ಕೀರ್ತಿ ಅವರಿಗಷ್ಟೇ ಅಲ್ಲದೇ ಮನೆಯವರಿಗೂ ಬಹಳ ಇಷ್ಟವಾಗಿದೆಯಂತೆ. ಆ ಕಾರಣಕ್ಕೆ ಪೂರ್ಣಪ್ರಮಾಣದ ನಾಯಕಿಯಾಗಿ ಕೀರ್ತಿ ನಟಿಸುತ್ತಿದ್ದಾರೆ.

ಶೃತಿಯವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದೆ. ಸಹೋದರ ಶರಣ್ ಈಗಾಗಲೇ ಕನ್ನಡದ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಶೃತಿ ಅವರ ತಂದೆ ಕೃಷ್ಣ, ತಾಯಂದಿರಾದ ರಾಧಾ-ರುಕ್ಮಿಣಿ ಹಿರಿತೆರೆ ಹಾಗೂ ಕಿರುತೆರೆಗಳಲ್ಲಿ ನಟಿಸಿದ್ದಾರೆ. ಇದೀಗ, ಕೀರ್ತಿ ಕೃಷ್ಣ ಅವರು ಕೂಡ ಚಿತ್ರರಂಗದಲ್ಲಿ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ಇವರು‌ ನಟಿಸುತ್ತಿರುವ ಮೊದಲ ಚಿತ್ರ ‘ಧರಣಿ’ ಸಿನಿಮಾವನ್ನು ಸುಧೀರ್ ಶ್ಯಾನುಭೋಗ್ ನಿರ್ದೇಶನ‌ ಮಾಡುತ್ತಿದ್ದು, ಯಂಗ್ ಥಿಂಕರ್ಸ್ ಲಾಂಛನದಲ್ಲಿ ಉಮೇಶ್ ಹಾಗೂ ರಮೇಶ್ ಐತಾಳ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನುಳಿದ ವಿಷಯಗಳು ಇನ್ನಷ್ಟೇ ತಿಳಿಯಬೇಕಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *