ತಮಿಳು ನಿರ್ದೇಶರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಮುಂದಿನ‌ ಸಿನಿಮಾ‌ – ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್ ಕೊಡ್ತಾರಾ ರಾಕಿ ಬಾಯ್…!?

ತಮಿಳು ನಿರ್ದೇಶರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಮುಂದಿನ‌ ಸಿನಿಮಾ‌ – ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್ ಕೊಡ್ತಾರಾ ರಾಕಿ ಬಾಯ್…!?

ನ್ಯೂಸ್ ಆ್ಯರೋ : ರಾಕಿಂಗ್ ಸ್ಟಾರ್ ಯಶ್ ಸದ್ಯ ಇಡೀ ಭಾರತೀಯ ಚಿತ್ರರಂಗವನ್ನ ಆವರಿಸಿಕೊಂಡಿರುವ ಹೆಸರು. ದೇಶದ ಪ್ರಮುಖ ಚಿತ್ರರಂಗಗಳೆಲ್ಲ ಕೆಜಿಎಫ್ ರಾಕಿಯ ಮುಂದಿನ ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತಿದೆ. ಆದರೆ ಯಶ್ ಮಾತ್ರ ಎಲ್ಲೇ ಹೋದರು ಸಿನಿಮಾದ ಪ್ರಶ್ನೆ ಕೇಳಿದ ತಕ್ಷಣ ‘ಸಮಯ ಬಂದಾಗ ತಿಳಿಸೋಣ’ ಎನ್ನುತ್ತ ಮರೆಯಾಗುತ್ತಿದ್ದರು. ನಮಗೊಂದು ಸಿನಿಮಾ ಮಾಡಿಕೊಡಿ ಎನ್ನುತ್ತ ದೊಡ್ಡ ದೊಡ್ಡ ನಿರ್ದೇಶಕರು ಯಶ್ ಅವರಿಗೆ ದುಂಬಾಲು ಬಿದ್ದಿದ್ದರು ಆದರೆ ರಾಕಿ ಮಾತ್ರ ಯಾವುದಕ್ಕೂ ಕಿವಿ ಕೊಡುತ್ತಿರಲಿಲ್ಲ.

ಈ ಮಧ್ಯೆ ಯಶ್ ಅವರ ಮುಂದಿನ ಸಿನಿಮಾದ ಸುದ್ದಿ‌ ಸಿಕ್ಕಿದ್ದು, ಈ ಚಿತ್ರ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆಯಂತೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಇದರ ಹೊಣೆ ಹೊತ್ತಿದೆ ಎನ್ನಲಾಗುತ್ತಿದೆ.

ಯಶ್ ಮುಂದಿನ ಸಿನಿಮಾದ ನಿರ್ದೇಶಕನ ಬಗ್ಗೆ ಕೆಜಿಎಫ್ ಬಿಡುಗಡೆಯಾದಾಗಿನಿಂದ ಹಲವಾರು ಅಂತೆ ಕಂತೆಗಳು ಹರಿದಾಡುತ್ತಲೆ ಇತ್ತು. ಸದ್ಯದ ಸುದ್ದಿ ಪ್ರಕಾರ ರಾಕಿಂಗ್ ಸ್ಟಾರ್ ತಮಿಳು ನಿರ್ದೇಶಕರೊಂದಿಗೆ ಸಿನಿಮಾ ಮಾಡುತ್ತಿದ್ದಾರಂತೆ. ನಿರ್ದೇಶಕರು ಈಗಾಗಲೇ ಕಥೆ ಹೇಳಿದ್ದು ಯಶ್ ಅವರು ಮೆಚ್ಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿರ್ದೇಶಕರು ಯಾರು, ಅವರು ಈ ಹಿಂದೆ ಯಾವ ಸಿನಿಮಾಗಳನ್ನ ಮಾಡಿದ್ದಾರೆ ಈ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ.

ಈ ನಡುವೆ ಯಶ್ ಹಾಗೂ ನರ್ತನ್ ಕಾಂಬಿನೇಷನ್ ನಲ್ಲಿ ಸೆಟ್ಟೆರಲಿದೆ ಎನ್ನಲಾದ ಸಿನಿಮಾ‌ ಕತೆ ಏನಾಯ್ತು ಎನ್ನುವ ಪ್ರಶ್ನೆ ಸಿನಿ‌ ರಸಿಕರನ್ನು ಕಾಡುತ್ತಿದೆ. ಬಲ್ಲ ಮೂಲಗಳ ಪ್ರಕಾರ ನರ್ತನ್ ಅವರ ಕಥೆಯನ್ನು ಯಶ್ ರಿಜೆಕ್ಟ್ ಮಾಡಿದ್ದಾರಂತೆ. ಹಾಗಾಗಿ ನರ್ತನ್ ಯಶ್ ಅವರನ್ನು ಬಿಟ್ಟು ಟಾಲಿವುಡ್ ಕಡೆ ಮುಖ ತಿರುಗಿಸಿದ್ದಾರೆ ಎನ್ನುವ ಮಾತು ಗಾಂಧಿ ನಗರದ ತುಂಬ ಕೇಳಿ ಬರುತ್ತಿದೆ.

ಒಟ್ಟಾರೆಯಾಗಿ ಯಶ್ ಅವರ ಮುಂದಿನ‌ ಸಿನಿಮಾ‌ ಹುಟ್ಟುಹಬ್ಬಕ್ಕೆ ಘೋಷಣೆಯಾಗಲಿದೆಯಂತೆ. ಅದಕ್ಕಾಗಿ ರಾಕಿ ಹಾಗೂ ನಿರ್ದೇಶಕರ ತಂಡ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಯಶ್ ಆಪ್ತ ಮೂಲಗಳು ತಿಳಿಸಿವೆ. ಇದರೊಂದಿಗೆ ಯಶ್ ತಮ್ಮ ಮಗಳು ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ತೆರೆದು ಆ ಮೂಲಕವೇ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ.

ಆದರೆ ಇದ್ಯಾವುನ್ನೂ ರಾಕಿ ಮಾತ್ರ ಅಧಿಕೃತವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿಲ್ಲ. ಆದರೆ ಹುಟ್ಟುಹಬ್ಬದಂದು ಯಶ್ ಮುಂದಿನ‌ ಸಿನಿಮಾ ಘೋಷಣೆಯಾಗಬಹುದು ಎಂದು ದೇಶದೆಲ್ಲೆಡೆ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಅಭಿಮಾನಿಗಳಂತೂ ಹಬ್ಬವನ್ನೇ ಮಾಡಿಬಿಡಲಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *