ತಮಿಳು ನಿರ್ದೇಶರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಮುಂದಿನ‌ ಸಿನಿಮಾ‌ – ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್ ಕೊಡ್ತಾರಾ ರಾಕಿ ಬಾಯ್…!?

ತಮಿಳು ನಿರ್ದೇಶರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಮುಂದಿನ‌ ಸಿನಿಮಾ‌ – ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್ ಕೊಡ್ತಾರಾ ರಾಕಿ ಬಾಯ್…!?

ನ್ಯೂಸ್ ಆ್ಯರೋ : ರಾಕಿಂಗ್ ಸ್ಟಾರ್ ಯಶ್ ಸದ್ಯ ಇಡೀ ಭಾರತೀಯ ಚಿತ್ರರಂಗವನ್ನ ಆವರಿಸಿಕೊಂಡಿರುವ ಹೆಸರು. ದೇಶದ ಪ್ರಮುಖ ಚಿತ್ರರಂಗಗಳೆಲ್ಲ ಕೆಜಿಎಫ್ ರಾಕಿಯ ಮುಂದಿನ ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತಿದೆ. ಆದರೆ ಯಶ್ ಮಾತ್ರ ಎಲ್ಲೇ ಹೋದರು ಸಿನಿಮಾದ ಪ್ರಶ್ನೆ ಕೇಳಿದ ತಕ್ಷಣ ‘ಸಮಯ ಬಂದಾಗ ತಿಳಿಸೋಣ’ ಎನ್ನುತ್ತ ಮರೆಯಾಗುತ್ತಿದ್ದರು. ನಮಗೊಂದು ಸಿನಿಮಾ ಮಾಡಿಕೊಡಿ ಎನ್ನುತ್ತ ದೊಡ್ಡ ದೊಡ್ಡ ನಿರ್ದೇಶಕರು ಯಶ್ ಅವರಿಗೆ ದುಂಬಾಲು ಬಿದ್ದಿದ್ದರು ಆದರೆ ರಾಕಿ ಮಾತ್ರ ಯಾವುದಕ್ಕೂ ಕಿವಿ ಕೊಡುತ್ತಿರಲಿಲ್ಲ.

ಈ ಮಧ್ಯೆ ಯಶ್ ಅವರ ಮುಂದಿನ ಸಿನಿಮಾದ ಸುದ್ದಿ‌ ಸಿಕ್ಕಿದ್ದು, ಈ ಚಿತ್ರ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆಯಂತೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಇದರ ಹೊಣೆ ಹೊತ್ತಿದೆ ಎನ್ನಲಾಗುತ್ತಿದೆ.

ಯಶ್ ಮುಂದಿನ ಸಿನಿಮಾದ ನಿರ್ದೇಶಕನ ಬಗ್ಗೆ ಕೆಜಿಎಫ್ ಬಿಡುಗಡೆಯಾದಾಗಿನಿಂದ ಹಲವಾರು ಅಂತೆ ಕಂತೆಗಳು ಹರಿದಾಡುತ್ತಲೆ ಇತ್ತು. ಸದ್ಯದ ಸುದ್ದಿ ಪ್ರಕಾರ ರಾಕಿಂಗ್ ಸ್ಟಾರ್ ತಮಿಳು ನಿರ್ದೇಶಕರೊಂದಿಗೆ ಸಿನಿಮಾ ಮಾಡುತ್ತಿದ್ದಾರಂತೆ. ನಿರ್ದೇಶಕರು ಈಗಾಗಲೇ ಕಥೆ ಹೇಳಿದ್ದು ಯಶ್ ಅವರು ಮೆಚ್ಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿರ್ದೇಶಕರು ಯಾರು, ಅವರು ಈ ಹಿಂದೆ ಯಾವ ಸಿನಿಮಾಗಳನ್ನ ಮಾಡಿದ್ದಾರೆ ಈ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ.

ಈ ನಡುವೆ ಯಶ್ ಹಾಗೂ ನರ್ತನ್ ಕಾಂಬಿನೇಷನ್ ನಲ್ಲಿ ಸೆಟ್ಟೆರಲಿದೆ ಎನ್ನಲಾದ ಸಿನಿಮಾ‌ ಕತೆ ಏನಾಯ್ತು ಎನ್ನುವ ಪ್ರಶ್ನೆ ಸಿನಿ‌ ರಸಿಕರನ್ನು ಕಾಡುತ್ತಿದೆ. ಬಲ್ಲ ಮೂಲಗಳ ಪ್ರಕಾರ ನರ್ತನ್ ಅವರ ಕಥೆಯನ್ನು ಯಶ್ ರಿಜೆಕ್ಟ್ ಮಾಡಿದ್ದಾರಂತೆ. ಹಾಗಾಗಿ ನರ್ತನ್ ಯಶ್ ಅವರನ್ನು ಬಿಟ್ಟು ಟಾಲಿವುಡ್ ಕಡೆ ಮುಖ ತಿರುಗಿಸಿದ್ದಾರೆ ಎನ್ನುವ ಮಾತು ಗಾಂಧಿ ನಗರದ ತುಂಬ ಕೇಳಿ ಬರುತ್ತಿದೆ.

ಒಟ್ಟಾರೆಯಾಗಿ ಯಶ್ ಅವರ ಮುಂದಿನ‌ ಸಿನಿಮಾ‌ ಹುಟ್ಟುಹಬ್ಬಕ್ಕೆ ಘೋಷಣೆಯಾಗಲಿದೆಯಂತೆ. ಅದಕ್ಕಾಗಿ ರಾಕಿ ಹಾಗೂ ನಿರ್ದೇಶಕರ ತಂಡ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಯಶ್ ಆಪ್ತ ಮೂಲಗಳು ತಿಳಿಸಿವೆ. ಇದರೊಂದಿಗೆ ಯಶ್ ತಮ್ಮ ಮಗಳು ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ತೆರೆದು ಆ ಮೂಲಕವೇ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ.

ಆದರೆ ಇದ್ಯಾವುನ್ನೂ ರಾಕಿ ಮಾತ್ರ ಅಧಿಕೃತವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿಲ್ಲ. ಆದರೆ ಹುಟ್ಟುಹಬ್ಬದಂದು ಯಶ್ ಮುಂದಿನ‌ ಸಿನಿಮಾ ಘೋಷಣೆಯಾಗಬಹುದು ಎಂದು ದೇಶದೆಲ್ಲೆಡೆ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಅಭಿಮಾನಿಗಳಂತೂ ಹಬ್ಬವನ್ನೇ ಮಾಡಿಬಿಡಲಿದ್ದಾರೆ.

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *