ಅಪರಾಧಿಗಳ ಬೆನ್ನ ಹಿಂದೆ ಬೀಳಲಿದೆ ಎಐ ಕ್ಯಾಮರಾ – ಮುಖ ಮುಚ್ಚಿದರೂ, ಜನ ಸಂದಣಿಯಲ್ಲಿದ್ದರೂ ಅಪರಾಧಿ ವಶಕ್ಕೆ..!!

ಅಪರಾಧಿಗಳ ಬೆನ್ನ ಹಿಂದೆ ಬೀಳಲಿದೆ ಎಐ ಕ್ಯಾಮರಾ – ಮುಖ ಮುಚ್ಚಿದರೂ, ಜನ ಸಂದಣಿಯಲ್ಲಿದ್ದರೂ ಅಪರಾಧಿ ವಶಕ್ಕೆ..!!

ನ್ಯೂಸ್ ಆ್ಯರೋ‌ : ಅಪರಾಧಿಗಳು ಚಾಪೆ ಕೆಳಗೆ ತೂರಿದರೆ ಇದೀಗ ಪೊಲೀಸರು ರಂಗೋಲಿ ಕೆಳಗೆ ತೂರಲು ಮುಂದಾಗಿದ್ದಾರೆ. ಕಿಡಿಗೇಡಿಗಳು, ಆರೋಪಿಗಳನ್ನು ಪತ್ತೆಹಚ್ಚಲು ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಕ್ಯಾಮೆರಾ ಮೊರೆ ಹೋಗಲಾಗಿದೆ.

ಎಲ್ಲಿ?

ರಾಜಸ್ತಾನ ಪೋಲೀಸರು ಸದ್ಯ ಇಂತಹ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುವ ಮೂಲಕ ಗಮನ ಸೆಳೆದಿದ್ದಾರೆ. ಜನ ಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸಿ, ಮುಖ ಮರೆಮಾಚಿ ಓಡಾಡಿದರೂ ಈ ಕ್ಯಾಮರಾ ಅಪರಾಧಿಯನ್ನು ಪತ್ತೆಹಚ್ಚಲಿದೆ ಎನ್ನುವುದು ವಿಶೇಷ.

ಕಾರ್ಯವಿಧಾನ

ಸಾಮಾನ್ಯ ಕ್ಯಾಮೆರಾಗಳಿಗಿಂತ ಬಹಳ ಬಿನ್ನವಾಗಿ ಈ ಎಐ ಕ್ಯಾಮೆರಾಗಳು ಕಾರ್ಯ ನಿರ್ವಹಿಸಲಿವೆ. ಸಾಮಾನ್ಯ ಕ್ಯಾಮೆರಾ ಫೋಟೋವನ್ನಷ್ಟೇ ಸೆರೆ ಹಿಡಿದರೆ ಈ ಕ್ಯಾಮೆರಾ ಅದಕ್ಕಿಂತಲೂ ಹೆಚ್ಚಿನ ಕಾರ್ಯ ನಿರ್ವಹಿಸಲಿದೆ.

ಶಂಕಿತರ ಫೋಟೋ ಅಥವಾ ಸಿಸಿ ಟಿವಿಯಲ್ಲಿನ ಫೋಟೋಗಳನ್ನು, ಆರೋಪಿಗಳ ಚಿತ್ರಗಳನ್ನು ಎಐ ಆ್ಯಪ್ ನಲ್ಲಿ ಫೀಡ್ ಮಾಡಿದರೆ ಸಾಕು. ಈ ಕ್ಯಾಮೆರಾ ಆ ವ್ಯಕ್ತಿ ಎಷ್ಟು ಮರೆ ಮಾಚಿದರೂ, ಜನ ಸಂದಣಿ ಇರುವ ಪ್ರದೇಶದಲ್ಲಿ ಇದ್ದರೂ ಪತ್ತೆ ಹಚ್ಚಲಿದೆ. ಜನ ಸಂದಣಿ ಇರುವ ಪ್ರದೇಶದಲ್ಲೂ ಪ್ರತಿಯೊಬ್ಬರ ಮುಖವನ್ನು ಈ ಕ್ಯಾಮೆರಾ ಸ್ಕ್ಯಾನ್ ಮಾಡುವುದು ಇದಕ್ಕೆ ಕಾರಣ.

ಯಶಸ್ವಿ

ಸದ್ಯ ರಾಜಸ್ತಾನ ಪೋಲೀಸರು ಈ ಕ್ಯಾಮೆರಾವನ್ನು ಜೈಪುರದ ಗೋವಿಂದ ದೇವಜಿ ದೇವಸ್ಥಾನದ ಆವರಣದಲ್ಲಿ ಅಳವಡಿಸಿ ಸಫಲರಾಗಿದ್ದಾರೆ. 13 ಅಪರಾಧಿಗಳನ್ನು ಈ ವಿಶೇಷ ಕ್ಯಾಮೆರಾ ಪತ್ತೆ ಹಚ್ಚಿದೆ. ಈ ಪ್ರಯೋಗ ಸಫಲವಾಗಿರುವುದರಿಂದ ಇತರ ರಾಜ್ಯಗಳ ಪೊಲೀಸರೂ ಕೂಡ ಈ ತಂತ್ರಜ್ಞಾನ ಅಳವಡಿಕೆಗೆ ಆಸಕ್ತಿ ತೋರಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *