ಮದ್ಯ ಪ್ರಿಯರ ‘ಅಮಲು’ ಇಳಿಸಿದ ರಾಜ್ಯ ಸರಕಾರ – ಜು. 20 ರಿಂದ ಬೆಲೆ ಏರಿಕೆ, ಯಾವುದಕ್ಕೆಲ್ಲ ಎಷ್ಟು ಏರಿಕೆಯಾಗಿದೆ ಗೊತ್ತಾ?

ಮದ್ಯ ಪ್ರಿಯರ ‘ಅಮಲು’ ಇಳಿಸಿದ ರಾಜ್ಯ ಸರಕಾರ – ಜು. 20 ರಿಂದ ಬೆಲೆ ಏರಿಕೆ, ಯಾವುದಕ್ಕೆಲ್ಲ ಎಷ್ಟು ಏರಿಕೆಯಾಗಿದೆ ಗೊತ್ತಾ?

ನ್ಯೂಸ್ ಆ್ಯರೋ‌ : ಇತ್ತೀಚೆಗೆ ರಾಜ್ಯ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮದ್ಯ ದರ ಏರಿಸುವ ಕುರಿತು ಪ್ರಸ್ತಾವ ಮಂಡಿಸಿದ್ದರು. ಅದರಂತೆ ಮದ್ಯದ ಮೇಲಿನ (CM hikes excise duty) ಸುಂಕದ ಬೆಲೆ ಏರಿಕೆ ಜು. 20ರಿಂದ ಜಾರಿಗೆ (liquor prices to surge) ಬರಲಿದೆ.

ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ

ಮದ್ಯದ ಮೇಲಿನ ಸುಂಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರಕಾರ ಸೋಮವಾರ ಕರಡು ಪ್ರಕಟಿಸಿದ್ದು, ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಸೇರಿದಂತೆ ಭಾರತೀಯ ಮದ್ಯದ ಮೇಲೆ ಶೇ. 20ರಷ್ಟು ದರ ಏರಿಕೆಯಾಗಲಿದೆ.

ಅದೇ ರೀತಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ. 10ರಷ್ಟು ಹೆಚ್ಚಿಸುವ ಬಗ್ಗೆ ಸೂಚನೆ ನೀಡಲಾಗಿತ್ತು. ಇದು ಜಾರಿಗೆ ಬಂದರೆ ಬಿಯರ್ ಬೆಲೆ ಪ್ರತಿ ಬಾಟಲ್ ಗೆ 3 ರಿಂದ 5 ರೂ. ಹೆಚ್ಚಾಗಲಿದೆ.

ಯಾವ ಬ್ರ್ಯಾಂಡ್ ಗೆ ಎಷ್ಟು ಹೆಚ್ಚಳ?

*ಹೈವಾರ್ಡ್ಸ್ -10 ರೂ. ಹೆಚ್ಚಳ(70 ರೂ.ಯಿಂದ 80 ರೂ.)
*ಬಡ್ ವೈಸರ್ -20 ರೂ. ಹೆಚ್ಚಳ(220 ರೂ.ಯಿಂದ 240 ರೂ.)
*ಕಿಂಗ್ ಫಿಷರ್ ಪ್ರಿಮಿಯಂ -20 ರೂ. ಹೆಚ್ಚಳ(170 ರೂ. ಯಿಂದ 190 ರೂ.)
*ಬ್ಯಾಗ್ ಪೈಪರ್ ವಿಸ್ಕಿ -14 ರೂ. ಹೆಚ್ಚಳ(106 ರೂ.ಯಿಂದ 120 ರೂ.)
*ಬ್ಲ್ಯಾಕ್ & ವೈಟ್-336 ರೂ. ಹೆಚ್ಚಳ(2,464 ರೂ.ಯಿಂದ 2,800 ರೂ.)
*ಓಲ್ಡ್ ಮಂಕ್ -18 ರೂ. ಹೆಚ್ಚಳ(137 ರೂ.ಯಿಂದ 155 ರೂ.)
*ಇಂಪಿರಿಯಲ್ ಬ್ಲ್ಯೂ -20 ರೂ. ಹೆಚ್ಚಳ(220 ರೂ.ಯಿಂದ 240 ರೂ.)
*ಜಾನಿ ವಾಕರ್ ಬ್ಲ್ಯಾಕ್ ಲೇಬಲ್ -900 ರೂ. ಹೆಚ್ಚಳ(6,250 ರೂ.ಯಿಂದ 7,150 ರೂ.).

ದುಬಾರಿ ರಾಜ್ಯ

ಸುಂಕ ಹೆಚ್ಚಳದೊಂದಿಗೆ ಕರ್ನಾಟಕವು ಪ್ರೀಮಿಯಂ ಮದ್ಯದ ಬ್ರ್ಯಾಂಡ್ ಗಳಿಗೆ ದೇಶದ ಅತ್ಯಂತ ದುಬಾರಿ ರಾಜ್ಯವಾಗಿ ಹೊರ ಹೊಮ್ಮಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೆಲವು ಕಡಿಮೆ ಬೆಲೆಯ ಬ್ರ್ಯಾಂಡ್ ಗಳಿಗೂ ಇಲ್ಲಿ ದರ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

ಸ್ಲ್ಯಾಬ್ ಹೊರತುಪಡಿಸಿ ಇತರ ಎಲ್ಲಾ ಬ್ರ್ಯಾಂಡ್ ಗಳು ಕರ್ನಾಟಕದಲ್ಲಿ ದುಬಾರಿಯಾಗಲಿದೆ. ಶೇ. 78ರಷ್ಟು ಮಂದಿ ಕಡಿಮೆ ಬೆಲೆಯ ಬ್ರ್ಯಾಂಡ್ ನ ಬಿಯರ್ ಖರೀದಿಸಿದರೆ, ಶೇ. 5ರಷ್ಟು ಮಂದಿ ಉನ್ನತ ಬ್ರ್ಯಾಂಡ್ ನ ಬಿಯರ್ ಖರೀದಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಬಿಯರ್ ಬೆಲೆ ಏರಿಕೆಯಲ್ಲಿ ನಮ್ಮ ರಾಜ್ಯಕ್ಕೆ ಮೂರನೇ ಸ್ಥಾನ. ಇದಕ್ಕೆ ತಮಿಳುನಾಡಿನಲ್ಲಿ 210 ರೂ., ದಿಲ್ಲಿಯಲ್ಲಿ 190 ರೂ. ಮತ್ತು ಕರ್ನಾಟಕದಲ್ಲಿ 187 ರೂ. ಇದೆ. ಇದರಿಂದ ಕರ್ನಾಟಕಕ್ಕೆ ನಷ್ಟವಾಗಲಿದ್ದು, ಗ್ರಾಹಕರು ಕಡಿಮೆ ಬೆಲೆ ಇರುವ ರಾಜ್ಯಗಳತ್ತ ಮುಖ ಮಾಡಬಹುದು ಎನ್ನುವ ಲೆಕ್ಕಾಚಾರವಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *