ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ – ಭಾರತದ ಜೆರ್ಸಿ ಖಾಲಿ ಖಾಲಿ; ಕಾರಣವೇನು?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ – ಭಾರತದ ಜೆರ್ಸಿ ಖಾಲಿ ಖಾಲಿ; ಕಾರಣವೇನು?

ನ್ಯೂಸ್ ಆ್ಯರೋ‌ : ಕ್ರಿಕೆಟ್ ಅಭಿಮಾನಿಗಳ ಹಬ್ಬ ಐಪಿಎಲ್‌ ಮುಗಿಯಿತು. ಸದ್ಯ ಎಲ್ಲರ ಗಮನ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದತ್ತ ತಿರುಗಿದೆ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜೂ. 7ರಿಂದ ಲಂಡನ್ ನ ಒವಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ವೇಳೆ ಟೀಮ್‌ ಇಂಡಿಯಾ ಆಟಗಾರರು ಪ್ರಾಯೋಜಕತ್ವವಿಲ್ಲದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ.

ಲಂಡನ್‌ನಲ್ಲಿ ಈಗಾಗಲೇ ಭಾರತೀಯ ಆಟಗಾರರು ತರಬೇತಿ ಆರಂಭಿಸಿದ್ದಾರೆ. ಅಭ್ಯಾಸ ಅವಧಿಯ ವೇಳೆ ಭಾರತದ ಆಟಗಾರರು ಹೊಸ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಉಡುಪುಗಳಲ್ಲಿ ಭಾರತ ತಂಡದ ಆಟಗಾರರ ಜೆರ್ಸಿ ಪ್ರಾಯೋಜಕತ್ವ ವಹಿಸಿದ ಅಡಿಡಾಸ್‌ ಕಂಪನಿಯ ಮೂರು ಪಟ್ಟಿಗಳಿರುವ ಲೋಗೋ ಮತ್ತು ಬಿಸಿಸಿಐ ಲೋಗೋ ಮಾತ್ರ ಕಾಣಿಸುತ್ತಿದೆ. ಉಳಿದಂತೆ ಜೆರ್ಸಿಯು ಖಾಲಿ ಖಾಲಿ ಇದೆ.

ಕಾರಣವೇನು?

ಪ್ರಾಯೋಜಕರ ಸಂಖ್ಯೆಯಲ್ಲಿ ಈ ರೀತಿಯ ಇಳಿಕೆ ಬಹಳ ಅಪರೂಪ. ಈ ಹಿಂದೆ ಜೆರ್ಸಿ ಪ್ರಾಯೋಜಕತ್ವ ವಹಿಸಿದ್ದ ಬೈಜುಸ್‌ ಬಿಸಿಸಿಐ ಜೊತೆಗಿನ ಒಪ್ಪಂದವನ್ನು ಮಾರ್ಚ್‌ ನಲ್ಲಿ ಮೊಟಕುಗೊಳಿಸಿತ್ತು. ಬಿಸಿಸಿಐ ಅಧಿಕಾರಿಗಳು ದೀರ್ಘಾವಧಿಯ ಪ್ರಾಯೋಜಕತ್ವಕ್ಕೆ ಆಸಕ್ತ ಕಂಪೆನಿಗಳನ್ನು ಆಹ್ವಾನಿಸಲು ಉತ್ಸುಕರಾಗಿದ್ದರು. ಆದರೆ ಈ ಕುರಿತು ನಡೆದ ಮಾತುಕತೆಗಳಲ್ಲಿ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಅಲ್ಪಾವಧಿಯ ಒಪ್ಪಂದಕ್ಕಾಗಿ ಕೆಲವು ಕಂಪೆನಿಗಳು ಮುಂದೆ ಬಂದರೂ ಬಿಸಿಸಿಐ ಇದಕ್ಕೆ ಆಸಕ್ತಿ ತೋರಲಿಲ್ಲ ಎನ್ನಲಾಗಿದೆ.

ಸದ್ಯ ಅಡಿಡಾಸ್‌ ಕಂಪನಿಯೊಂದಿಗಿನ ಐದು ವರ್ಷಗಳ ಒಪ್ಪಂದಕ್ಕೆ ಬಿಸಿಸಿಐ ಸಹಿ ಹಾಕಿದೆ. ಮುಂದಿನ ದಿನಗಳಲ್ಲಿ ಪ್ರಮುಖ ಟೂರ್ನಿಗಳು ನಡೆಯಲಿವೆ. ಅದರಲ್ಲಿ ತವರಿನಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್‌ ಕೂಡಾ ಸೇರಿದೆ. ಹೀಗಾಗಿ ಟೀಮ್‌ ಇಂಡಿಯಾ ಜೆರ್ಸಿ ಪ್ರಾಯೋಜಕತ್ವಕ್ಕೆ ಪ್ರಾಯೋಜಕರು ಆಸಕ್ತಿ ವಹಿಸಬಹುದು ಎಂಬುದು ಬಿಸಿಸಿಐ ನಿರೀಕ್ಷೆ. ಜೆರ್ಸಿಯಲ್ಲಿ ಹೆಚ್ಚು ಸಂಸ್ಥೆಗಳ ಲೋಗೋ ಕಂಡಂತೆಲ್ಲಾ ಬಿಸಿಸಿಐಗೆ ಹಣದ ಹೊಳೆ ಹರಿಯಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *