ಮತ್ತೆ ಹೊಸ ರೂಪದಲ್ಲಿ ಕರಿಜ್ಮಾ XMR – ಧೂಳೆಬ್ಬಿಸಲು ಬರುತ್ತಿದೆ ಒಂದು ಕಾಲದ ಯುವಕರ ಫೇವರಿಟ್ ಬೈಕ್‌

ಮತ್ತೆ ಹೊಸ ರೂಪದಲ್ಲಿ ಕರಿಜ್ಮಾ XMR – ಧೂಳೆಬ್ಬಿಸಲು ಬರುತ್ತಿದೆ ಒಂದು ಕಾಲದ ಯುವಕರ ಫೇವರಿಟ್ ಬೈಕ್‌

ನ್ಯೂಸ್ ಆ್ಯರೋ‌ : ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೀರೋ ಮೊಟೊಕಾರ್ಪ್ ಜನಪ್ರಿಯ. ಇದೀಗ ಕಂಪನಿ ಹೊಚ್ಚ ಹೊಸ ಕರಿಜ್ಮಾ XMR ಬೈಕ್‌ನ್ನು ಡೀಲರ್ ಈವೆಂಟ್ ನಲ್ಲಿ ಪ್ರದರ್ಶನ ಮಾಡಿದ್ದು ಗಮನ ಸೆಳೆದಿದೆ. ಒಂದು ಕಾಲದ ಯುವಕರ ನೆಚ್ಚಿನ ಬೈಕ್ ಆಗಿದ್ದ ಕರಿಜ್ಮಾ ಹೊಸ ರೂಪದಲ್ಲಿ ಬರುವ ನಿರೀಕ್ಷೆ ಇದೆ.

ಹೀರೋ ಕಂಪನಿ 2003ರಲ್ಲಿ ‘ಕರಿಜ್ಮಾ ZMR’ ಬಿಡುಗಡೆ ಮಾಡಿತ್ತು. ಆ ಕಾಲದಲ್ಲಿ ಟ್ರೆಂಡ್ ಆಗಿದ್ದ ಇದು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಿ ಬ್ರ್ಯಾಂಡ್‌ಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ವರ್ಷಗಳು ಕಳೆದಂತೆ ಆಕರ್ಷಣೆ ಕಳೆದುಕೊಂಡ ಕರಿಜ್ಮಾ ಬೈಕ್ ನ ಉತ್ಪಾದನೆಯನ್ನು 2019ರಲ್ಲಿ ಸ್ಥಗಿತಗೊಳಿಸಲಾಯಿತು. ಇದೀಗ ಮತ್ತೆ ಹೊಸ ರೂಪ ತಾಳಿ ಬರಲಿದೆ.

ವೈಶಿಷ್ಟ್ಯ

ಹೊಸ ಮಾಡೆಲ್ ನಲ್ಲಿ ಟೂ ಪೀಸ್ ಸೀಟ್, ಡ್ಯುಯಲ್-ಟೋನ್ ಫ್ಯುಯೆಲ್ ಟ್ಯಾಂಕ್, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಅಡ್ಜಸ್ಟಬಲ್ ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್ ಇರಲಿದೆ. ಜೊತೆಗೆ ಈ ಮೋಟಾರ್ ಸೈಕಲ್ ಡ್ಯುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿರಲಿದೆ. ಮೂಲಗಳ ಪ್ರಕಾರ, 210 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಸಿಗಬಹುದು.

ಬೆಲೆ ಎಷ್ಟು?

ಹೀರೋ ಕಂಪನಿ ಮುಂಬರುವ ತಿಂಗಳಲ್ಲಿ ಬಿಡುಗಡೆಗೊಳಿಸಲಿರುವ ಕರಿಜ್ಮಾ ಬೈಕ್ ಬೆಲೆ ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಎಕ್ಸ್ ಶೋರೂಂ ಬೆಲೆ 1.8 ಲಕ್ಷ ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ಸುಜುಕಿ Gixxer SF ಹಾಗೂ ಯಮಹಾ R15 V4 ಗೆ ಇದು ಪ್ರತಿಸ್ಪರ್ಧಿಯಾಗುವ ಸಾಧ್ಯತೆ ಇದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *