ಶ್ರೀರಾಮರಕ್ಷಾಸ್ತೋತ್ರ ಶ್ಲೋಕ ಒಂದು ಮತ್ತು ಎರಡು ಹಾಗೂ ಅದರ ಅರ್ಥ ಇಲ್ಲಿದೆ‌…

ಶ್ರೀರಾಮರಕ್ಷಾಸ್ತೋತ್ರ ಶ್ಲೋಕ ಒಂದು ಮತ್ತು ಎರಡು ಹಾಗೂ ಅದರ ಅರ್ಥ ಇಲ್ಲಿದೆ‌…

ಶ್ಲೋಕ 1
ಶ್ರೀ ಗಣೇಶಾಯ ನಮಃ | ಅಸ್ಯ ಶ್ರೀ ರಾಮರಕ್ಷಾಸ್ತೋತ್ರಮಂತ್ರಸ್ಯ | ಬುಧಕೌಶಿಕ ಋಷಿ: | ಅನುಷ್ಟುಪ್ ಛಂದ : | ಶ್ರೀ ಸೀತಾರಾಮಚಂದ್ರೋ ದೇವತಾ | ಸೀತಾ ಶಕ್ತಿ: | ಶ್ರೀಮದ್ಧನುಮಾನ್‌ ಕೀಲಕಂ | ಶ್ರೀ ರಾಮಚಂದ್ರ ಪ್ರೀತ್ಯರ್ಥ ಶ್ರೀ ರಾಮರಕ್ಷಾಸ್ತೋತ್ರ ಜಪೇ ವಿನಿಯೋಗ || 1 ||

ಅರ್ಥ
ಬುಧಕೌಶಿಕ ಋಷಿಯಿಂದ ಅನುಷ್ಟುಪ್ ಛಂದಸ್ಸಿನಲ್ಲಿ ಬರೆಯಲ್ಪಟ್ಟು, ಶ್ರೀ ರಾಮಚಂದ್ರ, ಸೀತಾದೇವಿ ಹಾಗೂ ಹನುಮಂತರ ವಿಶೇಷ ಒಲುಮೆಗಳಿಸುವ ಮಾಧ್ಯಮವಾದ ಈ ಶ್ರೀರಾಮರಕ್ಷಾಸ್ತೋತ್ರ ಪಠಣವು, ಆ ಗಣೇಶ ದೇವರ ಕೃಪೆಯಿಂದ ನಿರ್ವಿಘ್ನವಾಗಲಿ ! ||1||

ಶ್ಲೋಕ 2
ಧ್ಯಾಯೇದಾಜಾನುಬಾಹುಂ ಧೃತಶರಧನುಷಂ ಬದ್ಧ ಪದ್ಮಾಸನಸ್ಥಂ | ಪೀತಂವಾಸೋ ವಸಾನಂ ನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ | ವಾಮಾಂಕಾರೂಢಸೀತಾಮುಖ ಕಮಲಮಿಲಲ್ಲೋಚನಂ
ನೀರದಾಭಂ ನಾನಾಲಂಕಾರದೀಪ್ತಂ ದಧತಮುರುಜಟಾಮಂಡಲಂ ರಾಮಚಂದ್ರಮ್ || 2 ||

ಅರ್ಥ
ಜಟಾಧರನೂ, ಪೀತಾಂಬರಧಾರಿಯೂ ಆಗಿ ಪದ್ಮಾಸನ ಹಾಕಿ ಕುಳಿತಿರುವ ತೇಜಸ್ವಿ ಕಣ್ಣುಗಳ, ಪ್ರಸನ್ನ ಮುಖಮುದ್ರೆಯ, ಎಡತೊಡೆಯ ಮೇಲೆ ಕುಳಿತಿರುವ ಮನದನ್ನೆ ಸೀತೆಯ ಕಡೆ ಒಲವಿನ ನೋಟಬೀರುತ್ತಿರುವ, ಬಿಲ್ಲುಬಾಣಗಳಿಂದೊಡಗೂಡಿದ ಆಜಾನುಬಾಹು ನೀಲಮೇಘ ಶ್ಯಾಮನಾದ ಸಾಲಂಕೃತ ಆ ರಾಮಚಂದ್ರನನ್ನು ಮನಸಾರೆ ಧ್ಯಾನಿಸುವ ||2||

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *