ಉತ್ತಮ ಸಂಗಾತಿಯಾಗುತ್ತಾರೆ ಈ ರಾಶಿಯ ಹುಡುಗಿಯರು – ನಿಮ್ಮ ಪ್ರೇಯಸಿಯ ರಾಶಿ ಇದೆಯೇ ಚೆಕ್ ಮಾಡಿ…

ಉತ್ತಮ ಸಂಗಾತಿಯಾಗುತ್ತಾರೆ ಈ ರಾಶಿಯ ಹುಡುಗಿಯರು – ನಿಮ್ಮ ಪ್ರೇಯಸಿಯ ರಾಶಿ ಇದೆಯೇ ಚೆಕ್ ಮಾಡಿ…

ನ್ಯೂಸ್ ಆ್ಯರೋ : ನಮ್ಮ ರಾಶಿ ಮತ್ತು ಜನ್ಮ ನಕ್ಷತ್ರಗಳು ನಮ್ಮ ವ್ಯಕ್ತಿತ್ವದ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತದೆ. ರಾಶಿಯ ಮೂಲಕವೂ ಒಬ್ಬ ವ್ಯಕ್ತಿಯ ಗುಣಲಕ್ಷಣ ಹೀಗಿರಬಹುದು ಎಂದು ಕೆಲವರು ಹೇಳುತ್ತಾರೆ. ಅಂದರೆ, ರಾಶಿಯ ಆಧಾರದಲ್ಲಿ ವ್ಯಕ್ತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಅದರ ಆಧಾರದ ಮೇಲೆ ನಮ್ಮ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಜೋತಿಷ್ಯ ಶಾಸ್ತ್ರದ ಸಹಾಯ ಪಡೆದು ಇಂತಹ ವಿವರಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಮತ್ತೊಬ್ಬರನ್ನು ಇನ್ನಷ್ಟು ಚೆನ್ನಾಗಿ ತಿಳಿಯಬಹುದು.

ನಾವು ನಮ್ಮ ಜೀವನದ ಬಹುಪಾಲು ಕಾಲವನ್ನು ಜತೆಯಾಗಿ ಕಳೆಯುವ ನಮ್ಮ ಬಾಳಸಂಗಾತಿಯ ಆಯ್ಕೆಯಲ್ಲಿಯೂ ಅಷ್ಟೆ. ಬಹಳಷ್ಟು ಯೋಚನೆಯನ್ನು ಮಾಡುತ್ತೇವೆ. ಜೀವನಪೂರ್ತಿ ಜತೆಯಾಗಿರಬೇಕಾದ ಹುಡುಗಿಯ ಆಯ್ಕೆ ನಿರ್ಧಾರ ಕೈಗೊಳ್ಳುವುದು ಸುಲಭವೇನೂ ಅಲ್ಲ. ಮದುವೆ ಒಂದು ಬಹುಮುಖ್ಯ ಘಟ್ಟ. ಹೀಗಾಗಿ ಬಾಳಸಂಗಾತಿ ಹುಡುಕುವಾಗ ರಾಶಿ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕವೂ ಸರಿಯಾದ ಜೋಡಿ ಹೊಂದಿಸಿಕೊಳ್ಳಬಹುದು.

ಮೀನಾ

ಈ ರಾಶಿಯ ಹುಡುಗಿಯರು ಹೆಚ್ಚಾಗಿ ಸೂಕ್ಷ್ಮ ಮನಸಿನವರಾಗಿರುತ್ತಾರೆ. ಬಹಳ ಕಾಳಜಿ ಉಳ್ಳವರಾಗಿರುತ್ತಾರೆ. ಅವರಿಗೆ ಮತ್ತೊಬ್ಬರ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಕಷ್ಟದ ಸಂದರ್ಭದಲ್ಲಿ ಅವರು ಜತೆಗಾರರ ಕೈಬಿಡುವುದಿಲ್ಲ. ಈ ರಾಶಿಯವರು ತಮ್ಮ ಬಾಳಸಂಗಾತಿಗೆ ಸಂತೋಷವನ್ನೇ ನೀಡಲು ಪ್ರಯತ್ನಿಸುತ್ತಾರೆ ಮತ್ತು ಖುಷಿಯನ್ನೇ ನೀಡುತ್ತಿರುತ್ತಾರೆ. ಅರ್ಥಮಾಡಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಗಟ್ಟಿ ನಂಟು, ಪ್ರೀತಿ ಹೊಂದಿರುತ್ತಾರೆ.

ಕಟಕ:

ಈ ರಾಶಿಯ ಯುವತಿಯರಿಗೆ ತಮ್ಮ ಬಾಳಸಂಗಾತಿಯ ಬಗ್ಗೆ ಖಂಡಿತಾ ಕಾಳಜಿ ಇರುತ್ತದೆ. ಆದರೆ, ಅವರು ತಮ್ಮ ಜೀವನವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದೂ ಚೆನ್ನಾಗಿ ತಿಳಿದಿರುತ್ತದೆ. ತಮ್ಮ ಜತೆಗಾರನ ಬಗ್ಗೆ ಪ್ರೀತಿ ಮತ್ತು ಸದಾ ಜತೆಗಿರಬೇಕು ಎನ್ನುವ ಭಾವ ಅವರಲ್ಲಿರುತ್ತದೆ. ಅವರು ಪ್ರಾಮಾಣಿಕರು ಮತ್ತು ಸಮರ್ಪಕ ಪ್ರೀತಿಯ ಹುಡುಕಾಟದಲ್ಲಿ ಇರುತ್ತಾರೆ. ಈ ರಾಶಿಯವರು ಏನೇ ಆದರೂ ತಮ್ಮ ಜತೆಗಾರನ ಪರವಾಗಿ ಇರುತ್ತಾರೆ.

ತುಲಾ

ಈ ರಾಶಿಯವರು ದಾಂಪತ್ಯ ಜೀವನಕ್ಕೆ ಸಮತೋಲನ ಹಾಗೂ ಸ್ಥಿರತೆ ತಂದುಕೊಡುತ್ತಾರೆ. ಬಹಳ ಪ್ರಬುದ್ಧರಾಗಿ ವರ್ತಿಸುತ್ತಾರೆ. ಕಷ್ಟದ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಯಾವುದೇ ದೂರು ಹೇಳಿ ಸುಮ್ಮನೇ ಜತೆಗಾರರನ್ನು ಬಿಟ್ಟು ಹೋಗುವುದಿಲ್ಲ. ಪ್ರಾಮಾಣಿಕ ಆದರೆ ಗಟ್ಟಿ ಮನಸಿನವರೂ ಆಗಿರುತ್ತಾರೆ. ಚಿಂತಿಸುವುದರ ಬದಲಾಗಿ ಪರಿಹಾರ ಮಾರ್ಗಗಳನ್ನು ಹೆಚ್ಚು ಆಲೋಚಿಸುತ್ತಾರೆ.

ಕುಂಭ

ಈ ರಾಶಿಯ ಹುಡುಗಿಯರು ಬಹಳ ಗಟ್ಟಿಮನಸ್ಸಿನವರು ಆಗಿರುತ್ತಾರೆ. ತಮ್ಮ ಬಗ್ಗೆ ತುಂಬಾ ಆತ್ಮವಿಶ್ವಾಸ ಹೊಂದಿರುತ್ತಾರೆ. ಮಾನಸಿಕವಾಗಿ ಸದೃಢರಾಗಿ ಇರುತ್ತಾರೆ. ನೀರಿನಂತೆ ಯಾವುದೇ ಸನ್ನಿವೇಶಗಳಿಗೂ ಹೊಂದಿಕೊಳ್ಳಬಲ್ಲ ಮನಸಿರುತ್ತದೆ. ಆದರೆ, ಅವರಲ್ಲಿಯೂ ಬಹಳ ಹಾಸ್ಯಪ್ರಜ್ಞೆ ಇರುತ್ತದೆ. ಅಂದರೆ, ಪ್ರೀತಿ, ಪರಸ್ಪರ ಅರ್ಥ ಮಾಡಿಕೊಂಡು ಜೊತೆಗೆ ಹಾಸ್ಯದ ಲೇಪನವೂ ಇರುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *