80 ವರ್ಷಗಳ ಭದ್ರತಾ ಸೇವೆ ನೀಡಿದ್ದ ಮಿಗ್ 21 ವಾಯುಪಡೆಗೆ ಗುಡ್ ಬೈ – ಮಿಗ್ ಸ್ಥಾನ ತುಂಬೋದ್ಯಾರು ಗೊತ್ತಾ?

80 ವರ್ಷಗಳ ಭದ್ರತಾ ಸೇವೆ ನೀಡಿದ್ದ ಮಿಗ್ 21 ವಾಯುಪಡೆಗೆ ಗುಡ್ ಬೈ – ಮಿಗ್ ಸ್ಥಾನ ತುಂಬೋದ್ಯಾರು ಗೊತ್ತಾ?

ನ್ಯೂಸ್ ಆ್ಯರೋ : ನೀವು ದೇಶದ ಭದ್ರತೆಯ ವಿಚಾರದಲ್ಲಿ ಆಸಕ್ತಿ ಉಳ್ಳವರಾಗಿದ್ರೆ ಮಿಗ್ ವಿಮಾನದ ಹೆಸರು ಕೇಳಿಯೇ ಇರುತ್ತೀರಿ. ಆದರೆ 1970ರ ದಶಕದಲ್ಲಿ ಎದುರಾಳಿಯ ಎದೆಯನ್ನು ನಡುಗಿಸಿದ್ದ ಭಾರತೀಯ ವಾಯುಪಡೆಯ ಮಿಗ್‌ 21 ಬೈಸನ್ ಯುದ್ಧ ವಿಮಾನಗಳನ್ನು ಮಂಗಳವಾರ ಅಧಿಕೃತವಾಗಿ ಸೇವೆಯಿಂದ ಹಿಂದಕ್ಕೆ ಪಡೆಯಲಾಗಿದೆ‌.

ಇನ್ನು ಮುಂದೆ ಸೇನೆಯಲ್ಲಿ ಮಿಗ್ ವಿಮಾನದ ಸ್ಥಾನವನ್ನು ಎಚ್‌ಎಎಲ್‌ ನಿರ್ಮಿಸಿರುವ ದೇಶೀಯ ಎಲ್‌ಸಿಎ ತೇಜಸ್‌ ಮಾರ್ಕ್‌ 1ಎ ತುಂಬಲಿದೆ. 1960ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಮಿಗ್‌ 21 ವಿಮಾನಗಳು 1971ರಲ್ಲಿ ನಡೆದ ಯುದ್ಧದ ವೇಳೆ ಪಾಕಿಸ್ತಾನದ ಹಲವು ನಗರಗಳ ಮೇಲೆ ಬಾಂಬ್‌ ದಾಳಿ ಮಾಡಿತ್ತು.

ಹಿಂದಿನ ಸೋವಿಯತ್‌ ಒಕ್ಕೂಟ (Soviet Union) ಮಿಖೋಯೆನ್‌ ಗುರ್ವಿಚ್‌ ಕಂಪನಿ 1959ರಲ್ಲಿ ಮೊದಲ ಬಾರಿ ಮಿಗ್‌ 21 ಬೈಸನ್‌ ವಿಮಾನಗಳನ್ನು ತಯಾರಿಸಿ ವಿಶ್ವದಾದ್ಯಂತ ಖ್ಯಾತಿ ಪಡೆದಿತ್ತು. ಈವರೆಗೆ ಇಂಥ 11,496 ವಿಮಾನಗಳನ್ನು ತಯಾರಿಸಲಾಗಿದ್ದು, ಜಗತ್ತಿನ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಈ ಪೈಕಿ ಭಾರತದ ನಾಸಿಕ್‌ನಲ್ಲಿ 840 ವಿಮಾನಗಳನ್ನು ತಯಾರಿಸಲಾಗಿತ್ತು. ಪ್ರಸ್ತುತ 50 ವಿಮಾನಗಳು ಭಾರತೀಯ ವಾಯುಪಡೆಯ ಸೇವೆಯಲ್ಲಿದೆ.

ವಿಶ್ವದಲ್ಲಿ 400 ವಿಮಾನಗಳು ಭದ್ರತಾ ಲೋಪ (Security Lapse) ಕಾರಣ ಪತನಗೊಂಡಿದೆ. ಇದನ್ನು ಹೊರತುಪಡಿಸಿ ಈ ವಿಮಾನ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ಯುದ್ಧ ವಿಮಾನ ಎಂಬ ಕೀರ್ತಿಗಳಿಸಿದೆ. ಇದೀಗ ಈ ವಿಮಾನದ ಆಯಸ್ಸು ಮುಗಿದಿರುವ ಕಾರಣ 2024ರ ಒಳಗೆ ಇವುಗಳನ್ನು ಹಿಂಪಡೆದುಕೊಳ್ಳಲು ವಾಯುಪಡೆ ನಿರ್ಧರಿಸಿದೆ ಎನ್ನಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *