ಮದುವೆಯಾಗಿ 10 ವರ್ಷಗಳ ಬಳಿಕ ತಂದೆಯಾಗ್ತಿದ್ದಾರೆ ರಾಮ್ ಚರಣ್ – ಮದುವೆ ಬಳಿಕ ನಡೆದ ಅಗ್ರಿಮೆಂಟ್ನ ರಹಸ್ಯ ಬಿಚ್ಚಿಟ್ಟ ಪತ್ನಿ ಉಪಾಸನಾ ಹೇಳಿದ್ದೇನು?
- ಮನರಂಜನೆ
- April 6, 2023
- No Comment
- 399
ನ್ಯೂಸ್ ಆ್ಯರೋ : ಟಾಲಿವುಡ್ನ ನಟ, ನಿರ್ಮಾಪಕ ರಾಮ್ ಚರಣ್ ಅವರು ಕೆಲವೇ ತಿಂಗಳಲ್ಲಿ ತಂದೆಯಾಗಲಿದ್ದಾರೆ. ಇದರೊಂದಿಗೆ ಮೆಗಾಹೌಸ್ನಲ್ಲಿ ಹೊಸ ಸಂಭ್ರಮ ಮನೆಮಾಡಿದೆ.
2012ರಲ್ಲಿ ಮದುವೆಯಾದ ರಾಮ್ಚರಣ್– ಉಪಾಸನಾ ಮಕ್ಕಳನ್ನು ಹೊಂದಲು ಏಕೆ ಇಷ್ಟೊಂದು ತಡ ಮಾಡಿದರು? ಅದಕ್ಕೆ ಮುಖ್ಯ ಕಾರಣಗಳೇನು? ಈ ಬಗ್ಗೆ ಉಪಾಸನಾ ವಿಷಯ ಬಹಿರಂಗಪಡಿಸಿದ್ದಾರೆ.
2012 ಜೂನ್ 14ರಂದು ಹೈದರಾಬಾದ್ನಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಮದುವೆ ನಡೆಯಿತು. ಅಂದಿನಿಂದ ಇಬ್ಬರೂ ವೈವಾಹಿಕ ಸಂಬಂಧವನ್ನು ಆನಂದಿಸುತ್ತಲೇ ವೃತ್ತಿಪರವಾಗಿಯೂ ಮುನ್ನೆಲೆ ಸಾಧಿಸುತ್ತಿದ್ದಾರೆ. ಆದರೆ, ಮಕ್ಕಳ ವಿಷಯದಲ್ಲಿ ಹತ್ತು ವರ್ಷಗಳ ನಂತರ ಗುಡ್ ನ್ಯೂಸ್ ನೀಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ದಂಪತಿಗೆ ಮಕ್ಕಳಾಗಲು ಯಾಕೆ ತಡ ಮಾಡಿದರು, ಅದಕ್ಕೆ ಮುಖ್ಯ ಕಾರಣಗಳೇನು? ಎಂಬ ವಿಷಯಗಳನ್ನು ಉಪಾಸನಾ ರಿವೀಲ್ ಮಾಡಿದ್ದಾರೆ. ಸಮಾಜ ಬಯಸಿದಾಗ ಮಕ್ಕಳಾಗದೆ, ತನಗೆ ಬೇಕಾದಾಗ ಮಕ್ಕಳನ್ನು ಹೊಂದಲು ಹಿಂದೆಯೇ ನಿರ್ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದರು.
ಮದುವೆಯಾಗುವಾಗಲೇ ಮಕ್ಕಳ ವಿಚಾರದಲ್ಲಿ ನಾವು ನಿರ್ಧಾರ ತೆಗೆದುಕೊಂಡಿದ್ದೆವು ಎಂದಿರುವ ಉಪಾಸನಾ, ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಹತ್ತು ವರ್ಷಗಳ ಕಾಲ ಮಕ್ಕಳು ಬೇಡ ಎಂದು ನಿರ್ಧರಿಸಿದ್ದೆವು. ಆದ್ದರಿಂದ ಯಾವುದೇ ಒತ್ತಡಕ್ಕೆ ಒಳಗಾಗದೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೆವು ಎಂದು ಹೇಳಿದ್ದಾರೆ.
ನಾವಿಬ್ಬರೂ ನಮ್ಮ ಕ್ಷೇತ್ರಗಳಲ್ಲಿ ಈಗ ಉನ್ನತ ಮಟ್ಟಕ್ಕೆ ತಲುಪಿದ್ದೇವೆ. ನಾವು ಆರ್ಥಿಕವಾಗಿ ಸ್ಟ್ರಾಂಗ್ ಆಗಿದ್ದೇವೆ. ಹಾಗಾಗಿಯೇ ಪೋಷಕರಾಗಲು ನಿರ್ಧರಿಸಿದೆವು ಎಂಬ ಉಪಾಸನಾ ಮಾತು ವೈರಲ್ ಆಗುತ್ತಿದೆ.
ಶೋಭನಾ ಅಪೊಲೊ ಆಸ್ಪತ್ರೆಗಳ ಅಧ್ಯಕ್ಷ ಪ್ರತಾಪ್ ರೆಡ್ಡಿ ಮೊಮ್ಮಗಳು, ಅನಿಲ್ ಕಾಮಿನೇನಿ ಅವರ ಪುತ್ರಿ ಉಪಾಸನಾ ಪ್ರಸ್ತುತ ಅಪೋಲೋ ಚಾರಿಟಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮದುವೆಯಾಗಿ ಹತ್ತು ವರ್ಷಗಳ ನಂತರ ಈಗ ತಾಯ್ತನಕ್ಕೆ ಕಾಲಿಡುತ್ತಿದ್ದಾರೆ.
ಗರ್ಭಿಣಿಯಾಗಿದ್ದರೂ ಉಪಾಸನಾ ತುಂಬಾ ಆ್ಯಕ್ಟಿವ್ ಆಗಿದ್ದು, ರಾಮ್ ಚರಣ್ ಜೊತೆ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ ಅಮೆರಿಕಾಗೆ ಹೋಗಿ ಆಸ್ಕರ್ ಸಮಾರಂಭದಲ್ಲಿಯೂ ಭಾಗವಹಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿವೆ.
ರಾಮ್ ಚರಣ್ ಸದ್ಯ ಶಂಕರ್ ನಿರ್ದೇಶನದ ಅದ್ಧೂರಿ ಸಿನಿಮಾ ಮಾಡುತ್ತಿದ್ದಾರೆ. ಆರ್ಸಿ 15 ಶೀರ್ಷಿಕೆಯ ಈ ಚಿತ್ರವನ್ನು ದಿಲ್ ರಾಜು ನಿರ್ಮಿಸುತ್ತಿದ್ದರೆ, ಚೆರ್ರಿ ಎದುರು ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಧ್ಯ ರಾಮ್ಚರಣ್ ಉಪಾಸನಾ ಜೋಡಿ ಮಗುವನ್ನು ಸ್ವಾಗತಿಸಲು ಸಿದ್ಧವಾಗುತ್ತಿದೆ.