ಕೇರಳ ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ಕಲಾ ನಿರ್ದೇಶಕ ಸುನೀಲ್ ಬಾಬು ನಿಧನ. ಸಿನಿ ದಿಗ್ಗಜರಿಂದ ತೀವ್ರ ಸಂತಾಪ
- ಮನರಂಜನೆ
- January 6, 2023
- No Comment
- 132
ನ್ಯೂಸ್ ಆ್ಯರೋ : ಖ್ಯಾತ ನಿರ್ಮಾಣ ವಿನ್ಯಾಸಕ ಮತ್ತು ಕಲಾ ನಿರ್ದೇಶಕ ಸುನೀಲ್ ಬಾಬು (50) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಪತ್ತನಂತಿಟ್ಟ ಮೂಲದ ಸುನಿಲ್ ಬಾಬು ಮಲೆಯಾಳಂ ಸೇರಿದಂತೆ ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವಾರು ಚಿತ್ರರಂಗದಲ್ಲಿ ಕಲಾ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದರು.
ಸಹಾಯಕ ನಿರ್ಮಾಣ ವಿನ್ಯಾಸಕನಾಗಿ ಚಿತ್ರಂಗಕ್ಕೆ ಪಾದಾರ್ಪಣೆ ಮಾಡಿದ ಸುನೀಲ್ ಬಾಬು ಮೈಸೂರಿನ ಕಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು.
ಮಲೆಯಾಳಂ ಚಿತ್ರರಂಗದಲ್ಲಿ ಸೂಪರ್ ಹಿಟ್ ಎನಿಸಿಕೊಂಡ ಅನಂತಭದ್ರಂ, ಬೆಂಗಳೂರು ಡೇಸ್, ಕಾಯಕುಲಂ ಕೊಚ್ಚುನ್ನಿ, ಉರುಮೈ, ಚೋಟಾ ಮುಂಬೈ, ಆಮಿ, ಪ್ರೇಮಂ ಹಾಗೂ ನೋಟ್ ಬುಕ್ ಸಿನಿಮಾಗಳ ಹಿಂದೆ ಸುನೀಲ್ ಬಾಬು ಅವರ ಕೈಚಳಕವಿದೆ. ಅನಂತಭದ್ರಂ ಸಿನಿಮಾದ ಕಲಾ ನಿರ್ದೇಶನಕ್ಕೆ ಕೇರಳ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದೆ.
ಬಾಲಿವುಡ್ ನಲ್ಲಿ ಎಂ.ಎಸ್.ಧೋನಿ, ಲಕ್ಷ್ಯ, ಘಜನಿ ಹಾಗೂ ಸ್ಪೆಷಲ್26 ಸಿನಿಮಾಗಳಿಗೂ ಸುನೀಲ್ ಬಾಬು ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೆ ತಮಿಳಿನ ಹೆಸರಾಂತ ನಟ ವಿಜಯ್ ಅವರ ಮುಂಬರುವ ಚಿತ್ರ ವಾರಿಸು ಸಿನಿಮಾಗು ಇವರೇ ಕಲಾ ನಿರ್ದೇಶಕರು.
ಇತ್ತೀಚೆಗಷ್ಟೆ ಎರ್ನಾಕುಲಂನ ಅಮೃತ ಆಸ್ಪತ್ರೆಗೆ ತೀವ್ರ ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆ ಸೇರಿದ ಸುನೀಲ್ ಬಾಬು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರು ಪತ್ನಿ ಪ್ರೇಮ ಹಾಗೂ ಮಗಳು ಆರ್ಯ ಸರಸ್ವತಿಯನ್ನು ಅಗಲಿದ್ದು ಭಾರತೀಯ ಚಿತ್ರರಂಗ ಸುನೀಲ್ ಬಾಬು ಅಕಾಲಿಕ ಮರಣಕ್ಕೆ ತೀವ್ರ ಸಂತಾಪ ಸೂಚಿಸಿದೆ.