ವಿಚಿತ್ರ ಲಿರಿಕ್ಸ್ ನಿಂದ ಸಖತ್ ಟ್ರೋಲ್ ಆಗಿದ್ದ ಜಿಂಗಚಕ ಜಿಂಗಚಕ, ಕುಚು ಕುಚು ಟುವ್ವಿ ಟುವ್ವಿ ಹಾಡು ಮತ್ತೆ ವೈರಲ್ – ಈ ಹಾಡು ಹಾಡಿದ್ದು ಈ ಪ್ರಖ್ಯಾತ ನಟ..!

ವಿಚಿತ್ರ ಲಿರಿಕ್ಸ್ ನಿಂದ ಸಖತ್ ಟ್ರೋಲ್ ಆಗಿದ್ದ ಜಿಂಗಚಕ ಜಿಂಗಚಕ, ಕುಚು ಕುಚು ಟುವ್ವಿ ಟುವ್ವಿ ಹಾಡು ಮತ್ತೆ ವೈರಲ್ – ಈ ಹಾಡು ಹಾಡಿದ್ದು ಈ ಪ್ರಖ್ಯಾತ ನಟ..!

ನ್ಯೂಸ್ ಆ್ಯರೋ‌ : 2011ರಲ್ಲಿ ತೆರೆಕಂಡಿದ್ದ 5 ಈಡಿಯೆಟ್ಸ್’ ಚಿತ್ರದ ‘ಜಿಂಗಚಕ ಜಿಂಗಚಕ’ ಹಾಡು ಯಾರಿಗೂ ಅರ್ಥವಾಗದಿದ್ದರೂ ಒಂದಷ್ಟು ಮಂದಿಯ ಗಮನ ಸೆಳೆದಿತ್ತು. ಇದೀಗ ಮತ್ತೆ ಈ ಹಾಡು ವೈರಲ್ ಆಗುತ್ತಿದೆ. ಈ ಹಾಡಿನಲ್ಲಿ ನವೀನ್ ಕೃಷ್ಣ, ಹರ್ಷಿಕಾ ಪೂಣಚ್ಚ, ವಸು ಕಾಣಿಸಿಕೊಂಡಿದ್ದರು.

ಹಾಡಿದ್ದು ಯಾರು?

ಇದೀಗ ಈ ಹಾಡು ಮತ್ತೆ ಮುನ್ನಲೆಗೆ ಬಂದಿದ್ದು ಇದನ್ನು ಹಾಡಿದ್ದು ನಟ ಅಶೋಕ್ ಶರ್ಮ ಅವರು ಎಂದು ಕಿರುತೆರೆ ನಟಿ ವೈಷ್ಣವಿ ಗೌಡ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಹೇಳಿದ್ದಾರೆ. ಅಂದಹಾಗೆ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರಿತು ಸಿಂಗ್ ನಟನೆಯ, ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್ ಅಭಿನಯಿಸುತ್ತಿದ್ದಾರೆ.

ಹಾಡಿನ ವಿಶೇಷತೆ ಏನು?

ಈ ಹಾಡು ಗಲ್ ಬಸ್ಕಿ ಭಾಷೆಯಲ್ಲಿದೆ. ಹೀಗಾಗಿ ಇದು ಯಾರಿಗೂ ಅರ್ಥವಾಗುತ್ತಿಲ್ಲ. ಈ ಹಾಡನ್ನು ಬರೆದವರು ಅಶೋಕ್ ಅವರ ತಂದೆ ರಾಮ್ ನಾರಾಯಣ್. ”ಈ ಹಾಡಿನಲ್ಲಿ ಸಾಹಿತ್ಯ ಇರುವುದಿಲ್ಲ. ‘ಜಿಂಗಚಕ ಜಿಂಗಚಕ’ ಮುಂತಾದ ಆಡುಭಾಷೆ ಪದಗಳನ್ನು ಪೋಣಿಸಿ ಹಾಡು ಬರೆದು ಪ್ರಯೋಗ ಮಾಡಿದ್ದೆ. ಇದು ಹಿಟ್ ಆಗಬಹುದು ಅಥವಾ ನಾಪತ್ತೆಯೂ ಆಗಬಹುದು” ಎಂದು ಅಂದು ರಾಮ್ ನಾರಾಯಣ್ ಹೇಳಿದ್ದರು.

ಅವಕಾಶ ಸಿಕ್ಕಿದ್ದು ಹೇಗೆ?

2001ರಲ್ಲಿ ತೆರೆಕಂಡಿದ್ದ ‘ಫ್ರೆಂಡ್ಸ್’ ಚಿತ್ರದ ‘ತಿರುಪತಿ ತಿರುಮಲ’ ಹಾಡು ಭಾರೀ ಜನಪ್ರಿಯವಾಗಿತ್ತು. ಇದನ್ನು ಅಶೋಕ್ ಹಾಡಿದ್ದರು. ಬಳಿಕ ಅವರು ನಟನೆಯತ್ತ ಮುಖ ಮಾಡಿದ್ದರಿಂದ ಗಾಯನದತ್ತ ಆಸಕ್ತಿ ತೋರಿಸಿರಲಿಲ್ಲ. ಮೊದಲ ಬಾರಿಗೆ ‘5 ಈಡಿಯೆಟ್ಸ್’ ಮೂಲಕ ನಿರ್ದೇಶನಕ್ಕಿಳಿದ ಮಾಸ್ಟರ್ ಆನಂದ್ ‘ಜಿಂಗಚಕ’ ಹಾಡಿನ ಅವಕಾಶವನ್ನು ಅಶೋಕ್ ಗೆ ನೀಡಿದರು.

ಸದ್ಯ ‘ಸೀತಾರಾಮ’ ಧಾರಾವಾಹಿಯ ಸಿಹಿ ಪಾತ್ರಧಾರಿ, ಪುಟ್ಟ ಬಾಲಕಿ ರಿತು ಸಿಂಗ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಹೀಗಾಗಿ ಈ ಹಾಡು ಮತ್ತೆ ಜನರ ಗಮನ ಸೆಳೆದಿದೆ. ಈ ಹಾಡಿಗೆ ಅಶೋಕ್ ಜೊತೆಗೆ ಅನುರಾಧ ಭಟ್ ಧ್ವನಿಗೂಡಿಸಿದ್ದಾರೆ.

ಈಗ ಅಶೋಕ್ ನಟನೆಯಲ್ಲಿ ತೊಡಗಿದ್ದಾರೆ. ಯಶ್ ನಟನೆಯ ‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’, ‘ಕೆಜಿಎಫ್’ ಸರಣಿ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅವರು ಸದ್ಯ ‘ಸೀತಾರಾಮ’ ಧಾರಾವಾಹಿಯಲ್ಲಿ ಅಶೋಕ್ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *