ತಾಯ್ತನ‌ ಅನುಭವಿಸದೆ ತಾಯಿಯಾದ ನಟಿ ಅಭಿರಾಮಿ – ಯಾರಿಗೂ ಗೊತ್ತಿರದ ಸತ್ಯ ಬಾಯ್ಬಿಟ್ಟ ಬಹುಭಾಷಾ ನಟಿ..!!

ತಾಯ್ತನ‌ ಅನುಭವಿಸದೆ ತಾಯಿಯಾದ ನಟಿ ಅಭಿರಾಮಿ – ಯಾರಿಗೂ ಗೊತ್ತಿರದ ಸತ್ಯ ಬಾಯ್ಬಿಟ್ಟ ಬಹುಭಾಷಾ ನಟಿ..!!

ನ್ಯೂಸ್ ಆ್ಯರೋ‌ : ರಕ್ತಕಣ್ಣೀರು, ಶ್ರೀರಾಮ್, ಚೌಕ, ದಶರಥ, ಲಾಲಿ ಹಾಡು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಅಭಿರಾಮಿ ಅವರು ವಿಶ್ವ ತಾಯಂದರ ದಿನದಂದು ಹೊಸ ಅಪ್‌ಡೇಟ್‌ವೊಂದನ್ನ ಹಂಚಿಕೊಂಡಿದ್ದಾರೆ. ಮದುವೆಯಾಗಿ 14 ವರ್ಷ ಕಳೆದರೂ ಮಗು ಆಗದೇ ಇರೋದಕ್ಕೆ ತಮ್ಮ ಜೀವನದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

‘ಲಾಲಿಹಾಡು’ ಖ್ಯಾತಿಯ ಅಭಿರಾಮಿ ಕೊನೆಯದಾಗಿ ಕನ್ನಡದಲ್ಲಿ ಸುದೀಪ್ ನಟನೆಯ ‘ಕೋಟಿಗಿಬ್ಬ-3’ ಚಿತ್ರದಲ್ಲಿ ಆಕೆ ನಟಿಸಿದ್ದರು. ವಿಶ್ವ ತಾಯಂದಿರ ದಿನಾಚರಣೆಯ ಸಂಭ್ರಮದಲ್ಲೇ ನಟಿ ಅಭಿರಾಮಿ ಅಭಿಮಾನಿಗಳ ಜೊತೆ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಾವು ತಾಯಿಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗರ್ಭಿಣಿ ಆಗದೇ ಮಗು ಹೇಗೆ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

20019ರಲ್ಲಿ ನಟಿ ಅಭಿರಾಮಿ, ರಾಹುಲ್ ತಪವನನ್ ಎಂಬುವವರ ಕೈ ಹಿಡಿದಿದ್ದರು. ರಾಹುಲ್ ಮಲಯಾಳಂನ ಖ್ಯಾತ ಸಾಹಿತಿ ಪುತನ್ ವಿಟಿಲ್ ನಾರಾಯಣನ್ ನಾಯರ್ ಮೊಮ್ಮಗ. ನಟಿ ಅಭಿರಾಮಿ- ರಾಹುಲ್ ದಂಪತಿ ಕಳೆದ ವರ್ಷ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದಾರೆ. ಮದುವೆಯಾಗಿ 14 ವರ್ಷ ಕಳೆದರೂ ಮಕ್ಕಳು ಆಗದ ಕಾರಣಕ್ಕೆ ಆಕೆ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಮಾಲಿವುಡ್‌ನಲ್ಲಿ ಹೇಳಲಾಗುತ್ತಿದೆ. ಆಕೆಯ ಈ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಾಯಂದಿರ ದಿನದ ಸಂಭ್ರಮದಲ್ಲೇ ತಾವು ಮಗು ದತ್ತು ಪಡೆದಿರುವ ವಿಚಾರವನ್ನು ಅಭಿರಾಮಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ- ಮಗಳ ಫೋಟೊ ಸಮೇತ ಆಕೆ ಪೋಸ್ಟ್ ಮಾಡಿ, ಗುಡ್ ನ್ಯೂಸ್ ಹೇಳಿದ್ದಾರೆ.

ಆತ್ಮೀಯ ಸ್ನೇಹಿತರೇ, ರಾಹುಲ್ ಹಾಗೂ ನಾನು ಈಗ ‘ಕಲ್ಕಿ’ (Kalki) ಎನ್ನುವ ಹೆಣ್ಣು ಮಗುವಿನ ಪೋಷಕರಾಗಿದ್ದೇವೆ ಎಂದು ಹೇಳಲು ಥ್ರಿಲ್ಲಾಗುತ್ತಿದೆ. ನಾವು ಕಳೆದ ವರ್ಷ ಮಗಳನ್ನು ದತ್ತು ಪಡೆದುಕೊಂಡಿದ್ದೆವು. ಇದು ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ನಾನು ಕೂಡ ತಾಯಿಯಾಗಿ ಇವತ್ತು ತಾಯಂದಿರ ದಿನ ಆಚರಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತದೆ. ನಾನು- ನಮ್ಮ ಕುಟುಂಬ ನನ್ನ ಹೊಸ ಪಾತ್ರ ನಿಭಾಯಿಸಲು ನಿಮ್ಮ ಆಶೀರ್ವಾದ ಕೋರುತ್ತಿದ್ದೇವೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *