ನವ್ಯಾ ನಾಯರ್ ಮುಂದೆಯೇ ನಾನು ಬೇಕಾದ ಮಹಿಳೆಯರನ್ನು ಮಂಚಕ್ಕೆ ಕರಿತೀನಿ ಎಂದಿದ್ದ ಖ್ಯಾತ ನಟ ವಿನಾಯಘನ್ – ಅದೇ ನಟನ ದಾಂಪತ್ಯ ಈಗ ಏನಾಗಿದೆ ಗೊತ್ತಾ?

ನವ್ಯಾ ನಾಯರ್ ಮುಂದೆಯೇ ನಾನು ಬೇಕಾದ ಮಹಿಳೆಯರನ್ನು ಮಂಚಕ್ಕೆ ಕರಿತೀನಿ ಎಂದಿದ್ದ ಖ್ಯಾತ ನಟ ವಿನಾಯಘನ್ – ಅದೇ ನಟನ ದಾಂಪತ್ಯ ಈಗ ಏನಾಗಿದೆ ಗೊತ್ತಾ?

ನ್ಯೂಸ್ ಆ್ಯರೋ : ಸಿನಿಮಾ ಇಂಡಸ್ಟ್ರಿಯವರು ಅಂದ್ರೆ ಹಾಗೆಯೇ ದಿನಕ್ಕೊಂದು ಮಾತು, ವಿವಾದ, ಗಲಾಟೆ ಇದೆಲ್ಲ ಇದ್ದದ್ದೇ. ಇದೀಗ ಮಲೆಯಾಳಂ ಚಿತ್ರರಂಗದ ಖ್ಯಾತ ನಟನೊಬ್ಬ ಮಹಿಳೆಯರ ಬಗ್ಗೆ ತೀರಾ ಕೆಟ್ಟದಾಗಿ ಬಹಿರಂಗ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ‘ನಾನು ಮಹಿಳೆಯರನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಂಚಕ್ಕೆ ಕರೆಯುತ್ತೇನೆ. ನೇರವಾಗಿಯೇ ಲೈಂಗಿಕ ಕ್ರಿಯೆಯ ಬಗ್ಗೆ ಮಾತುಕತೆ ನಡೆಸುತ್ತೇನೆ’ ಎಂದು ನಟಿ ನವ್ಯಾ ನಾಯರ್ ಮುಂದೆಯೇ ಹೇಳಿಕೆ ನೀಡಿ ಮಾಲಿವುಡ್ ನಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ನಟ ವಿನಾಯಘನ್ ದಾಂಪತ್ಯದಲ್ಲಿ ಇದೀಗ ಬಿರುಕುಂಟಾಗಿದೆ.

ನಟ ವಿನಾಯಘನ್ ಶುಕ್ರವಾರವಷ್ಟೇ ತಮ್ಮ ಅಧಿಕೃತ ಪೇಸ್ ಬುಕ್ ಖಾತೆಯಲ್ಲಿ ‘ನಾನು ಮಲೆಯಾಳಂ ನಟ ವಿನಾಯಘನ್. ನನ್ನ ಹಾಗೂ ನನ್ನ ಪತ್ನಿಯ ನಡುವಿನ ಎಲ್ಲಾ ವೈವಾಹಿಕ ಹಾಗೂ ಕಾನೂನು‌ ಸಂಬಂಧಗಳು ಈ ಕ್ಷಣದಿಂದ ಮುಗಿದು ಹೋಗಿದೆ‌. ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ.

ನಟ ವಿನಾಯಘನ್‌ ಬಗ್ಗೆ ಹೇಳುವುದಾದರೆ, ಇವರೊಬ್ಬ ಪ್ರತಿಭಾನ್ವಿತ ನಟ ತಮಿಳಿನ ‘ಮರಿಯನ್, ಸಿರುತೈ, ತಿಮಿರು, ಇಯೋಬಿಂಡೆ ಪುಸ್ತಕಮ್, ಸೇರಿ ಹಲವು ಚಿತ್ರಗಳಲ್ಲಿ ಖಳನಟನಾಗಿ ಅಮೋಘವಾಗಿ ನಟಿಸಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ತವರು ನೆಲ ಕೇರಳದ ಮಾಲಿವುಡ್ ನಲ್ಲಿ ಸಂಗೀತ ಸಂಯೋಜಕ ಹಾಗೂ ಗಾಯಕನಾಗಿ ಸಾಕಷ್ಟು ಮನ್ನಣೆ ಗಳಿಸಿದ್ದಾರೆ.

ಕೆಲ ವರ್ಷಗಳಿಂದ ಮಲೆಯಾಳಂ ಚಿತ್ರರಂಗದಿಂದ ಕೊಂಚ ದೂರವಿದ್ದ ನಟಿ ರಮ್ಯಾ ನಾಯರ್ ಕಳೆದ ವರ್ಷವಷ್ಟೇ ಚಿತ್ರರಂಗಕ್ಕೆ ಮರಳಿದ್ದು, ನಿರ್ದೇಶಕ ವಿ.ಕೆ.ಪ್ರಕಾಶ್ ನಿರ್ದೇಶನದ ‘ಒರಿಥಿ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಪ್ರಚಾರದ ವೇಳೆ ನಟ ವಿನಾಯಘನ್ ವಿವಾದಿತ ಹೇಳಿಕೆ ನೀಡಿದ್ದಾರೆ. ಪ್ರಚಾರದ ವೇಳೆ ವಿನಾಯಘನ್, ‘ನಾನು 10 ಮಹಿಳೆಯರ ಜೊತೆ ಮಲಗಿದ್ದೇನೆ. ನನ್ನೊಂದಿಗೆ ಮಂಚಕ್ಕೆ ಬರುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಅವರು ಒಪ್ಪಿದರೆ ಮಾತ್ರ ಮುಂದುವರೆಯುತ್ತೇನೆ, ಇಲ್ಲವಾದರೆ ಇಲ್ಲ. ಮಹಿಳೆಯರ ಜೊತೆ ಲೈಂಗಿಕತೆಯ ಬಗ್ಗೆ ಕೇಳುವುದು ‘ಮಿ ಟೂ’ ಎಂದಾದರೆ ನಾನದನ್ನು ಮುಂದುವರೆಸುತ್ತೇನೆ’ ಎಂದಿದ್ದರು.

ಈ ಮಾತಿನಿಂದ ಮಲೆಯಾಳಂನ ಹಲವು ಸ್ಟಾರ್ ನಟರು ಕೋಪಿಸಿಕೊಂಡಿದ್ದರು. ಈ ವಿವಾದಾತ್ಮಕ ಹೇಳಿಕೆ ನೀಡಿದಾಗ ನಟಿ ನವ್ಯಾ ನಾಯರ್ ಕೂಡ ವೇದಿಕೆಯಲ್ಲಿದ್ದರು. ಆದರೆ ವಿನಾಯಘನ್ ಮಾತಿಕೆ ಖಂಡನೆ ವ್ಯಕ್ತಪಡಿಸದ ಕಾರಣಕ್ಕೆ ಅವರೂ ಕೂಡ ತೀವ್ರ ವಿವಾದಕ್ಕೆ ಗುರಿಯಾಗಿದ್ದರು. ಅನಂತರ ನವ್ಯಾ ನಾಯರ್ ‘ಆ ಕ್ಷಣದಲ್ಲಿ ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ’ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು. ವಿವಾದಾತ್ಮಕ ಹೇಳಿಕೆ ನೀಡಿರುವ ವಿನಾಯಘನ್ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಜೈಲರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *