ಬರೋಬ್ಬರಿ 4 ಕೋಟಿ ರೂ. ಬೆಲೆಯ ಕಾರು ಖರೀದಿಸಿದ ರಣಬೀರ್ ಕಪೂರ್ – ಯಾವ ಕಾರ್? ಏನಿದರ ವಿಶೇಷತೆ?

ಬರೋಬ್ಬರಿ 4 ಕೋಟಿ ರೂ. ಬೆಲೆಯ ಕಾರು ಖರೀದಿಸಿದ ರಣಬೀರ್ ಕಪೂರ್ – ಯಾವ ಕಾರ್? ಏನಿದರ ವಿಶೇಷತೆ?

ನ್ಯೂಸ್ ಆ್ಯರೋ‌ : ಬಾಲಿವುಡ್ ನಟ ರಣಬೀರ್ ಕಪೂರ್ ಸದ್ಯ ದುಬಾರಿ ಬೆಲೆಯ ರೇಂಜ್ ರೋವರ್ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಸಾಕಷ್ಟು ಕಾರು ಕ್ರೇಜ್ ಹೊಂದಿರುವ ಈ ಬ್ರಹ್ಮಾಸ್ತ್ರ ನಟನ ಸಂಗ್ರಹಕ್ಕೆ ಮತ್ತೊಂದು ವಿಶೇಷ ವಾಹನದ ಸೇರ್ಪಡೆಯಾಗಿದೆ.

ಮಾಡೆಲ್ ಯಾವುದು?

ರಣಬೀರ್ ಕಪೂರ್ 5ನೇ ತಲೆಮಾರಿನ ನ್ಯೂ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ಈ ಮಾಡೆಲ್ ಲಾಂಚ್ ಆಗಿತ್ತು. ಇದರ ಬೆಲೆ 4 ಕೋಟಿ ರೂ. ಇದು ಭಾರತದಲ್ಲಿ ಬೆಂಟ್ಲಿ ಬೆಂಟ್ಯಾಗ್ಯಾ, ಮೇಬಾಕ್ ಜಿ.ಎಲ್.ಎಸ್., ಆಸ್ಟ್ರನ್ ಮಾರ್ಟಿನ್ ಡಿ.ಬಿ.ಎಕ್ಸ್. ಮುಂತಾದ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಈ ಮಾಡೆಲ್ ಪೂರ್ಣ ಇಂಡಿಪೆಂಡೆಂಟ್ ಏರ್ ಸಸ್ಪೆನ್ಷನ್ ಸಿಸ್ಟಮ್ ಮತ್ತು ಆಲ್ ವ್ಹೀಲ್ ಸ್ಟಿಯರಿಂಗ್ ಹೊಂದಿದೆ. 6 ಮತ್ತು 8 ಸಿಲಿಂಡರ್ ಆಯ್ಕೆಗಳ ಎಂಜಿನ್ ನಲ್ಲಿ ಈ ಮಾದರಿ ಕಾರು ಲಭ್ಯ. ಇದರಲ್ಲಿ 4.4 ಲೀಟರ್ ನ ಟ್ವಿನ್ ಟರ್ಬೊ ವಿ8 ಎಂಜಿನ್ ಇದೆ. ಇದು 523 ಬಿ.ಎಚ್.ಪಿ. ಮತ್ತು 750 ಎನ್.ಎಂ. ಪೀಕ್ ಟಾರ್ಕ್ ಒದಗಿಸುತ್ತದೆ.

ರಣಬೀರ್ ಕಪೂರ್ ಬಳಿ ಈಗಾಗಲೇ ಮರ್ಸಿಡಿಸ್ ಬೆಂಝ್ ಎಎಂಜಿ ಜಿ 63, ಔಡಿ ಎ8ಎಲ್, ಲ್ಯಾಂಡ್ ರೇಂಜ್ ರೋವರ್ ಸ್ಪೋರ್ಟ್, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ಯೂ ಮತ್ತಿತರ ಕಾರುಗಳ ಸಂಗ್ರಹವಿದೆ.

ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ರಣಬೀರ್ ಕಪೂರ್ ಸದ್ಯ ‘ಅನಿಮಲ್’ ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ. ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಹು ನಿರೀಕ್ಷಿತ ಈ ಸಿನಿಮಾ ಡಿಸೆಂಬರ್ 1ರಂದು ತೆರೆಗೆ ಬರಲಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *