ರಸ್ತೆಯಲ್ಲಿ ಮತ್ತೆ ಟಾಟಾ ಸುಮೋ ದರ್ಬಾರ್ ಗೆ ಕ್ಷಣಗಣನೆ‌ – ಹೊಸ ರೂಪದಲ್ಲಿ ಬರಲಿದೆ ಒಂದು ಕಾಲದ ಜನಪ್ರಿಯ ವಾಹನ

ರಸ್ತೆಯಲ್ಲಿ ಮತ್ತೆ ಟಾಟಾ ಸುಮೋ ದರ್ಬಾರ್ ಗೆ ಕ್ಷಣಗಣನೆ‌ – ಹೊಸ ರೂಪದಲ್ಲಿ ಬರಲಿದೆ ಒಂದು ಕಾಲದ ಜನಪ್ರಿಯ ವಾಹನ

ನ್ಯೂಸ್ ಆ್ಯರೋ‌ : ಕೆಲವು ವರ್ಷಗಳ ಹಿಂದಿನ ಮಾತು. ಆಗ ಟಾಟಾ ಸುಮೋ ವಾಹನ ಬಹಳ ಜನಪ್ರಿಯವಾಗಿತ್ತು. ಪ್ರಯಾಣಕ್ಕೆ ಹೇಳಿ ಮಾಡಿಸಿದಂತಹ ವಾಹನ ಇದಾಗಿತ್ತು. ಬಳಿಕ ಇದರ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಸುಮೋ ಅಭಿಮಾನಿಗಳಿಗೆ ಖುಷಿ ಪಡುವ ಸುದ್ದಿ ಹೊರಬಂದಿದೆ. ಸುಮೋ ಗಾಡಿಯನ್ನು ನವೀಕರಿಸಿ ಟಾಟಾ ಮತ್ತೆ ಉತ್ಪಾದನೆ ಮಾಡಲಿದೆಯಂತೆ..!!

ಹೊಸ ಮಾದರಿಯ ಸುಮೋ ಎಸ್.ಯು.ಬಿ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದು ವಿಶೇಷ ತಂತ್ರಜ್ಞಾನಗಳನ್ನು ಒಳಗೊಂಡು ರಸ್ತೆಗಿಳಿಯಲಿದೆ. ಹೊಸ ರೀತಿಯ ಹೆಡ್ ಲ್ಯಾಂಪ್, ಕ್ರೋಮೋ ಫಿನಿಶಿಂಗ್ ಗ್ರಿಲ್, ಟೈಲ್ ಲೈಟ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಬ್ಲೂಟೂತ್ ಹೊಂದಾಣಿಕೆ, ಮ್ಯೂಸಿಕ್ ಸಿಸ್ಟಮ್, ಅಡ್ಜೆಸ್ಟೇಬಲ್ ಡ್ರೈವರ್ ಸೀಟ್, ಸನ್ರೂಫ್ ಕೂಡ ಇದರಲ್ಲಿ ಅಳವಡಿಸಲಾಗಿದೆ ಎನ್ನಲಾಗುತ್ತಿದೆ.

ಸುರಕ್ಷತೆಗೆ ಒತ್ತು

ಸುರಕ್ಷತೆಯ ವಿಷಯದಲ್ಲಿ ಟಾಟಾ ಸುಮೋ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕಂಪೆನಿ ಹೇಳಿದೆ. ಪ್ರಯಾಣಿಕರ ಬದಿಯಲ್ಲಿ ಏರ್ ಬ್ಯಾಗ್, ಡ್ರೈವರ್ ಏರ್ ಬ್ಯಾಗ್ ಮೊದಲಾದವುಗಳನ್ನು ಹೊಂದಿದೆ. ಜೊತೆಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಪವರ್ ಲಾಕ್ ಮೊದಲಾದ ತಂತ್ರಜ್ಞಾನಗಳನ್ನು ಕೂಡ ಈ ಕಾರಿನಲ್ಲಿ ಅಳವಡಿಸಲಾಗಿದೆ.

1.2 ಲೀಟರ್ ಟರ್ಬೋ ಚಾರ್ಜ್ ರೆವೋಟ್ರಾನ್ ಎಂಜಿನ್ ಇದ್ದು, ಇದು ನೆಕ್ಸಾನ್ ಎಂಜಿನ್ ಜೊತೆಗೆ ಅನೇಕ ರೀತಿಯಲ್ಲಿ ಹೋಲುತ್ತದೆ. 118.35 ಬಿ ಎಚ್ ಪಿ ಪವರ್ ಹಾಗೂ 170 ಎಂಎಂ ಟಾರ್ಕ್ ಉತ್ಪಾದಿಸುವ ಕಾರ್ಯಕ್ಷಮತೆ ಹೊಂದಿದೆ. ಬೆಲೆ 12ರಿಂದ 15 ಲಕ್ಷ ರೂ.ಇರುವ ಸಾಧ್ಯತೆ ಇದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *