ವಾಹನದ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ರೆ ಹುಷಾರ್..! – ಅಪಾಯಕ್ಕೆ ಕಾರಣವಾಗುತ್ತೆ ಈ  ಅಂಶಗಳು‌‌..!

ವಾಹನದ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ರೆ ಹುಷಾರ್..! – ಅಪಾಯಕ್ಕೆ ಕಾರಣವಾಗುತ್ತೆ ಈ ಅಂಶಗಳು‌‌..!

ನ್ಯೂಸ್ ಆ್ಯರೋ‌ : ಕೆಲವು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ನಮ್ಮ ಪ್ರಯಾಣವನ್ನು ಸುರಕ್ಷಿತವಾಗಿಸಬಹುದು ಎನ್ನುತ್ತಾರೆ ತಜ್ಞರು. ರಸ್ತೆ ನಿಯಮಗಳ ಜೊತೆಗೆ ವಾಹನಗಳ ಒಳಗೂ ಪಾಲಿಸಬೇಕಾದ ಕೆಲವು ನಿಯಮಗಳಿದ್ದು, ಅದರಂತೆ ನಡೆದುಕೊಂಡರೆ ಯಾವುದೇ ಅಪಾಯವಿಲ್ಲ. ಆ ಪೈಕಿ ಕಾರಿನ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡಬಾರದು ಎನ್ನುವ ನಿಯಮವೂ ಒಂದು.

ಯಾಕೆ ಅಪಾಯಕಾರಿ?

ಕಾರಿನ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಪ್ರಯಾಣ ಮಾಡುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಯಾಕೆಂದರೆ ಅದೇ ಜಾಗದಲ್ಲಿ ಏರ್ ಬ್ಯಾಗ್ ಇರುತ್ತದೆ. ಹೀಗಾಗಿ ಅಪಘಾತ ಸಂಭವಿಸಿದಾಗ ಏರ್ ಬ್ಯಾಗ್ ತೆರೆದುಕೊಂಡರೂ ತೀವ್ರ ಗಾಯಗಳಾಗಲಿವೆ.

ಅಲ್ಲದೆ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟು ಕುಳಿತುಕೊಳ್ಳುವಾಗ ಸೀಟ್ ಬೆಲ್ಟ್ ಧರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಪಘಾತದ ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದುಕೊಳ್ಳುವುದಿಲ್ಲ.

ಗಾಯವಾಗುವ ಸಾಧ್ಯತೆ

ಇನ್ನು ಕಾಲಿನ ಭಾರ ಮತ್ತು ದಿಢೀರ್ ಬ್ರೇಕ್ ಮತ್ತು ಎಕ್ಸ್ ಲೇಟರ್ ತುಳಿಯುವುದರಿಂದ ಒತ್ತಡ ಹೆಚ್ಚಿ ದಿಢೀರ್ ಏರ್ ಬ್ಯಾಗ್ ತೆರೆದುಕೊಳ್ಳುವ ಸಾಧ್ಯತೆ ಇದೆ. ಹೀಗಾದಾಗ ಅಪಘಾತವಾಗದೆ ಕಾಲಿಗೆ ಬಲವಾದ ಪಟ್ಟು ಬಿದ್ದು ಗಾಯವಾಗುವ ಸಾಧ್ಯತೆ ಇದೆ.

ಕಾಲಿನ ಭಾರದಿಂದಾಗಿ ಅಪಘಾತವಾದರೂ ಏರ್ ಬ್ಯಾಗ್ ತೆರೆಯದೇ ಇರುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಏರ್ ಬ್ಯಾಗ್ ಸರಿಯಾಗಿ ಕಾರ್ಯನಿರ್ವಹಿಸಲು ಕಾಲಿನ ಭಾರ ಅಡ್ಡಿಯಾಗಲಿದೆ. ಅಲ್ಲದೆ ಈ ರೀತಿ ಪ್ರಯಾಣ ಮಾಡುವುದು ಮೋಟಾರ್ ವಾಹನ ನಿಯಮಕ್ಕೆ ವಿರುದ್ಧ ಸಿಕ್ಕಿ ಬಿದ್ದರೆ ದಂಡವನ್ನೂ ಕಟ್ಟಬೇಕಾಗುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *