2023ರಲ್ಲಿ ಈ ಕಾರುಗಳು ಇರುವುದಿಲ್ಲ: 2022ರಲ್ಲಿ ಮಾರುಕಟ್ಟೆಯಿಂದ ಹೊರ ನಡೆದ 5 ಕಾರುಗಳು

2023ರಲ್ಲಿ ಈ ಕಾರುಗಳು ಇರುವುದಿಲ್ಲ: 2022ರಲ್ಲಿ ಮಾರುಕಟ್ಟೆಯಿಂದ ಹೊರ ನಡೆದ 5 ಕಾರುಗಳು

ನ್ಯೂಸ್ ಆ್ಯರೋ : ಕಾರು ಮಾರಾಟ ಸಂಖ್ಯೆಯಲ್ಲಿ ಕುಸಿತ ಹಿನ್ನೆಲೆ ಹಾಗೂ ಬೇಡಿಕೆಯಿಲ್ಲದ ಕಾರಣ 2022ರಲ್ಲಿ ಕೆಲ ಕಾರು ಕಂಪನಿಗಳು ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿದ್ದು, ಆಯ್ದ 5 ಕಾರುಗಳ ವಿವರ ಇಲ್ಲಿದೆ.

ಫೋಕ್ಸ್‌ವ್ಯಾಗನ್‌ ಪೊಲೊ:

ಸುಮಾರು ಹನ್ನೆರಡು ವರ್ಷಗಳಿಂದ ದೇಶದ ರಸ್ತೆಯಲ್ಲಿ ಠೀವಿಯಿಂದ ಸಾಗಿದ ಫೋಕ್ಸ್‌ವ್ಯಾಗನ್‌ ಪೊಲೊ ಕಾರಿನ ಮಾರಾಟವನ್ನು ಭಾರತದಲ್ಲಿ ನಿಲ್ಲಿಸಲಾಗಿದೆ. ದೇಶದಲ್ಲಿ ಇಲ್ಲಿಯವರೆಗೆ 25 ಲಕ್ಷ ಪೊಲೊ ಕಾರುಗಳು ಮಾರಾಟವಾಗಿದೆ. ಇದು ಫೋಕ್ಸ್‌ವ್ಯಾಗನ್‌ ಕಂಪನಿಯ ಅತ್ಯುತ್ತಮ ಮಾರಾಟದ ಕಾರುಗಳ ಪಟ್ಟಿಯಲ್ಲಿ ಒಂದಾಗಿತ್ತು.

ನ್ಯೂ ಹುಂಡೈ ಸ್ಯಾಂಟ್ರೊ ಕಾರು:

2018ರಲ್ಲಿ ಈ ಕಾರು ಭಾರತದ ಮಾರುಕಟ್ಟೆಗೆ ಬಂದಿತ್ತು. ಆದರೆ, ದೇಶದಲ್ಲಿ ಆರಂಭಿಕ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ತೀವ್ರ ಪ್ರತಿಸ್ಪರ್ಧೆ ಇದ್ದ ಕಾರಣ ಮಾರುಕಟ್ಟೆಯಲ್ಲಿ ವಿಫಲವಾಯಿತು. ಇದೀಗ ಈ ಕಾರಿನ ಮಾರಾಟವನ್ನು ಈ ವರ್ಷ ನಿಲ್ಲಿಸಲಾಗಿದೆ.

ಮಹೀಂದ್ರದ ಅಟ್ಲುರಸ್‌ ಜಿ4:

ಉತ್ತಮ ಸಂಖ್ಯೆಯಲ್ಲಿ ಕಾರು ಮಾರಾಟವಾಗದ ಹಿನ್ನೆಲೆ 2022ರಲ್ಲಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಮಾರುತಿ ಸುಜುಕಿ ಎಸ್‌ ಕ್ರಾಸ್‌

ಮಾರುತಿ ಸುಜುಕಿ ನೆಕ್ಸಾ ನೆಟ್‌ವರ್ಕ್‌ನಲ್ಲಿ ಬಂದ ಎಸ್‌ ಕ್ರಾಸ್‌ ಕಾರು ಭಾರತದಲ್ಲಿ 2015ರಲ್ಲಿ ಲಾಂಚ್‌ ಆಗಿತ್ತು. ಆದರೆ, ಇದರ ಮಾರಾಟ ಉತ್ತಮವಾಗಿರಲಿಲ್ಲ. ಗ್ರಾಂಡ್‌ ವಿಟಾರಾ ಲಾಂಚ್‌ ಆದ ಬಳಿಕ ಎಸ್‌ ಕ್ರಾಸ್‌ ಮಾರಾಟ ನಿಲ್ಲಿಸಲಾಯಿತು.

ದಾಟ್ಸನ್‌ ರೆಡಿ ಗೋ

ದಾಟ್ಸನ್‌ ರೆಡಿ ಗೋ ಎನ್ನುವುದು ನಿಸ್ಸಾನ್‌ನ ಅತ್ಯುತ್ತಮ ಮಾರಾಟದ ಕಾರು. 2022ರಲ್ಲಿ ಈ ಕಾರಿನ ಮಾರಾಟವನ್ನು ಜಪಾನಿನ ಕಾರು ತಯಾರಿಕಾ ಕಂಪನಿ ನಿಸ್ಸಾನ್‌ ಸ್ಥಗಿತಗೊಳಿಸಿದೆ

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *