Anchor Anushree : 35 ವರ್ಷವಾದ್ರೂ ಈ ಒಂದು ಕಾರಣಕ್ಕೆ ಅನುಶ್ರೀ ಇನ್ನೂ ಮದ್ವೆಯಾಗಿಲ್ಲವಂತೆ..! – ಕಾರಣ ಏನ್ ಗೊತ್ತಾ…? ಅವರೇ ಹೇಳಿದ ಸತ್ಯವಿದು..

Anchor Anushree : 35 ವರ್ಷವಾದ್ರೂ ಈ ಒಂದು ಕಾರಣಕ್ಕೆ ಅನುಶ್ರೀ ಇನ್ನೂ ಮದ್ವೆಯಾಗಿಲ್ಲವಂತೆ..! – ಕಾರಣ ಏನ್ ಗೊತ್ತಾ…? ಅವರೇ ಹೇಳಿದ ಸತ್ಯವಿದು..

ನ್ಯೂಸ್ ಆ್ಯರೋ : ಕಿರುತೆರೆಯ ಸ್ಟಾರ್ ಆ್ಯಂಕರ್ ಅನುಶ್ರೀ ಹೆಸರು ಕೇಳದವರಿಲ್ಲ. ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುವ ಈ ತುಳುನಾಡಿನ ಬೆಡಗಿಗೆ ಇದೀಗ ಅಂತರಾಷ್ಟ್ರೀಯ ಮಟ್ಟದ ಅಭಿಮಾನಿಗಳೂ ಇದ್ದಾರೆ. ಇವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ಊಹಾಪೋಹಗಳಿವೆ. ಮದುವೆಯ ವಯಸ್ಸು ಮೀರಿದ್ರೂ ಅನುಶ್ರೀ ಇನ್ನೂ ಯಾಕೆ ಮದ್ವೆಯಾಗಿಲ್ಲ ಅನ್ನೋ ಪ್ರಶ್ನೆ ಎಲ್ಲರದ್ದು. ಇದೀಗ ಈ ಪ್ರಶ್ನೆಗೆ ತೆರೆ ಬೀಳುವ ಉತ್ತರವನ್ನು ಸ್ವತಃ ಅನುಶ್ರಿ ಅವರೇ ನೀಡಿದ್ದಾರೆ.

ಸಿನಿಮಾಗಳ ಪ್ರೀ ರಿಲೀಸ್ ಶೋ, ರಿಯಾಲಿಟಿ ಶೋ ಹೀಗೆ ಅನೇಕ ಜನಪ್ರಿಯ ಕಾರ್ಯಕಮಗಳಲ್ಲಿ ನಿರೂಪಣೆ ಮಾಡುವ ಅನುಶ್ರೀ ಕೆಲವೊಂದು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಇನ್ನು ಇವರು ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯರಲ್ಲಿ ಒಬ್ಬರು.

ಇನ್ನೂ ಮದ್ವೆಯಾಗಿಲ್ಲ ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ನೀಡಿದ ಅನುಶ್ರೀ…!

ಇನ್ನು ಇಷ್ಟೊಂದು ಹೆಸರು ಗಳಿಸಿರುವ ಅನುಶ್ರೀ ಮದುವೆಯಾಗದೆ ಒಬ್ಬಂಟಿ ಜೀವನ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ವದಂತಿಗಳಿವೆ.

ಅಂದಹಾಗೆ ಏಕಾಂಗಿಯಾಗಿ ಉಳಿಯುವ ನಿರ್ಧಾರದ ಬಗ್ಗೆ ಅನುಶ್ರೀ ಬಳಿ ಕೇಳಿದಾಗ, “ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಜೀವನದಲ್ಲಿ ಅನುಸರಿಸಿಕೊಂಡು ನಡೆಯುವ ಸಂಗಾತಿ ನನಗೆ ಇನ್ನೂ ಸಿಕ್ಕಿಲ್ಲ” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಅನೇಕ ಸೆಲೆಬ್ರೆಟಿಗಳ ಸಂದರ್ಶನ ಮಾಡುವಾಗಲೂ ಇವರು ಮದುವೆಯ ವಿಚಾರ ಬಂದ್ರೆ ‘ಹೌದು. ಮದ್ವೆಯಾಗುವ ಹುಡುಗ ಅಥವಾ ಹುಡುಗಿ ಗಂಡ- ಹೆಂಡತಿ ಎಂಬ ಭಾವನೆಯಲ್ಲಿ ಮಾತ್ರವಲ್ಲದೆ ಆತ್ಮೀಯ ಸ್ನೇಹಿತರಂತೆ ಭಾಂದವ್ಯದಲ್ಲಿ ಇರಬೇಕು. ದಾಂಪತ್ಯದಲ್ಲಿ ಹೊಂದಾಣಿಕೆ ಬಹಳ ಮುಖ್ಯ’ ಎಂದು ಆಗಾಗ ಹೇಳುತ್ತಿರುತ್ತಾರೆ.

ಅಷ್ಟೇ ಅಲ್ಲದೆ, ಅನುಶ್ರೀಗೆ ಯಾವಾಗಲೂ ಮದುವೆಗಿಂತ ತನ್ನ ವೃತ್ತಿಜೀವನ ಮುಖ್ಯ. ಅವರಿಗೆ ತಮ್ಮ ಜೀವನದಲ್ಲಿ ಇನ್ನಷ್ಟೂ ಸಾಧಿಸಬೇಕೆಂಬ ಹಂಬಲವಿದೆ. ಇದೇ ಕಾರಣದಿಂದ 35 ವರ್ಷ ವಯಸ್ಸಾದರೂ ಮದುವೆಯಾಗದೆ ಉಳಿದಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಆ್ಯಂಕರ್ ಅನುಶ್ರೀ ಯಾರನ್ನು ಮದ್ವೆಯಾಗಬಹುದು ಅನ್ನೋ ಕ್ಯೂರಿಯಾಸಿಟಿ ಜನರದ್ದು. ಅದಕ್ಕೆ ಅವರೇ ಉತ್ತರ ಕೊಡಬೇಕಷ್ಟೆ..!

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *