ರೆಡಿಮೆಡ್ ಗುಲಾಬ್ ಜಾಮೂನ್ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮುನ್ನ ಈ ವೈರಲ್ ವಿಡಿಯೋ ನೋಡಿ – ನಿಮ್ಮ ಜನ್ಮದಲ್ಲಿ ಮತ್ತೆಂದೂ ನೀವು ಗುಲಾಬ್ ಜಾಮೂನ್ ಮುಟ್ಟಲ್ಲ!

ರೆಡಿಮೆಡ್ ಗುಲಾಬ್ ಜಾಮೂನ್ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮುನ್ನ ಈ ವೈರಲ್ ವಿಡಿಯೋ ನೋಡಿ – ನಿಮ್ಮ ಜನ್ಮದಲ್ಲಿ ಮತ್ತೆಂದೂ ನೀವು ಗುಲಾಬ್ ಜಾಮೂನ್ ಮುಟ್ಟಲ್ಲ!

ನ್ಯೂಸ್ ಆ್ಯರೋ : ಬಹಳ ಮೃದುವಾಗಿರುವ, ಬಾಯಲ್ಲಿಟ್ಟರೆ ಕರಗುವಂತಹ ರುಚಿಯಾದ ಗುಲಾಬ್ ಜಾಮೂನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮನೆಯಲ್ಲಿ ಸಿಹಿ ತಿನಿಸು ಮಾಡುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ರೆಡಿಮೆಡ್ ಗುಲಾಬ್ ಜಾಮೂನ್ ತಂದು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಅಂತವರ ಸಾಲಿಗೆ ನೀವು ಕೂಡ ಸೇರುತ್ತೀರಿ ಎಂದಾದರೆ ಇನ್ಮುಂದೆ ಹುಷಾರ್. ಗುಲಾಬ್ ಜಾಮೂನ್ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕೆ? ಅನ್ನುವುದು ನಿಮ್ಮ ಪ್ರಶ್ನೆಯಾಗಿದ್ರೆ ಈ ಕೆಳಗಿರುವ ವಿಡಿಯೋ ಮತ್ತು ವರದಿಯನ್ನು ಕಂಪ್ಲೀಟಾಗಿ ಓದಿ.

ಗುಲಾಬ್ ಜಾಮೂನ್‌ನಲ್ಲಿ ಹುಳುಗಳು ಫ್ರೀ!

ರೆಡಿಮೆಡ್ ಗುಲಾಬ್ ಜಾಮೂನನ್ನು ಚಿಕ್ಕವರಿಂದ ಮುದುಕರ ವರೆಗೆ ಎಲ್ಲರೂ‌ ಕೂಡ ಇಷ್ಟ ಪಟ್ಟು ತಿನ್ನುತ್ತಾರೆ‌. ಆದರೆ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋ ಒಂದು ಗುಲಾಬ್ ಜಾಮೂನ್ ಪ್ರಿಯರನ್ನು ಆತಂಕಕ್ಕೀಡು ಮಾಡಿದೆ‌. ಹೌದು ರೆಡಿಮೆಡ್ ಗುಲಾಬ್ ಜಾಮೂನ್ ತಂದು ತಿನ್ನುವಾಗ ಅದು ಯಾವಾಗ ತಯಾರಾಗಿದೆ?, ಹೇಗೆ ತಯಾರಾಗಿದೆ? ಇದ್ಯಾವುದನ್ನೂ ಕೂಡ ನಾವು ಯೋಚಿಸುವುದೇ ಇಲ್ಲ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರೆಡಿಮೆಡ್ ಗುಲಾಬ್ ಜಾಮೂನ್ ನಲ್ಲಿ ಬಿಳಿ ಬಣ್ಣದ ಹುಳು ಪತ್ತೆಯಾಗಿದ್ದು ದೊಡ್ಡ ಸುದ್ದಿಯಾಗಿದೆ. ಈ ವಿಡಿಯೋ ಸದ್ಯ, ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?

ಇತ್ತೀಚೆಗಷ್ಟೇ, @tn38_foodie ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೆಡಿಮೇಡ್ ಗುಲಾಬ್ ಜಾಮೂನು ಬಾಕ್ಸ್ ಒಳಗಡೆ ಬಿಳಿ ಬಣ್ಣದ ಹುಳವೊಂದು ಓಡಾಡುವುದನ್ನು ಕಾಣಬಹುದು. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ರೆಡಿಮೇಡ್ ಗುಲಾಬ್ ಜಾಮೂನ್ ಖರೀದಿಸುತ್ತಾರೆ. ಅದನ್ನು ಓಪನ್ ಮಾಡಿ ನೋಡಿದಾಗ, ಅದರಲ್ಲಿರುವ ಒಂದು ಗುಲಾಬ್ ಜಾಮೂನಿನ ಮೇಲೆ ಬಿಳಿ ಬಣ್ಣದ ಹುಳವೊಂದು ಇರುವುದು ಪತ್ತೆಯಾಗಿದೆ. ಈ ವಿಡಿಯೋ‌ ಕಂಡು ನೆಟ್ಟಿಗರು‌ ಬೆಚ್ಚಿ ಬಿದ್ದಿರುವುದಂತು ನಿಜ.

ರೆಡಿಮೆಡ್ ಆಹಾರ ಪ್ರಿಯರೇ ಎಚ್ಚರ!

ಕೆಲಸ ಕಡಿಮೆ ಎಂದು ಯೋಚಿಸಿ ಮಾರುಕಟ್ಟೆಯಿಂದ ಈ ರೀತಿ ರೆಡಿಮೆಡ್ ಆಹಾರ ತಂದು ಮನೆಯವರಿಗೆಲ್ಲ ಹಂಚಿ ತಿನ್ನುವ ಮುನ್ನ ಎಚ್ಚರ ವಹಿಸುವುದು ಉತ್ತಮ. ನೈರ್ಮಲ್ಯ ಪಾಲಿಸದಿದ್ದರೆ, ಆಹಾರ ತಯಾರಿಸುವ ಘಟಕದ ಸುತ್ತ ಶುಚಿತ್ವ ಕಾಪಾಡದಿದ್ದರೆ ಮಾತ್ರ ಇಂತಹ ಹುಳುಗಳು ಆಹಾರದಲ್ಲಿ ಉತ್ಪತ್ತಿಯಾಗುತ್ತದೆ. ಆದ್ದರಿಂದ ರೆಡಿಮೆಡ್ ಆಹಾರ ಸೇವಿಸುವ ಮುನ್ನ ನೂರು ಬಾರಿ ಯೋಚಿಸಿ ಎಂಬುವುದೇ ನಮ್ಮ ಕಳಕಳಿ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *