ಡಾ.ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ನಟಿಯ ರೆಸಾರ್ಟ್‌ ನಲ್ಲಿ ರೂಂ ಬಾಯ್ ಅಕ್ರಮ ಬಯಲು – ಅಲ್ಲಿ ಆಗಿದ್ದಾದರೂ ಏನು?

ಡಾ.ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ನಟಿಯ ರೆಸಾರ್ಟ್‌ ನಲ್ಲಿ ರೂಂ ಬಾಯ್ ಅಕ್ರಮ ಬಯಲು – ಅಲ್ಲಿ ಆಗಿದ್ದಾದರೂ ಏನು?

ನ್ಯೂಸ್ ಆ್ಯರೋ‌ : ತಮಿಳು ಚಿತ್ರರಂಗದ ಜನಪ್ರಿಯ ನಟಿ ಸಂಧ್ಯಾ. ‘ಕಾದಲ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಅವರು ಡಾ.ವಿಷ್ಣುವರ್ಧನ್ ನಟಿಸಿದ್ದ ಕನ್ನಡದ ‘ಆಪ್ತರಕ್ಷಕ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. 2016ರಿಂದ ಅಭಿನಯದಿಂದ ದೂರವಿರುವ ಅವರು ಸ್ವಂತ ಉದ್ಯಮ ನೋಡಿಕೊಳ್ಳುತ್ತಿದ್ದಾರೆ. ಇದೀಗ ಅವರ ಒಡೆತನದ ರೆಸಾರ್ಟ್‌ ನಲ್ಲಿ ಅಹಿತಕರ ಘಟನೆ ನಡೆದಿದೆ. ತನ್ನದಲ್ಲದ ತಪ್ಪಿಗೆ ಅವರ ರೆಸಾರ್ಟ್ ಗೆ ಕೆಟ್ಟ ಹೆಸರು ಬಂದಿದೆ.

ತಮಿಳುನಾಡಿನ ಕೂವತ್ತೂತು ಪರಮಕುಡಿಯಲ್ಲಿ ಬೀಚ್​ ಪಕ್ಕದಲ್ಲಿ ಸಂಧ್ಯಾ ಮತ್ತು ಪತಿ ವೆಂಕಟೇಶ್​ ಮಾಲಕತ್ವದಲ್ಲಿ ‘ಪರ್ಲ್​ ಬೀಚ್​’ ಹೆಸರಿನ ರೆಸಾರ್ಟ್​ ಇದೆ. ಇಲ್ಲಿಗೆ ಅತಿಥಿಗಳಾಗಿ ಬಂದಿದ್ದ ರಾಮಚಂದ್ರನ್​ ಮತ್ತು ಅವರ ಗರ್ಲ್​ಫ್ರೆಂಡ್​ ವಿಲ್ಲಾದಲ್ಲಿ ಉಳಿದುಕೊಂಡಿದ್ದರು. ಇಬ್ಬರೂ ಮದ್ಯಪಾನ ಮಾಡಿ ಮಲಗಿದ್ದರು.

ಈ ವೇಳೆ ರೆಸಾರ್ಟ್​ನಲ್ಲಿದ್ದ ರೂಮ್​ ಬಾಯ್​ ಸುಭಾಷ್​​, ಸ್ಪೇರ್​ ಕೀ ಬಳಸಿ ರೂಮ್​ ಒಳಗೆ ಪ್ರವೇಶಿಸಿ ರಾಮಚಂದ್ರನ್​ ಗರ್ಲ್​ಫ್ರೆಂಡ್​ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಮಲಿನಲ್ಲಿದ್ದ ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ. ಸ್ವಲ್ಪ ಹೊತ್ತಲ್ಲಿ ಎಚ್ಚರವಾದಾಗ ಆಕೆ ಜೋರಾಗಿ ಕೂಗಿಕೊಂಡಿದ್ದಾಳೆ. ಇದರಿಂದ ಗಾಬರಿಗೊಂಡ ಸುಭಾಷ್​ ಮಂಚದ ಅಡಿಯಲ್ಲಿ ಅವಿತುಕೊಂಡಿದ್ದಾನೆ.

ಬಳಿಕ ರಾಮಚಂದ್ರನ್​ ಮತ್ತು ಇತರರು ಸುಭಾಷ್​​ನನ್ನು ಪೊಲೀಸರಿಗೆ ಒಪ್ಪಿಸಿದರು. ವಿಚಾರಣೆ ವೇಳೆ ಸುಭಾಷ್​, ರಾಮಚಂದ್ರನ್​ ಗರ್ಲ್​ಫ್ರೆಂಡ್​ ಸೇರಿದಂತೆ ಸುಮಾರು 50 ಮಹಿಳೆಯರ ಬೆತ್ತಲೆ ವೀಡಿಯೋಗಳನ್ನು ಸೆರೆಹಿಡಿದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಷ್ಟೇ ಅಲ್ಲದೆ, ಸ್ವಿಮ್ಮಿಂಗ್​ಪೂಲ್​ನಲ್ಲಿ ಮಹಿಳೆಯರು ಈಜಾಡುತ್ತಿರುವ ವೀಡಿಯೋಗಳನ್ನು ರೆಕಾರ್ಡ್​ ಮಾಡಿರುವುದಾಗಿ ಹೇಳಿದ್ದಾನೆ.

ಪ್ರತಿ ದೂರು
ಇದೇ ಸಂದರ್ಭದಲ್ಲಿ ಸುಭಾಷ್ ಸಂಬಂಧಿಕರು ಆತನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದರು. ಬಳಿಕ ಪೊಲೀಸರು ಸುಭಾಷ್ ಮೇಲೆ ಹಲ್ಲೆ ನಡೆಸಿದ ರಾಮಚಂದ್ರನ್ ಮತ್ತು ಇತರ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಏಕಕಾಲದಲ್ಲಿ ಸುಭಾಷ್ ವಿರುದ್ಧ ಅತ್ಯಾಚಾರ ಯತ್ನ ಮತ್ತು ಮಾಹಿತಿ ತಂತ್ರಜ್ಞಾನದ ದುರ್ಬಳಕೆ ಪ್ರಕರಣ ದಾಖಲಿಸಲಾಗಿದೆ.

Related post

ದಿನ‌ ಭವಿಷ್ಯ 08-05-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-05-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದ ಚೇತರಿಸಿಕೊಳ್ಳುತ್ತೀರಿ. ಆದರೆ ಸ್ವಾರ್ಥಿಗಳಾದ, ಮುಂಗೋಪಿ ವ್ಯಕ್ತಿಯ ಸಹವಾಸವನ್ನು ತಪ್ಪಿಸಿ – ಅವರು ನಿಮ್ಮ ಮೇಲೆ ಒತ್ತಡ ಹಾಕಬಹುದು-ಇದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಇಂವು ನಿಮಗೆ…
ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…

Leave a Reply

Your email address will not be published. Required fields are marked *