ಪಂಜುರ್ಲಿ ವೇಷ ಧರಿಸಿ ಕ್ರಿಕೆಟ್‌ ಸ್ಟೇಡಿಯಂಗೆ ಬಂದ ಅಭಿಮಾನಿ – ಇದೆಲ್ಲ ಕಾಂತಾರ ಮಹಿಮೆ, ದಯವಿಟ್ಟು ‘ಕಾಂತಾರ -2’ ಬೇಡ ಎನ್ನುತ್ತಿದ್ದಾರೆ ಕೆಲ ಕರಾವಳಿಗರು

ಪಂಜುರ್ಲಿ ವೇಷ ಧರಿಸಿ ಕ್ರಿಕೆಟ್‌ ಸ್ಟೇಡಿಯಂಗೆ ಬಂದ ಅಭಿಮಾನಿ – ಇದೆಲ್ಲ ಕಾಂತಾರ ಮಹಿಮೆ, ದಯವಿಟ್ಟು ‘ಕಾಂತಾರ -2’ ಬೇಡ ಎನ್ನುತ್ತಿದ್ದಾರೆ ಕೆಲ ಕರಾವಳಿಗರು

ನ್ಯೂಸ್‌ ಆ್ಯರೋ : ರಿಷಬ್‌ ಶೆಟ್ಟಿ ನಿರ್ದೇಶನ ಕಾಂತಾರ ಚಿತ್ರದ ಹವಾ ಇನ್ನೂ ನಿಂತಿಲ್ಲ. ಈ ಮಧ್ಯೆ ಈಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನಡೆದ ಐಪಿಎಲ್‌ ಪಂದ್ಯದಲ್ಲಿ ಅಭಿಮಾನಿಯೊಬ್ಬರು ಪಂಜುರ್ಲಿ ವೇಷ ಧರಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇದಕ್ಕೆ ತುಳುವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂತಾರ ಸಿನಿಮಾ ವಿಶ್ವದಲ್ಲೇ ಎಲ್ಲರನ್ನೂ ಮೋಡಿ ಮಾಡಿದೆ. ಸಿನಿಮಾ ತೆರೆ ಕಾಣುವವರೆಗೂ ಕರಾವಳಿ ಬಗ್ಗೆ ಮಾಹಿತಿ ಇಲ್ಲದ ಬಹಳಷ್ಟು ಜನರು, ತುಳುನಾಡಿನ ಸಂಸ್ಕೃತಿ, ಪಂಜುರ್ಲಿ ದೈವದ ಬಗ್ಗೆ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿ, ದಾಖಲೆಯ ಗಳಿಕೆ ಕಂಡಿತ್ತು.

‘ಕಾಂತಾರ’ ಯಶಸ್ಸಿನ ಖುಷಿಗೆ ರಿಷಬ್‌ ಶೆಟ್ಟಿ ಪ್ರೀಕ್ವೆಲ್‌ ಮಾಡಲು ಹೊರಟಿದ್ದಾರೆ. ಕಾಂತಾರ ಮುಂದುವರೆದ ಭಾಗ ಬರಬಹುದು ಎಂದು ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸಿದ್ದರು. ಆದರೆ, ಈಗ ನೀವು ನೋಡಿದ್ದೇ ಸೀಕ್ವೆಲ್‌, ಈಗ ಮಾಡಲು ಹೊರಟಿರುವುದು ಪ್ರೀಕ್ವೆಲ್‌. ಆದಷ್ಟು ಬೇಗ ಫೋನ್‌ ಸ್ವಿಚ್‌ ಆಫ್‌ ಮಾಡಿ ಕಥೆ ಬರೆಯಲು ಕೂರುತ್ತೇನೆ ಎಂದಿದ್ದರು. ಅದರಂತೆ, ಯುಗಾದಿ ಹಬ್ಬದಂದು ‘ಕಾಂತಾರ’ ಪ್ರೀಕ್ವೆಲ್‌ಗೆ ಕಥೆ ಬರೆಯಲು ಆರಂಭಿಸುತ್ತಿರುವುದಾಗಿ ಪೋಸ್ಟ್‌ ಹಂಚಿಕೊಂಡಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಯಿಂದ ರೋಸಿ ಹೋಗಿರುವ ತುಳುನಾಡಿನ ಕೆಲ ಜನರು ದಯವಿಟ್ಟು ‘ಕಾಂತಾರ 2’ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

‘ಕಾಂತಾರ’ ಸಿನಿಮಾ ತೆರೆ ಕಂಡ ನಂತರ ಕೆಲವೆಡೆ ದೈವದ ಹೆಸರು ಹೇಳಿಕೊಂಡು ಹಣ ಸುಳಿಗೆ ಮಾಡುವ ದಂಧೆ ಆರಂಭಿಸಿದ್ದರು. ಕೆಲವರು ದೈವದ ವೇಷ ಧರಿಸಿ ಅದನ್ನು ಅಪಹಾಸ್ಯ ಮಾಡಿದ್ದರು. ಶಾಲಾ ಕಾಲೇಜುಗಳಲ್ಲಿ ಕೂಡಾ ಮಕ್ಕಳು ಪಂಜುರ್ಲಿ ವೇಷ ಧರಿಸಿ ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದೀಗ ಐಪಿಎಲ್‌ ಪಂದ್ಯಾವಳಿಯಲ್ಲಿ ಕೂಡಾ ವ್ಯಕ್ತಿಯೊಬ್ಬರು ಪಂಜುರ್ಲಿ ವೇಷ ಧರಿಸಿ ಕಾಣಿಸಿಕೊಂಡಿರುವುದು ತುಳುನಾಡ ಜನರ ಬೇಸರಕ್ಕೆ ಕಾರಣವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ಪಂದ್ಯದ ವೇಳೆ ಸ್ಟೇಡಿಯಂನಲ್ಲಿದ್ದವರು ದೈವದ ವೇಷ ಹಾಕಿ ಬಂದ ವ್ಯಕ್ತಿಯೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದನ್ನು ನೋಡಿದವರು, ತುಳುನಾಡಿಗೆ ಮಾತ್ರ ಸೀಮಿತವಾಗಿದ್ದ ಪಂಜುರ್ಲಿ ಹಾಗೂ ದೈವದ ನೀತಿ ನಿಯಮವನ್ನು ಈ ರೀತಿ ಬೇಕಾಬಿಟ್ಟಿ ಬಳಸಿಕೊಳ್ಳುವುದು ಸರಿಯಲ್ಲ. ಪಂಜುರ್ಲಿ ಎಂದರೆ ಮನರಂಜನೆ ಅಲ್ಲ. ದಯವಿಟ್ಟು ಇನ್ಮುಂದೆ ಆದರೂ ಇದನ್ನೆಲ್ಲಾ ನಿಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ.

ಕಾಂತಾರ ಬಿಡುಗಡೆಯಾಗುವವರೆಗೂ ಈ ಸಮಸ್ಯೆ ಇರಲಿಲ್ಲ. ಆ ಸಿನಿಮಾ ತೆರೆ ಕಂಡ ನಂತರವೇ ಇಷ್ಟೆಲ್ಲಾ ಆಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಂತಾರ 2 ರಿಲೀಸ್‌ ಆಗಲಿದೆ. ಮುಂದಿನ ದಿನಗಳಲ್ಲಿ ಇದು ಎತ್ತ ಸಾಗಲಿದೆಯೋ, ದಯವಿಟ್ಟು ಇದನ್ನು ನಿಲ್ಲಿಸಿ ಎಂದು ತುಳುನಾಡ ಮಂದಿ ನಿರ್ದೇಶಕ ರಿಷಬ್‌ ಶೆಟ್ಟಿ ಅವರನ್ನು ಮನವಿ ಮಾಡುತ್ತಿದ್ಧಾರೆ. ಇದಕ್ಕೆ ರಿಷಬ್‌ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು.

ಸಾಂತಾಕ್ಲಾಸ್‌ ವೇಷ ಧರಿಸಿದ್ದ ವ್ಯಕ್ತಿಯೊಬ್ಬರು ‘ಕಾಂತಾರ’ ಚಿತ್ರದ ಕ್ಲೈಮಾಕ್ಸ್‌ ದೃಶ್ಯವನ್ನು ಅನುಕರಣೆ ಮಾಡಿದ್ದ ವಿಡಿಯೋವೊಂದು ಕೆಲವು ದಿನಗಳ ಹಿಂದೆ ವೈರಲ್‌ ಆಗಿತ್ತು. ದೈವ ಕೂಗುವುದು, ಚಿತ್ರದ ಕ್ಲೈಮಾಕ್ಸ್‌ನಲ್ಲಿ ಪಂಜುರ್ಲಿ ದೈವ ಎಲ್ಲರ ಕೈ ಹಿಡಿದುಕೊಳ್ಳುವುದು, ನಂತರ ಬೆಂಕಿ ಪಂಜುಗಳನ್ನು ಹಿಡಿದು ಕಾಡಿನ ಒಳಗೆ ಓಡಿಹೋಗುವ ದೃಶ್ಯವನ್ನು ಈ ವ್ಯಕ್ತಿ ಅನುಕರಣೆ ಮಾಡಿದ್ದರು. ಆತ ಹೀಗೆ ಮಾಡುವಾಗ ಸಮೀಪದಲ್ಲೇ ಇರುವ ಕೆಲವರು ಜೋರಾಗಿ ನಗುತ್ತಾ ಪಂಜುರ್ಲಿ ದೈವವನ್ನು ಅಪಹಾಸ್ಯ ಮಾಡಿದ್ದರು. ಈ ವಿಡಿಯೋ ಬಗ್ಗೆ ಕೂಡಾ ವಿರೋಧ ವ್ಯಕ್ತವಾಗಿತ್ತು. ದೈವದ ವಿಚಾರದಲ್ಲಿ ತಮಾಷೆ ಬೇಡ ಎಂದು ಕರಾವಳಿ ಮಂದಿ ಕಮೆಂಟ್‌ ಮಾಡಿ ಆ ಯುವಕನಿಗೆ ಪಾಠ ಹೇಳಿದ್ದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *