ಸಾವಲ್ಲೂ ಜೊತೆಯಾದ ಅಪರೂಪದ ಬಾಳ ಸಂಗಾತಿ – ಅಮೆರಿಕದಲ್ಲಿ ಸಾವಿಗೀಡಾದ ಪತಿಯ ಅಂತ್ಯಕ್ರಿಯೆ ಬಳಿಕ ಪತ್ನಿ ಭಾರತದಲ್ಲಿ ಆತ್ಮಹತ್ಯೆ..!!

ಸಾವಲ್ಲೂ ಜೊತೆಯಾದ ಅಪರೂಪದ ಬಾಳ ಸಂಗಾತಿ – ಅಮೆರಿಕದಲ್ಲಿ ಸಾವಿಗೀಡಾದ ಪತಿಯ ಅಂತ್ಯಕ್ರಿಯೆ ಬಳಿಕ ಪತ್ನಿ ಭಾರತದಲ್ಲಿ ಆತ್ಮಹತ್ಯೆ..!!

ನ್ಯೂಸ್ ಆ್ಯರೋ‌ : ಅಮೆರಿಕದಲ್ಲಿ ಪತಿ ಹೃದಯಾಘಾತದಿಂದ ಮೃತಪಟ್ಟರೆ ಇತ್ತ ಭಾರತದಲ್ಲಿ ದುಃಖ ತಡೆಯಲಾರದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೋಜ್ (31) ಮತ್ತು ಸಾಹಿತಿ (29) ಮೃತ ದಂಪತಿ.

ಘಟನೆಯ ವಿವರ :

ಅಂಬರಪೇಟೆಯ ಡಿಡಿ ಕಾಲನಿ ನಿವಾಸಿ ಸಾಹಿತಿ ಒಂದೂವರೆ ವರ್ಷದ ಹಿಂದೆ ವನಸ್ಥಳಿಪುರಂ ಮೂಲದ ಸಾಫ್ಟ್​ವೇರ್​ ಎಂಜಿನಿಯರ್​ ಮನೋಜ್​ ಎಂಬವರನ್ನು ಮದುವೆ ಆಗಿದ್ದರು. ಮದುವೆ ಬಳಿಕ ಇಬ್ಬರು ಅಮೆರಿಕದ ದಲ್ಲಾಸ್​ನಲ್ಲಿ ನೆಲೆಸಿದ್ದರು. ಮೇ 2ರಂದು ಸಾಹಿತಿ ತನ್ನ ಪಾಲಕರನ್ನು ನೋಡಲೆಂದು ಅಮೆರಿಕದಿಂದ ಮರಳಿದ್ದರೆ, ಮನೋಜ್​ ಅಮೆರಿಕದಲ್ಲೇ ಉಳಿದುಕೊಂಡಿದ್ದರು.

ಮೇ 20ರಂದು ಮನೋಜ್​ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೇ 23ರಂದು ಮೃತದೇಹವನ್ನು ಅಮೆರಿಕದಿಂದ ವನಸ್ಥಳಿಪುರಂಗೆ ತರಿಸಿಕೊಳ್ಳಲಾಯಿತು. ಮೇ 24ರಂದು ಪತಿಯ ಅಂತ್ಯಕ್ರಿಯೆ ಮುಗಿಸಿ ಅದೇ ದಿನ ರಾತ್ರಿ ತನ್ನ ಪಾಲಕರ ಮನೆಗೆ ಸಾಹಿತಿ ಹಿಂತಿರುಗಿದ್ದರು. ಸಾಹಿತಿಯು ಸಹೋದರಿ ಸಂಜನಾ ಜೊತೆ ಕೋಣೆಯಲ್ಲಿ ಮಲಗಿದ್ದರು. ಸಂಜನಾ ಬೆಳಗ್ಗೆ ವಾಶ್​ರೂಮ್​ಗೆ ತೆರಳಿದಾಗ ಎದ್ದ ಸಾಹಿತಿ ರೂಮಿನ ಬಾಗಿಲನ್ನು ಲಾಕ್​ ಮಾಡಿ, ಫ್ಯಾನಿಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡಿದ್ದಾರೆ.

ಈ ವಿಚಾರ ಗೊತ್ತಾದ ತಕ್ಷಣ ರೂಮಿನ ಬಾಗಿಲು ಒಡೆದು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಾಹಿತಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದರು.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *