ಮೈಲುಗಲ್ಲು ಸೂಚನಾಫಲಕದಲ್ಲಿ ಮಹಾ ಎಡವಟ್ಟು – ನಗೆಪಾಟಲಿಗೀಡಾದ ಲೋಕೋಪಯೋಗಿ ಇಲಾಖೆ

ಮೈಲುಗಲ್ಲು ಸೂಚನಾಫಲಕದಲ್ಲಿ ಮಹಾ ಎಡವಟ್ಟು – ನಗೆಪಾಟಲಿಗೀಡಾದ ಲೋಕೋಪಯೋಗಿ ಇಲಾಖೆ

ನ್ಯೂಸ್‌ ಆ್ಯರೋ : ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹಾಕಲಾಗಿರುವ ಮೈಲಿಗಲ್ಲಿನ ಬೋರ್ಡ್‌ನಲ್ಲಿ ಮಹಾ ಎಡವಟ್ಟು ಇದೀಗ ನಗೆಪಾಟಲಿಗೆ ಕಾರಣವಾಗಿದೆ.

ಈ ಮೈಲಿಗಲ್ಲಿನಲ್ಲಿ ಸಿಗಂದೂರು, ಕೊಲ್ಲೂರು ಮತ್ತು ಭಟ್ಕಳಕ್ಕಿರುವ ಕಿ.ಮೀ ಅಂತರವನ್ನು ಬರೆಯಲಾಗಿತ್ತು. ಆದರೆ ಕನ್ನಡ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಮೂರು ಕಿ.ಮೀ ಅಂತರ ಕಂಡುಬಂದಿತ್ತು. ಸಿಗಂದೂರಿಗೆ ಅಂತರ ಸರಿಯಾಗಿದೆ. ಇನ್ನು ಕೊಲ್ಲೂರು ಮತ್ತು ಭಟ್ಕಳ ತಾಲೂಕಿನ ಕಿ.ಮೀ ಅಂತರ ಕನ್ನಡದಲ್ಲಿ ಕ್ರಮವಾಗಿ 93 ಮತ್ತು 76 ಇದ್ದರೆ ಇಂಗ್ಲಿಷ್‌ನಲ್ಲಿ 96 ಮತ್ತು 73 ಎಂದು ಬರೆಯಲಾಗಿದೆ.

ಕರ್ನಾಟಕ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಈ ತಪ್ಪು ನಡೆದಿದೆ ಎಂದು ಹೇಳಲಾಗಿತ್ತು. ಇನ್ನು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ವಿಧ ವಿಧವಾಗಿ ಕಮೆಂಟ್ ಗಳನ್ನು ಮಾಡಿದ್ದಾರೆ.

ಅದಲ್ಲದೆ ಕೊಲ್ಲೂರಿಗೆ ಹೋಗುವುದಾದರೆ ಕನ್ನಡದಲ್ಲಿ ಓದಿ ಹೋಗಿ ಬೇಗ ತಲುಪುತ್ತೀರಿ, ಭಟ್ಕಳಕ್ಕೆ ಹೋಗುವುದಾದರೆ ಇಂಗ್ಲಿಷ್‌ನಲ್ಲಿ ಬರೆದದ್ದನ್ನು ಓದಿ ಹೋಗಿ ಎಂದು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದ ಹಾಗೇ ಎಚ್ಚೆತ್ತುಕೊಂಡ ಇಲಾಖೆ ಮೈಲಿಗಲ್ಲನ್ನು ಸರಿಪಡಿಸಿದೆ. ಇದೀಗ ಕೊಲ್ಲೂರಿಗೆ 93 ಮತ್ತು ಭಟ್ಕಳಕ್ಕೆ 76 ಕಿ.ಮೀ ಎಂದು ಬರೆಯಲಾಗಿದೆ.

Related post

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…

Leave a Reply

Your email address will not be published. Required fields are marked *