ಬೈಕ್‌ನಲ್ಲಿ ಹುಚ್ಚಾಟ ಮಾಡಿ ಪ್ರಾಣ ಕಳೆದುಕೊಂಡ ಸ್ನೇಹಿತರು – ತಿಂಗಳ ಹಿಂದೆಯಷ್ಟೇ ಬೈಕ್ ಕೊಡಿಸಿದ್ದ ತಂದೆ, ಅಪಘಾತದ ವೇಳೆ ಬೈಕ್ ಎಷ್ಟು ಸ್ಪೀಡ್ ಇತ್ತು ಗೊತ್ತಾ…!?

ಬೈಕ್‌ನಲ್ಲಿ ಹುಚ್ಚಾಟ ಮಾಡಿ ಪ್ರಾಣ ಕಳೆದುಕೊಂಡ ಸ್ನೇಹಿತರು – ತಿಂಗಳ ಹಿಂದೆಯಷ್ಟೇ ಬೈಕ್ ಕೊಡಿಸಿದ್ದ ತಂದೆ, ಅಪಘಾತದ ವೇಳೆ ಬೈಕ್ ಎಷ್ಟು ಸ್ಪೀಡ್ ಇತ್ತು ಗೊತ್ತಾ…!?

ನ್ಯೂಸ್ ಆ್ಯರೋ : ಅತೀ ವೇಗದ ಬೈಕ್ ಚಾಲನೆ ಹಾಗೂ ಸಾಹಸ ಮಾಡಲು ಹೋಗಿ ಗೆಳೆಯರಿಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಚೆನ್ನೈನ ತಾರಾಮಣಿ– ವೇಲಚೇರಿ ರಸ್ತೆಯಲ್ಲಿ ನಡೆದಿದೆ.

ಮೃತಪಟ್ಟ ಇಬ್ಬರು ಯುವಕರು ಕೂಡ ಕಾಲೇಜು ವಿದ್ಯಾರ್ಥಿಗಳಾಗಿದ್ದು, ತಿಂಗಳ ಹಿಂದೆಯಷ್ಟೇ ಪ್ರವೀಣ್‌ಗೆ ಅವರ ತಂದೆ ಹೊಸ ಬೈಕ್‌ನ್ನು ತೆಗೆಸಿಕೊಟ್ಟಿದ್ದರು. ಮೃತರನ್ನು ಪ್ರವೀಣ್ ಹಾಗೂ ಹರಿಹರನ್ ಎಂದು ಗುರುತಿಸಲಾಗಿದೆ.

ಪ್ರವೀನ್ ಬೈಕ್‌ನಲ್ಲಿ ಸಾಹಸ ಮಾಡಲು ಹೋಗಿ ಈ ಅವಘಡ ಸಂಭವಿಸಿದೆ. ಎಷ್ಟು ವೇಗವಾಗಿ ಬೈಕ್ ಓಡಿಸಿದ್ದೇವೆ ಎಂದು ತೋರಿಸಲು ಹಿಂಬದಿ ಕುಳಿತಿದ್ದ ಹರಿಹರನ್ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ. ಈ ವೇಳೆ ವಾಹನಕ್ಕೆ ಆಗುವ ಅಪಘಾತವನ್ನು ತಪ್ಪಿಸಲು ಹೋಗಿ ಬೈಕ್ ಡಿವೈಡರ್‌ಗೆ ಗುದ್ದಿದೆ. ಅಪಘಾತದ ಭೀಕರತೆಗೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಇನ್ನೂ ವಿಡಿಯೋದಲ್ಲಿ ಇವರಿಬ್ಬರೂ ಅತೀ ವೇಗದಿಂದ ಬೈಕ್‌ ಓಡಿಸಿರುವುದು ರೆಕಾರ್ಡ್‌ ಆಗಿದೆ. ಬೈಕ್​ನಲ್ಲಿ ಹೊರಟಿದ್ದ ಇಬ್ಬರು ಯುವಕರಿಗೆ ಸ್ಪೀಡಾಗಿ ಬೈಕ್‌ನ್ನು ಓಡಿಸುವ ಕ್ರೇಜ್‌ ತಲೆಗೆ ಹತ್ತಿತ್ತು. ಬೈಕ್​ನ ಆಕ್ಸಿಲೇಟರ್​ 20ರಲ್ಲಿ ಏರೋಕೆ ಶುರುವಾಗಿದ್ದು ಮಾತ್ರ ನಿಂತಿದ್ದು 114ಕಿಲೋ ಮೀಟರ್ ವೇಗದ ಯಮನ ರೂಪದಲ್ಲಿ…!!

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಮೃತ ಹರಿಹರನ್ ರೆಕಾರ್ಡ್ ಮಾಡಿದ್ದ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *