ಹಿಮಾಲಯನ್ ವಯಾಗ್ರಾ ಹುಡುಕಾಡಲು ಹೋದ ಐವರು ಕಣ್ಮರೆ – ಅಷ್ಟಕ್ಕೂ ಅಲ್ಲಿ ಅಂಥಾದ್ದೇನಾಗಿತ್ತು?

ಹಿಮಾಲಯನ್ ವಯಾಗ್ರಾ ಹುಡುಕಾಡಲು ಹೋದ ಐವರು ಕಣ್ಮರೆ – ಅಷ್ಟಕ್ಕೂ ಅಲ್ಲಿ ಅಂಥಾದ್ದೇನಾಗಿತ್ತು?

ನ್ಯೂಸ್ ಆ್ಯರೋ : ಕಳಪೆ ಆಹಾರ, ಮಿತಿಮೀರಿದ ಜಾಗತಿಕರಣ, ವಾತಾವರಣದ ನಿರಂತರ ಬದಲಾವಣೆಯಿಂದಾಗಿ ಮನುಷ್ಯ ಜೀವನ ಹದಗೆಡುತ್ತಿದೆ. ಇವುಗಳಿಂದಾಗಿ ದೈಹಿಕ ಸಾಮರ್ಥ್ಯ ಕಳೆದುಕೊಳ್ಳುತ್ತಿರುವ ಜನರ ಲೈಂಗಿಕ ಶಕ್ತಿಯೂ ಕುಂದುತ್ತಿದೆ. ಇದಕ್ಕಾಗಿ ಜನರು ಅನ್ಯ ಮಾರ್ಗಗಳಾದ ಗಿಡಮೂಲಿಕೆ, ಆಯುರ್ವೇದಿಕ್ ಔಷದಿಗಳ ಹುಡುಕಾಟದಲ್ಲಿದ್ದಾರೆ. ಹೀಗೆ ಕಾಮ ಶಕ್ತಿ ಹೆಚ್ಚಿಸುವ ‘ಹಿಮಾಲಯನ್ ವಯಾಗ್ರ’ ವನ್ನು ಅರಸಿ ನೇಪಾಳದ ಪರ್ವತ ಜಿಲ್ಲೆಯಾದ ಡಾರ್ಕುಲಕ್ಕೆ ತೆರಳಿದ ಐವರು ಇದೀಗ ಹಿಮಕುಸಿತದಿಂದ ಕಣ್ಮರೆಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾರ್ಕುಲದ ಎಸ್.ಪಿ ಪ್ರದೀಪ್ ಸಿಂಗ್ ಧಾಮಿ, ವಯಾಗ್ರ ಹುಡುಕಲು ಹೋದವರಲ್ಲಿ ಓರ್ವ ಪುರುಷ ಸೇರಿ ನಾಲ್ಕು ಜನ ಮಹಿಳೆಯರಿದ್ದರು. ಹಿಮಕುಸಿತದಿಂದ ಅವರು ಕಾಣೆಯಾಗಿದ್ದು, ಅವರೆಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅದಾಗ್ಯೂ ಅವರ ಪತ್ತೆಗಾಗಿ 8 ತಂಡಗಳು ತನಿಖೆ ನಡೆಸುತ್ತಿವೆ’ ಎಂದಿದ್ದಾರೆ.

ಇತ್ತೀಚೆಗಷ್ಟೇ, ನೇಪಾಳದ ಬ್ಯಾನಸ್ ಎಂಬ‌ ಹಳ್ಳಿಯ ಹಿಮ ಪ್ರದೇಶದಲ್ಲಿ ಹಿಮ‌ ಕುಸಿತವಾಗಿದೆ. ಇದೇ ಸಂದರ್ಭದಲ್ಲಿ ಹಿಮಾಲಯನ್ ವಯಾಗ್ರ ಹುಡುಕಲು ಹೋದವರು‌ ಕಣ್ಮರೆಯಾಗಿರಬಹುದು ಎಂದು ಎನ್ನಲಾಗಿದೆ.

ಹಿಮಾಲಯನ್ ವಯಾಗ್ರ ಅಂದರೇನು?

ಹಿಮಾಲಯನ್ ವಯಾಗ್ರ ಅಥವಾ ಯರ್ಸ್ ಗುಂಬಾ ಎಂಬ ಅಣಬೆ ಜಾತಿಯ ಸಸ್ಯವು ಸುಮಾರು 2ರಿಂದ 3 ಸಾವಿರ ಮೀಟರ್ ಎತ್ತರದ ಪರ್ವತ ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತದೆ. ಇದನ್ನು ಹೆಚ್ಚಾಗಿ ಚೀನಾ ಮೂಲದ ಔಷಧಗಳಲ್ಲಿ ಬಳಸಲಾಗುತ್ತದೆ. ಕಾಮೋತ್ತೇಜಕ, ಹೃದಯ ಮತ್ತು‌ ಮೂತ್ರ ಪಿಂಡದ ಸಮಸ್ಯೆಗಳಿಗೆ ಇದನ್ನು‌ ಬಳಸಲಾಗುತ್ತದೆ.

ಟಿಬೆಟ್ ನಲ್ಲಿ ಮಾತ್ರ ಸಿಗುತ್ತೆ..!!

ಈ ಹಿಮಾಲಯನ್ ವಯಾಗ್ರ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡು ಬರುತ್ತದೆ. ನೇಪಾಳದ ಜನರು ಮೇ ತಿಂಗಳಲ್ಲಿ ಯರ್ಸ್ ಗುಂಬಾ ಉತ್ಸವ ಆವರಿಸುತ್ತಾರೆ. ಮತ್ತು ಹಿಮಾಲಯನ್ ವಯಾಗ್ರ ಅರಸಿ ಪರ್ವತ ಪ್ರದೇಶಗಳಿಗೆ ತೆರಳುತ್ತಾರೆ.

Related post

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…

Leave a Reply

Your email address will not be published. Required fields are marked *