ಜಿಯೋ ಗ್ರಾಹಕರಿಗೆ ಬಂಪರ್ ಆಫರ್ – ಎರಡು ಅಗ್ಗದ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ

ಜಿಯೋ ಗ್ರಾಹಕರಿಗೆ ಬಂಪರ್ ಆಫರ್ – ಎರಡು ಅಗ್ಗದ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ

ನ್ಯೂಸ್ ಆ್ಯರೋ : ಟೆಲಿಕಾಂ ಸಾಮ್ರಾಜ್ಯದ ಚಕ್ರವರ್ತಿಯಂತೆ ಮೆರೆಯುತ್ತಿರುವ, ದೇಶದ ನಂಬರ್ 1 ಟೆಲಿಕಾಂ ಕಂಪೆನಿ‌ ಜಿಯೋ. ಗ್ರಾಹಕರನ್ನು ಸೆಳೆಯವ ಹಾಗೂ ಜಿಯೋ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಹೊಸ ರೀಚಾರ್ಜ್ ಪ್ಲ್ಯಾನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಫ್ರೀ ಡೇಟಾ, ಅನ್ ಲಿಮಿಟೆಡ್ ಕಾಲ್, ಎಸ್ ಎಮ್ ಎಸ್ ಸೌಲಭ್ಯಗಳೊಂದಿಗೆ ಜಿಯೋ ಟೆಲಿಕಾಂ ಕಡಿಮೆ ಬೆಲೆಯಲ್ಲಿ ಉತ್ತಮ ಯೋಜನೆಗಳನ್ನು ಹೊರತರುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಮತ್ತೆರಡು ಯೋಜನೆಗಳನ್ನು ಹೊರತಂದಿದೆ. ಜಿಯೋ ಗ್ರಾಹಕರಿಗಂತು‌ ಇದು ಬಂಪರ್ ಆಫರ್ ಆಗಲಿದೆ!

ಹೊಸ ₹899 ರೂ ರೀಚಾರ್ಜ್ ಪ್ಲ್ಯಾನ್

ಜಿಯೋ ಹೊರತಂದಿರುವ ಹೊಸ ರೀಚಾರ್ಜ್ ಪ್ಲ್ಯಾನ್ ಗಳಲ್ಲಿ ಇದೂ‌ ಕೂಡ ಒಂದಾಗಿದೆ. 899 ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರ‌ ಮೂಲಕ ಗ್ರಾಹಕರು ಪ್ರತಿದಿನ 2.5 ಜಿಬಿ ಡೇಟಾ ಬಳಸಬಹುದಾಗಿದೆ. ಒಟ್ಟಾರೆಯಾಗಿ ಈ ಯೋಜನೆಯ ಸಂಪೂರ್ಣ ವ್ಯಾಲಿಡಿಟಿ ಅವಧಿಗೆ 225 ಜಿಬಿ ಡೇಟಾ ಲಭ್ಯವಾಗಲಿದೆ. ಜೊತೆಗೆ ಅನ್ಲಿಮಿಟೆಡ್ ಕಾಲ್, ಎಸ್ ಎಮ್ ಎಸ್ ಕೂಡ ದೊರೆಯಲಿದೆ.‌

349 ರೀಚಾರ್ಜ್ ಪ್ಲ್ಯಾನ್

349 ರೂ. ಗಳ‌ ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ‌‌ ಯೋಜನೆ‌ ಮೂಲಕ ದಿನವೊಂದಕ್ಕೆ 2.5 ಜಿಬಿ‌ ಡೇಟಾ ಲಭ್ಯವಾಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ 75 ಜಿಬಿ ಡೇಟಾ ಸಿಗಲಿದೆ. ಇನ್ನುಳಿದಂತೆ ಅನಿಯಮಿತ ಕರೆಗಳು ಎಸ್ ಎಮ್ ಎಸ್ ದೊರೆಯಲಿದೆ.

ಹೊಸ 719 ರೂಪಾಯಿ ರೀಚಾರ್ಜ್

ಜಿಯೋ ಹೊರ ತಂದಿರುವ ಈ ರೀಚಾರ್ಚ್ ಒಟ್ಟು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಮೂಲಕ ಗ್ರಾಹಕರು ಪ್ರತಿದಿನ 2ಜಿಬಿ ಡೇಟಾ ಪಡೆಯಬುಹುದು. ಜೊತೆಗೆ ಅನಿಯಮಿತ‌ ಕರೆಗಳು‌‌ ಹಾಗೂ ದಿನವೊಂದಕ್ಕೆ 100 ಎಸ್ ಎಮ್ ಎಸ್ ದೊರೆಯಲಿದೆ. ಮುಖ್ಯವಾಗಿ ಯಾವುದೇ ನೆಟ್ವರ್ಕ್ ಗಳಿಗೂ ಉಚಿತ ಕರೆಗಳನ್ನು ಈ ಪ್ಲ್ಯಾನ್ ಮೂಲಕ ಮಾಡಬಹುದಾಗಿದೆ.

₹666 ರೀಚಾರ್ಜ್ ಪ್ಲ್ಯಾನ್

ಈ ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ವ್ಯಾಲಿಡಿಟಿ ಸಮಯದಲ್ಲಿ ಗ್ರಾಹಕರು ದಿನವೊಂದಕ್ಕೆ 1.5 ಜಿಬಿ‌ ಡೇಟಾ ಸೌಲಭ್ಯ ಪಡೆಯಬಹುದಾಗಿದೆ. ಜೊತೆಗೆ ಅನಿಯಮಿತ‌ ಕರೆಗಳು, ಉಚಿತ ಎಸ್ ಎಮ್ ಎಸ್ ಗಳು‌ ಕೂಡ ಲಭ್ಯವಾಗಲಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *