ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಚೈತ್ರಾ ಕುಂದಾಪುರ, ನಾಳೆಯಿಂದ ವಿಚಾರಣೆ – ಡ್ರಾಮಾ ಕ್ವೀನ್ ಇನ್ಮುಂದೆ ಸಿಸಿಬಿ ಪೋಲಿಸರ ಮುಂದೆ ಸತ್ಯ ಕಕ್ಕಲೇಬೇಕು‌‌..!!

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಚೈತ್ರಾ ಕುಂದಾಪುರ, ನಾಳೆಯಿಂದ ವಿಚಾರಣೆ – ಡ್ರಾಮಾ ಕ್ವೀನ್ ಇನ್ಮುಂದೆ ಸಿಸಿಬಿ ಪೋಲಿಸರ ಮುಂದೆ ಸತ್ಯ ಕಕ್ಕಲೇಬೇಕು‌‌..!!

ನ್ಯೂಸ್ ಆ್ಯರೋ‌ : ಚೈತ್ರಾ ಕುಂದಾಪುರ ಕೇಸ್ ನಲ್ಲಿ ಸಿಸಿಬಿ ಪೋಲಿಸರಿಗೆ ಕೊನೆಗೂ ಮಹತ್ವದ ಸಮಯ ಸದ್ಯ ಒದಗಿಬಂದಿದೆ. ಕಳೆದ ಮೂರುವರೆ ದಿನಗಳಿಂದ ಅನಾರೋಗ್ಯದ ಹೆಸರಿನಲ್ಲಿ ಚೈತ್ರಾ ಕುಂದಾಪುರ ನಡೆಸಿದ ನಾಟಕಕ್ಕೂ ಮುಕ್ತಿ ಸಿಕ್ಕಿದೆ. ಆಕೆಯ ದೇಹ ಸ್ಥಿತಿ ನಾರ್ಮಲ್‌ ಆಗಿದೆ. ಆಕೆಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ದೃಢೀಕರಿಸಿ ಇಂದು ಮಧ್ಯಾಹ್ನ ಆಕೆಯನ್ನು ಡಿಸ್ಚಾರ್ಜ್‌ (Chaitra Kundapura Discharged) ಮಾಡಿದ್ದಾರೆ.

ಸದ್ಯ ಚೈತ್ರಾಳನ್ನು ಆಸ್ಪತ್ರೆಯಿಂದ ಸಿಸಿಬಿ ಕಚೇರಿಗೆ ಕರೆತರಲಾಗಿದ್ದು, ನಾಳೆಯಿಂದ ಮಂಗಳವಾರದಿಂದ ಆಕೆಯ ವಿಚಾರಣೆ ಮತ್ತೆ ಶುರುವಾಗಲಿದೆ. ಕಳೆದ ಸೆಪ್ಟೆಂಬರ್‌ 12ರಂದು ರಾತ್ರಿ ಉಡುಪಿಯ ಕೃಷ್ಣ ಮಠದ ಸಮೀಪ ಬಂಧಿತಳಾಗಿದ್ದ ಚೈತ್ರಾ ಕುಂದಾಪುರಳನ್ನು ಮರುದಿನ ಬೆಂಗಳೂರಿಗೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್‌ 10 ದಿನಗಳ ಸಿಸಿಬಿ ಕಸ್ಟಡಿಗೆ ಒಪ್ಪಿಸಿತ್ತು.

ಆದರೆ ಕಳೆದ ಸೆ. 14ರಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಬಂದಿದ್ದ ಆಕೆ ʻಸ್ವಾಮೀಜಿ ಸಿಕ್ಕಾಕಿಕೊಳ್ಳಲಿ.. ಎಲ್ಲಾ ದೊಡ್ಡವರ ಹೆಸರು ಹೊರಗೆ ಬರುತ್ತದೆʼʼ ಎಂದು ಹುಳ ಬಿಟ್ಟಿದ್ದಳು. ಆದರೆ ಸೆ. 15ರಂದು ಸಿಸಿಬಿ ಕಚೇರಿಗೆ ಕರೆತಂದ ಕೆಲವೇ ನಿಮಿಷದಲ್ಲಿ ಆಕೆ ವಾಷ್‌ ರೂಮ್‌ನಲ್ಲಿ ಬಾಯಿಯಲ್ಲಿ ನೊರೆಯೊಂದಿಗೆ ಬಿದ್ದುಕೊಂಡಿದ್ದಳು.

ಅಲ್ಲಿಂದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಒಯ್ಯಲಾಯಿತು. ಮೊದಲು ಇದು ಆತ್ಮಹತ್ಯೆ ಯತ್ನ ಎಂದೂ, ಬಳಿಕ ಅಪಸ್ಮಾರ ಸಮಸ್ಯೆ ಎಂದು ಪ್ರಚಾರ ಪಡೆಯಿತು. ಅರೆಪ್ರಜ್ಞೆಯಲ್ಲಿದ್ದಂತೆ ಇದ್ದ ಚೈತ್ರಾಳನ್ನು ಪರೀಕ್ಷೆ ಮಾಡಿದಾಗ ಯಾವುದೇ ಅನಾರೋಗ್ಯವಾಗಲಿ, ವಿಷ ಸೇವನೆಯಾಗಲೀ, ಅಪಸ್ಮಾರದ ಲಕ್ಷಣಗಳಾಗಲೀ ಕಾಣಲಿಲ್ಲ. ಎಲ್ಲ ವೈದ್ಯಕೀಯ ಪ್ಯಾರಾಮೀಟರ್‌ಗಳು ಸರಿಯಾಗಿಯೇ ಇದ್ದವು. ಆಕೆ ಸಿಸಿಬಿ ಕಚೇರಿಯಲ್ಲಿ ಸಾಬೂನಿನ ನೊರೆಯನ್ನು ಮುಖಕ್ಕೆ ಹಚ್ಚಿ ನಾಟಕ ಮಾಡಿದ್ದಳು ಎಂಬ ಅಂಶ ಬಯಲಾಗಿತ್ತು.

ಆದರೆ, ಆಕೆ ಯಾವುದೇ ಪ್ರಶ್ನೆ, ಯಾವುದೇ ವಿಚಾರಕ್ಕೂ ಪ್ರತಿಕ್ರಿಯಿಸದೆ ಇರುವುದರಿಂದ ಆರೋಗ್ಯ ತಪಾಸಣೆ ಮುಂದುವರಿಸಲಾಗಿತ್ತು. ಮಲ ಮೂತ್ರ ವಾಂತಿ ಸೇರಿದಂತೆ ಎಲ್ಲ ರೀತಿಯ ತಪಾಸಣೆ ನಡೆಸಿದರೂ ಯಾವುದರಲ್ಲೂ ಅನಾರೋಗ್ಯಕ್ಕೆ ಪೂರಕವಾದ ಅಂಶ ಪತ್ತೆಯಾಗಲಿಲ್ಲ. ಆಕೆಯ ಮೆದುಳಿನ ಸ್ಕ್ಯಾನ್‌ ನಡೆಸಲಾಯಿತು. ಆಕೆಗೆ ಎದೆನೋವು ಎಂದು ಹೇಳಿಕೊಂಡಾಗ ಅದನ್ನೂ ತಪಾಸಣೆ ಮಾಡಲಾಯಿತು. ಇದೀಗ ಎಲ್ಲ ರೀತಿಯಿಂದಲೂ ಫಿಟ್‌ ಆಗಿರುವ ಚೈತ್ರಾಳನ್ನು ಬಿಡುಗಡೆ ಮಾಡಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಂದರ್ಭದಲ್ಲಿ ವಿವರ ನೀಡಿದ ಡಾ. ದಿವ್ಯಾ ಪ್ರಕಾಶ್‌ ಅವರು, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಎಲ್ಲಾ ತಪಾಸಣೆಯಲ್ಲೂ ನಾರ್ಮಲ್ ಇದೆ. ಇಸಿಜಿ ಕೂಡ ನಾರ್ಮಲ್ ಇದೆ. ನ್ಯೂರಾಲಾಜಿಸ್ಟ್, ಮನೋ ವೈದ್ಯರು ತಪಾಸಣೆ ಮಾಡಿದ್ದಾರೆ. ಎಲ್ಲರೂ ಕೂಡ ಸಮಸ್ಯೆ ಇಲ್ಲ ಅಂತಾ ಹೇಳಿದ್ದಾರೆ. ಈಗ ಡಿಸ್ಚಾರ್ಜ್‌ ಮಾಡ್ತಾ ಇದ್ದೇವೆʼʼ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಬಂದ ವೇಳೆ ಬಾಯಿಯಲ್ಲಿ ಕಂಡ ನೊರೆಯ ಬಗ್ಗೆ ಕೇಳಿದಾಗ, ಅವರೇ ಅದನ್ನು ಮಾಡಿಕೊಂಡಿರುವುದು, ಫಿಟ್ಸ್ ಬಗ್ಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆಸ್ಪತ್ರೆಗೆ ಬಂದಾಗ ಇಸಿಜಿಯಲ್ಲಿ ಸ್ವಲ್ಪ ವೇರಿಯೇಷನ್ಸ್‌ ಇತ್ತು. ಬಳಿಕ ಅದು ಸರಿಯಾಗಿದೆ. ಮನೋವೈದ್ಯರು ಕೂಡಾ ಕೆಲವು ಮಾತ್ರೆ ಕೊಟ್ಟಿದ್ದಾರೆ. ಎಂದು ವೈದ್ಯರು ವಿವರಿಸಿದ್ದಾರೆ.

ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಚೈತ್ರಾ ಮೊದಲಿನ ರೀತಿಯಲ್ಲಿ ಇಲ್ಲ. ಆಕೆ ಸುಸ್ತಾದಂತೆ ಕಾಣಿಸುತ್ತಿದ್ದಾರೆ. ಕಾರಿನಲ್ಲಿ ಬಿದ್ದುಕೊಂಡಂತಿದ್ದ ಅವರು ಇಳಿಯಲು ಕಷ್ಟಪಡುವಂತೆ ಕಂಡುಬಂದರು. ಇಳಿದ ಬಳಿಕವೂ ಅವರು ಬಲವಿಲ್ಲದಂತೆ ಮಹಿಳಾ ಸಿಬ್ಬಂದಿಗಳನ್ನು ಊರುಗೋಲಿನಂತೆ ಆಶ್ರಯಿಸಿದರು. ಸಿಸಿಬಿ ಸಿಬ್ಬಂದಿಯೇ ಚೈತ್ರಾಳನ್ನು ಕೈ ಹಿಡಿದು ಕೆಳಗಿಳಿಸಿ ಸಿಸಿಬಿ ಕಚೇರಿಗೆ ಕರೆದೊಯ್ದರು.

ಚೈತ್ರಾಳನ್ನು ಬಂಧಿಸಿ 3-4 ದಿನವಾದರೂ ಸಿಸಿಬಿಗೆ ಈ ಕೇಸ್ ನ ಚಿಕ್ಕ ಮುನ್ನಡೆಯೂ ಸಿಕ್ಕಿಲ್ಲ‌‌. ಹಾಗಾಗಿ ಅಧಿಕಾರಿಗಳು ಆಕೆಯನ್ನು ಈಗ ವಿಚಾರಣೆಗೆ ಒಳಪಡಿಸಬೇಕಾಗಿದೆ. ಉಳಿದ ಐದಾರು ದಿನಗಳ ಕಸ್ಟಡಿಯಲ್ಲಿ ಪೊಲೀಸರು ಚೈತ್ರಳ ವಿಚಾರಣೆ ಮುಗಿಯಬೇಕು. ಸ್ಥಳ ಮಹಜರು, ಉಳಿದ ಆರೋಪಿಗಳನ್ನು ಚೈತ್ರಾ ಎದುರು ಕೂರಿಸಿ ವಿಚಾರಣೆ ನಡೆಸುವ ಪ್ರಕ್ರಿಯೆಗಳು ನಡೆಯಬೇಕು. ಎಲ್ಲಾ ರೀತಿಯ ತನಿಖೆಯಾದ ಬಳಿಕ ಇಡೀ ಪ್ರಕರಣ ಜಗತ್ತಿನ ಮುಂದೆ ತೆರೆದುಕೊಳ್ಳಲಿದೆ‌.

Related post

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ –…

ನ್ಯೂಸ್‌ ಆ್ಯರೋ : ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್​ ಸಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ…
ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್ ಆಯ್ತು ಅಪರೂಪದ ವಿಡಿಯೋ..!

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್…

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ…

Leave a Reply

Your email address will not be published. Required fields are marked *