IPL 2023 : ಮೈದಾನದಲ್ಲೇ ಕಿತ್ತಾಡಿಕೊಂಡ ಆಟಗಾರರ ವಿರುದ್ಧ ಸೆಹ್ವಾಗ್ ಆಕ್ರೋಶ – ಮಾಜಿ ಡ್ಯಾಶಿಂಗ್ ಬ್ಯಾಟ್ಸ್ಮನ್ ಹೇಳಿದ್ದೇನು?
- ಕ್ರೀಡಾ ಸುದ್ದಿ
- May 7, 2023
- No Comment
- 227
ನ್ಯೂಸ್ ಆ್ಯರೋ : ಐಪಿಎಲ್ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಮನೋರಂಜನೆಯ ಜೊತೆಗೆ ಈ ಬಾರಿಯ ಟೂರ್ನಿ ವಿವಾದಗಳಿಂದಲೂ ಸುದ್ದಿಯಾಗುತ್ತಿದೆ. ಇತ್ತೀಚೆಗೆ ನಡೆದ ಆರ್ಸಿಬಿ ಮತ್ತು ಲಕ್ನೋ ತಂಡಗಳ ಜಗಳ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಪಂದ್ಯ ನಡೆದ ಬಳಿಕ ಆರ್ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ಹಾಗೂ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಪರಸ್ವರ ಬೈದಾಡಿರುವ ಘಟನೆ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ.
”ಅಲ್ಲಿ ಕಿತ್ತಾಡಿಕೊಂಡಿರುವುದು ದೇಶದ ಇಬ್ಬರು ಐಕಾನ್ಗಳು. ಸೋತವರು ಸದ್ದಿಲ್ಲದೆ ಸೋಲನ್ನು ಸ್ವೀಕರಿಸಿ ಹೊರನಡೆಯಬೇಕು. ಗೆದ್ದ ತಂಡ ಸಂಭ್ರಮಿಸಬೇಕು ಅಷ್ಟೇ. ಇಲ್ಲಿ ಇಬ್ಬರು ಪರಸ್ಪರ ಮಾತಿನ ಚಕಮಕಿಗೆ ಇಳಿಯುವ ಅವಶ್ಯಕತೆ ಏನಿತ್ತು?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೆಹ್ವಾಗ್ ಮಾತನಾಡಿ, ”ಇಂತಹ ಘಟನೆಗಳು ನಡೆದರೆ ಬಿಸಿಸಿಐ ಅಂತಹವರನ್ನು ನಿಷೇಧಿಸಬೇಕು. ಇದರಿಂದ ಇಂತಹ ಅಹಿತಕರ ಘಟನೆಗಳು ನಡೆಯುವುದಿಲ್ಲ ಅಥವಾ ಅಪರೂಪವಾಗುತ್ತದೆ. ಈ ಹಿಂದೆ ಇಂತಹ ಘಟನೆಗಳು ಹಲವಾರು ಬಾರಿ ನಡೆದಿವೆ. ಹೀಗಾಗಿ ಈ ಬಗ್ಗೆ ಬಿಸಿಸಿಐ ಕಠಿಣ ನಿಲುವು ತೆಗೆದುಕೊಳ್ಳುವುದು ಉತ್ತಮ” ಎಂದಿದ್ದಾರೆ.
ಕೊಹ್ಲಿ ಮತ್ತು ಗಂಭೀರ್ ಅನೇಕ ಮಕ್ಕಳಿಗೆ ರೋಲ್ ಮಾಡೆಲ್, ಅವರು ಏನಾದರೂ ಮಾಡಿದರೆ ಅಥವಾ ಹೇಳಿದರೆ, ಲಕ್ಷಾಂತರ ಮಕ್ಕಳು ಅವರನ್ನು ಅನುಸರಿಸುತ್ತಾರೆ. ಇದೆಲ್ಲವನ್ನೂ ನಾಳೆ ಮಕ್ಕಳು ಕೂಡ ಮುಂದುವರೆಸಬಹುದು. ವಿರಾಟ್ ಕೊಹ್ಲಿ ಅಥವಾ ಗಂಭೀರ್ಗೆ ಮಾಡಬಹುದಾದರೆ, ನಾವು ಕೂಡ ಮಾಡಬಹುದು ಎಂಬ ಭಾವನೆ ಅವರಲ್ಲಿ ಮೂಡತ್ತದೆ ಎಂದು ಸೆಹ್ವಾಗ್ ಕಳವಳ ವ್ಯಕ್ತಪಡಿಸಿದ್ದಾರೆ.