ಶುಭ್ಮನ್ ಗಿಲ್ ಜರ್ಸಿಯಲ್ಲಿದ್ದ ಗೋಲ್ಡ್ ಕಾಯಿನ್ ಗುಟ್ಟೇನು ಗೊತ್ತೇ? – ಗಿಲ್ ಅದೃಷ್ಟಕ್ಕಾಗಿ ಕಾಯಿನ್ ಹಾಕೊಂಡಿದ್ರಾ?

ಶುಭ್ಮನ್ ಗಿಲ್ ಜರ್ಸಿಯಲ್ಲಿದ್ದ ಗೋಲ್ಡ್ ಕಾಯಿನ್ ಗುಟ್ಟೇನು ಗೊತ್ತೇ? – ಗಿಲ್ ಅದೃಷ್ಟಕ್ಕಾಗಿ ಕಾಯಿನ್ ಹಾಕೊಂಡಿದ್ರಾ?

ನ್ಯೂಸ್ ಆ್ಯರೋ : ಐಸಿಸಿ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಗುರುವಾರ ಬಾಂಗ್ಲಾದೇಶದ ವಿರುದ್ಧ 6 ವಿಕೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದ ಭಾರತ ತಂಡದಲ್ಲಿ ಎಲ್ಲರ ಗಮನ ಸೆಳೆದದ್ದು ವಿರಾಟ್ ಕೊಹ್ಲಿ ಮತ್ತು ಶುಭ್ ಮನ್ ಗಿಲ್.

ವಿಶ್ವಕಪ್‌ನಲ್ಲಿ ಮೂರನೇ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿ ಭಾರತದ ಗೆಲುವಿಗೆ ವಿರಾಟ್‌ ಕೊಹ್ಲಿ ಕಾರಣರಾದರು. ಇನ್ನು ರೋಹಿತ್‌ ಶರ್ಮ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಶುಭ್‌ಮನ್‌ ಗಿಲ್‌ ಆಕರ್ಷಕ ಅರ್ಧಶತಕ ಸಿಡಿಸಿದರು. ಆದರೆ ಇಲ್ಲಿ ಗಿಲ್ ಅವರ ಬ್ಯಾಟಿಂಗಿಂತ ಹೆಚ್ಚಾಗಿ ಅವರ ಧರಿಸಿದ್ದ ಚಿನ್ನದ ಬಣ್ಣದ ಬ್ಯಾಡ್ಜ್‌ ಎಲ್ಲರ ಗಮನ ಸೆಳೆದಿದೆ.

ಜೆರ್ಸಿಯ ಕಾಲರ್‌ನಲ್ಲಿ ಗೋಲ್ಡ್‌ ಬ್ಯಾಡ್ಜ್‌ ಧರಿಸಿದ್ದ ಉದಯೋನ್ಮುಖ ಬಲಗೈ ಬ್ಯಾಟ್ಸ್‌ಮನ್‌ ಗಿಲ್ ಬಾಂಗ್ಲಾದೇಶದ 257 ರನ್‌ಗಳ ಗುರಿ ಬೆನ್ನಟ್ಟುವ ರೋಹಿತ್‌ ಶರ್ಮ ಅವರೊಂದಿಗೆ ಉತ್ತಮ ಆರಂಭ ನೀಡಿದರು. 88 ರನ್‌ ಜೊತೆಯಾಟವಾಡಿದ ಈ ಜೋಡಿಯಲ್ಲಿ ರೋಹಿತ್ ಔಟ್ ಆದ ಬಳಿಕ ಕೊಹ್ಲಿ ಜೊತೆಗೆ ಗಿಲ್ 55 ಎಸೆತಗಳಲ್ಲಿ 53 ರನ್‌ ಸಿಡಿಸುವ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಮೊದಲ ಅರ್ಧಶತಕ ಬಾರಿಸಿದ್ದರು.

ಈ ನಡುವೆ ಎಲ್ಲರ ಗಮನ ಸೆಳೆದದ್ದು ಗಿಲ್‌ ಅವರ ಜರ್ಸಿಯ ಕಾಲರ್‌ನಲ್ಲಿದ್ದ ಚಿನ್ನದ ಬಣ್ಣದ ಸಣ್ಣ ಕಾಯಿನ್‌. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಚರ್ಚೆ ನಡೆಯಿತು. ಕೆಲವರು ಇದನ್ನು ಗಿಲ್ ಅದೃಷ್ಟಕ್ಕಾಗಿ ಬಳಸಿದ್ದರು ಎಂದಿದ್ದರು. ಆದರೆ ಇದರ ಹಿಂದಿರುವ ಕಾರಣವೇ ಬೇರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಐಸಿಸಿ ತಿಂಗಳ ಆಟಗಾರ ಎನ್ನುವ ಶ್ರೇಯವನ್ನು ನೀಡುತ್ತಿದೆ. ಅದರಂತೆ ಸೆಪ್ಟೆಂಬರ್‌ ತಿಂಗಳ ಐಸಿಸಿ ಆಟಗಾರ ಗೌರವವನ್ನು ಶುಭ್‌ಮನ್‌ ಗಿಲ್‌ ಗೆ ನೀಡಲಾಗಿದೆ. ಹೀಗಾಗಿ ಐಸಿಸಿ ನೀಡಿರುವ ಚಿನ್ನದ ಬಣ್ಣದ ನಾಣ್ಯವನ್ನು ಅವರು ಜರ್ಸಿಯಲ್ಲಿ ಬ್ಯಾಡ್ಜ್‌ ನಂತೆ ಹಾಕಿಕೊಂಡಿದ್ದರು.

ಏಷ್ಯಾಕಪ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶುಭ್‌ಮನ್‌ ಗಿಲ್‌ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಮಿಂಚಿದ್ದರು. ಹೀಗಾಗಿ ಅವರಿಗೆ ಐಸಿಸಿ ಈ ಶ್ರೇಯಾಂಕವನ್ನು ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದಿರುವುದಕ್ಕೆ ಸಂತೋಷವಾಗಿದೆ. ಇದು ನನ್ನ ಶ್ರೇಷ್ಠತೆಯನ್ನು ಮತ್ತಷ್ಟು ಮುಂದುವರಿಸಲು ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *