ಕ್ರಿಕೆಟ್‌ ಪ್ರಿಯರ ಸುಗ್ಗಿ ಐಪಿಎಲ್‌ನಲ್ಲಿ ಮತ್ತೇರಿಸುವ ಚೀರ್‌ ಲೀಡರ್‌ಗಳ ಸಂಭಾವಣೆ ಎಷ್ಟು ಗೊತ್ತಾ?: ಅತಿ ಹೆಚ್ಚು ಸಂಭಾವಣೆ ನೀಡುವ ತಂಡ ಯಾವುದು?

ಕ್ರಿಕೆಟ್‌ ಪ್ರಿಯರ ಸುಗ್ಗಿ ಐಪಿಎಲ್‌ನಲ್ಲಿ ಮತ್ತೇರಿಸುವ ಚೀರ್‌ ಲೀಡರ್‌ಗಳ ಸಂಭಾವಣೆ ಎಷ್ಟು ಗೊತ್ತಾ?: ಅತಿ ಹೆಚ್ಚು ಸಂಭಾವಣೆ ನೀಡುವ ತಂಡ ಯಾವುದು?

ನ್ಯೂಸ್‌ ಆ್ಯರೋ : ಕ್ರಿಕೆಟ್‌ ಪ್ರಿಯರ ಸುಗ್ಗಿ ಐಪಿಎಲ್ ಹಂಗಾಮ ಮತ್ತೆ ಆರಂಭವಾಗಿದೆ. 16ನೇ ಆವೃತ್ತಿಯಲ್ಲಿ ಈಗಾಗಲೇ ನಡೆದ ಪಂದ್ಯಗಳಲ್ಲಿ ಅಭಿಮಾನಿಗಳು ಸಾಕಷ್ಟು ಸಂಭ್ರಮಿಸಿದ್ದಾರೆ. ಬೌಂಡರಿ ಮತ್ತು ಸಿಕ್ಸರ್‌ ಗಳ ನಡುವೆ ಚೀರ್‌ ಲೀಡರ್‌ಗಳು ಅಭಿಮಾನಿಗಳಿಗೆ ಕಿಕ್‌ ಏರಿಸುತ್ತಿದ್ದಾರೆ.

ಐಪಿಎಲ್ ಪಂದ್ಯಗಳಲ್ಲಿ ಭಾಗವಹಿಸಲು ವಿದೇಶದಿಂದ ಚಿಯರ್ ಲೀಡರ್‌ಗಳು ಬರುತ್ತಾರೆ. ಕೆಲ ಭಾರತೀಯರೂ ಇದರಲ್ಲಿ ಭಾಗಿಯಾಗಿದ್ದಾರೆ. ಈ ಚಿಯರ್ ಲೀಡರ್ ಗಳಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ? ಸಂಬಳವನ್ನು ಕೇಳಿದರೆ ಶಾಕ್ ಆಗೋದು ಖಂಡಿತ.

ಈ ಚಿಯರ್‌ ಲೀಡರ್‌ಗಳು ಪಂದ್ಯವೊಂದಕ್ಕೆ ಸುಮಾರು 14000-17000 ರೂಪಾಯಿ ಸಂಭಾವಣೆ ಪಡೆಯುತ್ತಾರಂತೆ. ಚೆನ್ನೈ, ಪಂಜಾಬ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಮ್ಮ ಪಂದ್ಯಗಳಲ್ಲಿ ಚೀರ್‌ ಲೀಡರ್ರ್‌ಗಳಿಗೆ ಪ್ರತಿ ಪಂದ್ಯಕ್ಕೆ 12000 ರೂಪಾಯಿಗಳಿಗಿಂತ ಹೆಚ್ಚು ಹಣ ಪಾವತಿಸಲಾಗುತ್ತದೆ ಎಂದು ಕ್ರಿಕ್‌ ಫ್ಯಾಕ್ಟ್ಸ್ ವರದಿಯಲ್ಲಿ ತಿಳಿಸಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಪ್ರತಿ ಪಂದ್ಯಕ್ಕೆ ಸುಮಾರು 20,000 ರೂ. ನೀಡುತ್ತದೆ. ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್, ತಮ್ಮ ಪಂದ್ಯಗಳ ಸಮಯದಲ್ಲಿ ಚೀರ್‌ ಲೀಡರ್‌ಗಳಿಗೆ ಪ್ರತಿ ಪಂದ್ಯದಲ್ಲಿ 20,000 ರೂಪಾಯಿಗಳನ್ನು ನೀಡುತ್ತದೆ. ಅತಿ ಹೆಚ್ಚು ಸಂಭಾವನೆ ಪಡೆಯುವುದು ಕೋಲ್ಕತ್ತಾ ನೈಟ್ ರೈಡರ್ಸ್ ಚೀರ್‌ಲೀಡರ್‌ಗಳು. ಇವರಿಗೆ ಪ್ರತಿ ಪಂದ್ಯಕ್ಕೆ ಸುಮಾರು 24000 ವರೆಗೆ ಪಾವತಿಸಲಾಗುತ್ತದೆ.

ಸಂಭಾವಣೆಯ ಹೊರತಾಗಿಯೂ ಚೀರ್‌ ಲೀಡರ್‌ಗಳು ತಮ್ಮ ಪ್ರದರ್ಶನದ ಆಧಾರದ ಮೇಲೆ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಅವರು ಹುರಿದುಂಬಿಸುವ ತಂಡ ಗೆದ್ದರೆ, ಅವರಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತದೆ. ಇದಲ್ಲದೇ ಅವರಿಗೆ ಪ್ರತಿದಿನವೂ ಆಹಾರ ನೀಡಲಾಗುತ್ತದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *