
ಬಡ ಮಕ್ಕಳಿಗಾಗಿ ಫ್ರೀ ತರಬೇತಿ ನೀಡ್ತಿದ್ದ ಸೆಹ್ವಾಗ್ ಹಿಂದೆ ಸರಿದದ್ದೇಕೆ? – ಹೃದಯವಂತನ ಈ ನಿರ್ಧಾರ ಹಿಂದೆ ಇರೋ ಕಾರಣ ಏನ್ ಗೊತ್ತಾ?
- ಕ್ರೀಡಾ ಸುದ್ದಿ
- October 15, 2023
- No Comment
- 82
ನ್ಯೂಸ್ ಆ್ಯರೋ : ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಭಾರತದ ಸಿಡಿಲಬ್ಬರದ ಆಟಗಾರ. ಇವರು ಭಾರತ ಕ್ರಿಕೆಟ್ ತಂಡದ ಸದಸ್ಯರು ಮತ್ತು ಆಕ್ರಮಣಕಾರಿ ಆರಂಭಿಕ ಬಲಗೈ ಬ್ಯಾಟ್ಸ್ ಮ್ಯಾನ್. ಇವರನ್ನು ನವಾಬ್ ಆಫ್ ನಜಾಫಗಡ್ ಎಂದು ಕರೆಯುತ್ತಾರೆ.
ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ಟರೆ ಎಂತಹ ಬೌಲಿಂಗ್ಗೂ ಕ್ಯಾರೇ ಎನ್ನದೆ ನುಗ್ಗಿ ಬಾರಿಸುವ ಆಟಗಾರ. ಇವರು ಮೈದಾನದಲ್ಲಿರುವ ಹಾಗೂ ಆಫ್ ದಿ ಫೀಲ್ಡ್ನಲ್ಲಿ ವರ್ತನೆಗೆ ಅಜಗಜಾಂತರ ವ್ಯತ್ಯಾಸವಿದೆ. ಆಫ್ ದಿ ಫೀಲ್ಡ್ ನಲ್ಲಿ ತುಂಬಾನೇ ಹೃದಯವಂತ ವೀರೇಂದ್ರ ಸೆಹ್ವಾಗ್.
ಸೆಹ್ವಾಗ್ ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಸಹಾಯದ ಹಸ್ತ ಚಾಚೋದ್ರಲ್ಲಿ ಎತ್ತಿದ ಕೈ. ಕ್ರಿಕೆಟ್ಗೆ ಗುಡ್ ಬೈ ಹೇಳಿದ ಬಳಿಕ ಅಕಾಡೆಮಿಯೊಂದನ್ನ ತೆರೆದ ಸೆಹ್ವಾಗ್, ಅಲ್ಲಿ ಬಡ ಮಕ್ಕಳಿಗೆ ಉಚಿತ ಪ್ರವೇಶ ಕೂಡ ನೀಡಿದ್ದರು. ಆದರೆ, ಇದ್ದಕ್ಕಿದ್ದಂತೆ ಅದನ್ನ ನಿಲ್ಲಿಸಿದ್ರು. ಆ ನಿರ್ಧಾರದ ಹಿಂದೆ ಒಂದು ಬಲವಾದ ಕಾರಣ ಇದೆ ಅಂತೆ.
ಉಚಿತದಿಂದ ಯಾವ ಕೆಲಸವು ಆಗಲ್ಲ. ನಾನು ಕ್ರಿಕೆಟ್ ಅಕಾಡೆಮಿ ಶುರುಮಾಡಿದೆ. ಅರಂಭದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ಟ್ರೈನಿಂಗ್ ನೀಡುತ್ತಿದ್ದೆ. ಆದರೆ ಅವರು ಉಚಿತದ ಮಹತ್ವದ ಅರ್ಥಮಾಡಿಕೊಳ್ಳಲಿಲ್ಲ. ವಾರದಲ್ಲಿ ಎರಡು ದಿನ ಅಭ್ಯಾಸಕ್ಕೆ ಬಂದ್ರೆ ಉಳಿದ ದಿನ ಅಕಾಡೆಮಿಗೆ ಬರುತ್ತಿರಲಿಲ್ಲ.
ಯಾವಾಗ ನೀವು ನೂರು ರೂಪಾಯಿ ಕೊಟ್ಟು ಬರ್ತಿರೋ ಆಗ ಹಣದ ಮಹತ್ವ ತಿಳಿಯುತ್ತೆ. ಪ್ರತಿದಿನ ಅಕಾಡೆಮಿಗೆ ಬರ್ತಾರೆ. ತಂದೆ-ತಾಯಂದಿರು ದುಡ್ಡು ಕಟ್ಟಿದ್ದೇವೆ. ಪ್ರಾಕ್ಟೀಸ್ಗೆ ಹೋಗು ಎಂದು ಕಳಿಸುತ್ತಾರೆ. ಇಲ್ಲವಾದ್ರೆ ಎರಡು ದಿನ ಬಂದು, ಇನ್ನೆರಡು ದಿನ ಗೈರಾಗ್ತಾರೆ. ಫೀಸ್ ಕಟ್ಟಿದ್ರೆ ಜವಾಬ್ದಾರಿ ಹೆಚ್ಚುತ್ತೆ ಎಂಬ ಕಾರಣಕ್ಕೆ ಈ ಒಳ್ಳೆ ಕಾರ್ಯವನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.