ಈ ಬಾರಿ ಐಪಿಎಲ್ಗೆ ಗಾಯದ ಪೆಟ್ಟು – ಕೋಟಿವೀರರೇ ಆಟದಿಂದ ಹೊರಕ್ಕೆ, ಯಾರೆಲ್ಲ ಹೊರ ಬಿದ್ರು ನೋಡಿ…
- ಕ್ರೀಡಾ ಸುದ್ದಿ
- March 3, 2023
- No Comment
- 391
ನ್ಯೂಸ್ ಆ್ಯರೋ : ಬಹುಬೇಡಿಕೆಯ ಹಾಗೂ ಕೋಟಿ ಕೋಟಿ ಹಣವನ್ನು ಜೇಬಿಗೆ ತುಂಬಿಸಿಕೊಳ್ಳುತ್ತಿದ್ದ ಕ್ರಿಕೆಟ್ ಆಟಗಾರರು ಈ ಬಾರಿ ಆರೋಗ್ಯ ಹಾಗೂ ವೈಯ್ಯಕ್ತಿಕ ಸಮಸ್ಯೆಯಿಂದ ಐಪಿಎಲ್ನಿಂದ ಹೊರ ಉಳಿಯುವಂತಾಗಿದೆ.
ಬಹು ನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ದಿನಗಣನೆ ಶರುವಾಗಿದ್ದು ಮಾರ್ಚ್ 31ರಿಂದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಸಿಗಲಿದೆ.
ಬಿಸಿಸಿಐ, ಫ್ರಾಂಚೈಸಿಗಳು ಕೂಡ ಭರದ ಸಿದ್ಧತೆ ಆರಂಭಿಸಿದ್ದು, ಕೆಲವು ತಂಡಗಳು ಅಭ್ಯಾಸ ಶಿಬಿರಗಳನ್ನೂ ಆರಂಭಿಸಿವೆ. ಒಂದೆಡೆ ಸ್ಟಾರ್ ಆಟಗಾರರ ಫಾರ್ಮ್ ತಂಡದ ಬಲ ಹೆಚ್ಚಿಸಿದರೆ, ಮತ್ತೊಂದೆಡೆ ಪ್ರಮುಖ ಆಟಗಾರರೇ ಇಂಜುರಿಗೆ ತುತ್ತಾಗಿರುವುದು ಟೀಮ್ ಮ್ಯಾನೇಜ್ಮೆಂಟ್ಸ್ ತಲೆಬಿಸಿಯಾಗಿದೆ.
ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ಕೋಟಿ ಕೋಟಿಯನ್ನು ಜೇಬಿಗಿಳಿಸಿಕೊಂಡ ಮಿಲೇನಿಯರ್ಗಳೇ ಗಾಯದ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಈ ಆವೃತ್ತಿಂದ ಹೊರ ಬಿದ್ದಿದ್ದಾರೆ. ಈ ಪಟ್ಟಿಯ ಹೆಸರು ಉದ್ದವಾಗಿದ್ದು, ಯಾರೆಲ್ಲ ಇದ್ದಾರೆ ಎಂದು ಸಂಪೂರ್ಣ ಮಾಹಿತಿ ಇದೆ.
ಪ್ರತಿ ವರ್ಷವೂ ಗೆಲುವಿನ ದಡಕ್ಕೆ ಬರುವ ಮುಂಬೈ ಇಂಡಿಯನ್ಸ್ ಟೀಂ 15 ಆವೃತ್ತಿಗಳನ್ನು ಯಶಸ್ಸಿಯಾಗಿ ಮುಗಿಸಿರುವ ಒಟ್ಟು 5 ಬಾರಿ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಟೂರ್ನಿಗೂ ಮುನ್ನವೇ ವೇಗಿ ಜಸ್ಪ್ರಿತ್ ಬೂಮ್ರಾ ತಂಡದಿಂದ ಹೊರ ಬಿದ್ದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಇನ್ನೂ ಸಂಪೂರ್ಣವಾಗಿ ಚೇತರಿಕೆಯಾಗದ ಕಾರಣ ಈ ಬಾರಿ ಆಟವಾಡುತ್ತಿಲ್ಲ.
ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಡಿಸೆಂಬರ್ 30ರಂದು ಭೀಕರ ಅಪಘಾತಗ್ಗಾಗಿ ಗಂಭೀರವಾಗಿ ಗಾಐಗೊಂಡಿದ್ದರು. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಆಟದಿಂದ ಹೊರ ಉಳಿದಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸುತ್ತಿದ್ದ ತಂಡಕ್ಕೆ ಭಾರೀ ಆಘಾತವಾಗಿದೆ.
ತಾಯಿಯ ಅನಾರೋಗ್ಯದಿಂದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, ಅವರು ಈ ಬಾರಿ ಐಪಿಎಲ್ನಿಂದ ಹೊರ ಉಳಿದಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಕಮಿನ್ಸ್ ಅವರ ತಾಯಿಯ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಈ ವೇಳೆ ತಾಯಿಯೊಂದಿಗೆ ಸಮಯ ಕಳೆಯಲು ಬಯಸಿರುವ ಕಮಿನ್ಸ್, ಭಾರತ ವಿರುದ್ಧ 3, 4ನೇ ಟೆಸ್ಟ್ ಹಾಗೂ ಏಕದಿನ ಸರಣಿಗೆ ದೂರವಾಗಿದ್ದಾರೆ.
ನ್ಯೂಜಿಲೆಂಡ್ ತಂಡದ ಸ್ಟಾರ್ ಬೌಲರ್ ಕೈಲ್ ಜೆಮಿಸನ್ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿರುವ ಯೆಲ್ಲೋ ಆರ್ಮಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರೀ ಹಿನ್ನಡೆ ಅಂದರೆ ತಪ್ಪಾಗಲ್ಲ. ಕಳೆದ 8 ತಿಂಗಳಿಂದ ಬೆನ್ನು ನೋವಿನ ಇಂಜುರಿಗೆ ತುತ್ತಾಗಿರುವ ಜೆಮಿಸನ್, ಈಗ ಸರ್ಜರಿಗೆ ಮುಂದಾಗಿದ್ದಾರೆ. ಕನಿಷ್ಠ ನಾಲ್ಕೈದು ತಿಂಗಳಾದರೂ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಮೇಜರ್ ಬೌಲಿಂಗ್ ವೆಪನ್ ಪ್ರಸಿದ್ಧ್ ಕೃಷ್ಣ ಎಂದರೆ ತಪ್ಪಾಗಲ್ಲ. ಕಳೆದ ಬಾರಿ ರಾಯಲ್ಸ್ ತಂಡವನ್ನು ಫೈನಲ್ವರೆಗೂ ಕೊಂಡೊಯ್ಯಲು ಕಾರಣರಾಗಿದ್ದರು. ಪಾದದ ಒತ್ತಡದ ಸಮಸ್ಯೆಗೆ ಒಳಗಾಗಿರುವ ಪ್ರಸಿದ್ಧ್ ಇನ್ನೂ ಚೇತರಿಸಿಕೊಂಡಿಲ್ಲ. ಯಾವಾಗ ಮರಳುತ್ತಾರೆ ಎಂಬ ಖಚಿತ ಪಡಿಸಿಲ್ಲ.