ಗರ್ಭ ನಿರೋಧಕ್ಕೆ ಪುರುಷರಿಗೂ ಸಿಗಲಿದೆ ಚುಚ್ಚು ಮದ್ದು – ಪತ್ನಿಯ ಮೇಲೆ ಪ್ರೀತಿ ತೋರಿಸಲು ಗಂಡಸರಿಗೆ ಬಂಪರ್ ಅವಕಾಶ

ಗರ್ಭ ನಿರೋಧಕ್ಕೆ ಪುರುಷರಿಗೂ ಸಿಗಲಿದೆ ಚುಚ್ಚು ಮದ್ದು – ಪತ್ನಿಯ ಮೇಲೆ ಪ್ರೀತಿ ತೋರಿಸಲು ಗಂಡಸರಿಗೆ ಬಂಪರ್ ಅವಕಾಶ

ನ್ಯೂಸ್ ಆ್ಯರೋ : ನಿತ್ಯದ ನೂರಾರು ಕೆಲಸ ಕಾರ್ಯಗಳ ಮಧ್ಯೆ ಗರ್ಭ ನಿರೋಧದ ವಿಚಾರದಲ್ಲಿ ಮಹಿಳೆಯರೇ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ಚಿಂತೆ ಇನ್ನಿಲ್ಲ. ಯಾಕೆಂದರೆ ಇದನ್ನು ಇನ್ನು ಪುರುಷರೂ ಮಾಡಿಕೊಳ್ಳಬಹುದು.

ಬೇಡದ ಗರ್ಭಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಶಸ್ತ್ರ ಚಿಕಿತ್ಸೆ ನಡೆಸುವುದು ಕೆಲವರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಮಹಿಳೆಯರೂ ನಿತ್ಯದ ಕೆಲಸದ ಮಧ್ಯೆ ಇದನ್ನು ನೆನಪಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ ಇನ್ನು ಈ ಚಿಂತೆ ಕೊಂಚ ಕಡಿಮೆಯಾಗುವುದು.

ಈವರೆಗೆ ಬಂದಿರುವ ಬಹುತೇಕ ಎಲ್ಲ ಗರ್ಭ ನಿರೋಧಕ ಔಷಧಗಳು ಮಹಿಳೆಯರಿಗಾಗಿ ಮಾತ್ರ ಆಗಿತ್ತು. ಆದರೆ ಇದೇ ಮೊದಲ ಬಾರಿಗೆ ಪುರುಷರಿಗೂ ಔಷಧವೊಂದನ್ನು ಕಂಡು ಹಿಡಿಯಲಾಗಿದೆ. ಇದು ಸರಿಯಾಗಿ ಬಳಕೆಯಾದರೆ ಬಹುತೇಕ ಮಹಿಳೆಯರ ಸಮಸ್ಯೆ ದೂರವಾಗುವುದು.

ಇವರಿಗೆ ಗರ್ಭ ನಿಯಂತ್ರಣ ಪ್ರಕ್ರಿಯೆಗಳನ್ನು ಮಹಿಳೆಯರಷ್ಟೇ ಮಾಡಿಕೊಳ್ಳುತ್ತಿದ್ದರು. ಇನ್ನು ಪುರುಷರಿಗೂ ಈ ಅವಕಾಶ ಸಿಗಲಿದೆ. ಮಡದಿಯರ ಬಗ್ಗೆ ಕಾಳಜಿ ವಹಿಸುವವರು ತಾವು ತಮ್ಮ ಮಡದಿಯನ್ನು ಎಷ್ಟು ಇಷ್ಟ ಪಡುತ್ತೇವೆ ಎನ್ನುವುದನ್ನು ಈ ಮೂಲಕ ಹೇಳಿಕೊಳ್ಳಬಹುದು.

ಗರ್ಭನಿಯಂತ್ರಣಕ್ಕೆ ಸಂಬಂಧಿಸಿ ಮಹಿಳೆಯರಿಗೆ ವಿವಿಧ ವೈದ್ಯಕೀಯ ಆಯ್ಕೆಗಳಿವೆ. ಇನ್ನು ಪುರುಷರೂ ಇದನ್ನು ಬಳಸಿಕೊಳ್ಳಬಹುದು. ಯಾಕೆಂದರೆ ಪುರುಷರಿಗಾಗಿಯೇ ವಿಶ್ವದ ಮೊಟ್ಟ ಮೊದಲ ಗರ್ಭನಿಯಂತ್ರಣ ಚುಚ್ಚುಮದ್ದನ್ನು ಅಭಿವೃದ್ಧಿ ಪಡಿಸಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌) ನಡೆಸಿರುವ ಹೊಸದಿಲ್ಲಿ, ಉಧಂಪುರ, ಲುಧಿಯಾನಾ, ಜೈಪುರ, ಖರಗ್‌ಪುರದಲ್ಲಿರುವ ಸಂಶೋಧನ ಕೇಂದ್ರಗಳಲ್ಲಿ ಮೂರು ಹಂತದಲ್ಲಿ ಚುಚ್ಚು ಮದ್ದನ್ನು ಪ್ರಯೋಗ ಮಾಡಿದೆ.

25 ರಿಂದ 40 ವಯಸ್ಸಿನ 303 ವಿವಾಹಿತ ಹಾಗೂ ಆರೋಗ್ಯವಂತ ಪುರುಷರು ಇದರಲ್ಲಿ ಪಾಲ್ಗೊಂಡಿದ್ದರು. ಶೇ.99ರಷ್ಟು ಗರ್ಭಧಾರಣೆಯನ್ನು ನಿಯಂತ್ರಿಸಬಹುದು ಎಂಬುದು ಇದರಿಂದ ದೃಢಪಟ್ಟಿದೆ. ಇವರೊಂದಿಗೆ ಅವರ ಪತ್ನಿಯರ ಆರೋಗ್ಯದ ಮೇಲೂ ನಿಗಾ ವಹಿಸಿದ್ದು, ಯಾವುದೇ ಅಡ್ಡ ಪರಿಣಾಮಗಳು ದಾಖಲಾಗಿಲ್ಲ.

ಗರ್ಭ ನಿರೋಧವಾಗಿ ಪುರುಷರಿಗೆ ವ್ಯಾಸಿಕ್ಟಮಿ ಶಸ್ತ್ರಚಿಕಿತ್ಸೆಯೊಂದಿಗೆ ಈಗ ಚುಚ್ಚು ಮದ್ದು ಕೂಡ ಬಂದಿರುವುದು ವೈದ್ಯಕೀಯ ಆಯ್ಕೆಯನ್ನು ಅವರಿಗೆ ಹೆಚ್ಚು ಮಾಡಿದಂತಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸದೇ ಇರುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *