ನೋಟ್ ಬ್ಯಾನ್ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ – ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಸ್ತಕ್ಷೇಪ ಅನಗತ್ಯ ಎಂದ ಸುಪ್ರೀಂ
- ರಾಷ್ಟ್ರೀಯ ಸುದ್ದಿ
- January 2, 2023
- No Comment
- 257
ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2016ರಲ್ಲಿ ನೋಟು ಬ್ಯಾನ್ ಮಾಡಿದ ಕ್ರಮವನ್ನು ಎತ್ತಿ ಹಿಡಿಯವ ಮೂಲಕ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಸೋಮವಾರ ಕೇಂದ್ರದ ನೋಟ್ ಬ್ಯಾನ್ ಕ್ರಮವನ್ನು 4-1ರ ಅನುಪಾತದಲ್ಲಿ ಎತ್ತಿ ಹಿಡಿಯಿತು.
ನೋಟು ಬದಲಾಯಿಸಲು ನೀಡಿದ ಕಾಲಾವಕಾಶ ಸರಿಯಾಗಿದೆ. ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ಆರ್ ಬಿಐ ಮತ್ತು ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದವು. ಅಂತಹ ಕ್ರಮವನ್ನು ತರಲು ಸಮಂಜಸವಾದ ಸಂಬಂಧವಿತ್ತು ಎಂದು ಪೀಠ ಭಾವಿಸಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಜ. 2ರಂದು ತೀರ್ಪು ಪ್ರಕಟಿಸಿದೆ. ಮೂಡುಬಿದಿರೆ ಮೂಲದವರಾದ ನ್ಯಾ| ನಜೀರ್ ಜ. 4ರಂದು ನಿವೃತ್ತರಾಗಲಿದ್ದಾರೆ.
ನೋಟ್ ಬ್ಯಾನ್ ಸಂಬಂಧ ನ್ಯಾ.ನಾಗರತ್ನ ತೀರ್ಪು ಓದಿದ್ದು, ಕೇಂದ್ರ ಸರ್ಕಾರ ಗೆಜೆಟ್ ಮೂಲಕ ಈ ಕ್ರಮ ಮಾಡಬಾರದಿತ್ತು. ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಆರಂಭಿಸಿದೆ. ಆರ್ಬಿಐ ಈ ಕ್ರಮವನ್ನು ಆರಂಭ ಮಾಡಿಲ್ಲ, ಕೇಂದ್ರ ಹಾಗೂ ಆರ್ಬಿಐ ಎರಡಕ್ಕೂ ಅಧಿಕಾರವಿದೆ. ಸಂಸತ್ತಿನಲ್ಲಿ ಚರ್ಚೆ ಮಾಡಿ ಬ್ಯಾನ್ ನಿರ್ಧಾರ ಪ್ರಕಟ ಮಾಡಬೇಕಿತ್ತು. ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯ ವ್ಯಕ್ತಪಡಿಸಿದರೆ, ಉಳಿದ ನಾಲ್ವರು ನ್ಯಾಯಮೂರ್ತಿಗಳಿಂದ ಒಮ್ಮತದ ತೀರ್ಪು ನೀಡಿದ್ದಾರೆ.
ಇದರೊಂದಿಗೆ ನೋಟ್ ಬ್ಯಾನ್ ಪ್ರಶ್ನಿಸಿದ್ದ 58 ಅರ್ಜಿಗಳು ವಜಾಗೊಳಿಸಿದ್ದು, ಪಂಚ ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ.