ಹೊಸ ಸಂಸತ್ ಭವನ ನಿರ್ಮಾಣದ ವಿನ್ಯಾಸಕಾರನ ಬಗ್ಗೆ ನಿಮಗ್ಗೊತ್ತಾ? – ಇಡೀ ಪ್ರಾಜೆಕ್ಟ್ ಗಾಗಿ ಇವರು ಪಡೆದ ಮೊತ್ತವೆಷ್ಟು ಗೊತ್ತಾ?

ಹೊಸ ಸಂಸತ್ ಭವನ ನಿರ್ಮಾಣದ ವಿನ್ಯಾಸಕಾರನ ಬಗ್ಗೆ ನಿಮಗ್ಗೊತ್ತಾ? – ಇಡೀ ಪ್ರಾಜೆಕ್ಟ್ ಗಾಗಿ ಇವರು ಪಡೆದ ಮೊತ್ತವೆಷ್ಟು ಗೊತ್ತಾ?

ನ್ಯೂಸ್ ಆ್ಯರೋ‌ : ಹೊಸ ಸಂಸತ್ ಭವನವನ್ನು ರವಿವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ತನ್ನ ವಿಶೇಷ ರಚನೆಯಿಂದ ಗಮನ ಸೆಳೆಯುತ್ತಿರುವ ಈ ಕಟ್ಟಡ ವಿನ್ಯಾಸಕಾರ 64 ವರ್ಷದ ಬಿಮಲ್ ಹಸ್ಮುಖ್ ಪಟೇಲ್.

ದೇಶದ ಪ್ರಮುಖ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿರುವ ಬಿಮಲ್ ಸೆಂಟ್ರಲ್ ವಿಸ್ತಾ ನವೀಕರಣ, ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ಸಬರಮತಿ ರಿವರ್ ಫ್ರಂಟ್ ಪ್ರಾಜೆಕ್ಟ್‌ಗಳನ್ನೂ ಮುನ್ನಡೆಸಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಿಇಪಿಟಿ ವಿವಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಎಚ್‌ಸಿಪಿ ಡಿಸೈನ್ ಪ್ಲ್ಯಾನಿಂಗ್ ಮತ್ತು ಮ್ಯಾನೇಜ್ಮೆಂಟ್ ಪ್ರೈ ಲಿ. ಕಂಪನಿಯನ್ನು ನಡೆಸುತ್ತಿದ್ದಾರೆ. ಈ ಆರ್ಕಿಟೆಕ್ಟ್, ಪ್ಲ್ಯಾನಿಂಗ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು 1960ರಲ್ಲಿ ಬಿಮಲ್ ಅವರ ತಂದೆ ಹಸ್ಮುಖ್ ಆರಂಭಿಸಿದ್ದರು.

ಇತರ ಪ್ರಸಿದ್ಧ ನಿರ್ಮಾಣಗಳು
ಸುಮಾರು 35 ವರ್ಷಗಳ ಅನುಭವವನ್ನು ಹೊಂದಿರುವ ಬಿಮಲ್ ಹೈದ್ರಾಬಾದ್‌ನ ಅಘಾ ಖಾನ್ ಅಕಾಡೆಮಿ, ಹೈದ್ರಾಬಾದ್‌ನ ಐಐಎಂ, ಮುಂಬಯಿ ಪೋರ್ಟ್ ಟ್ರಸ್ಟ್ ಡೆವಲ್‌ಪ್ಮೆಂಟ್ ಸೇರಿದಂತೆ ಅನೇಕ ಪ್ರಾಜೆಕ್ಟ್‌ಗಳನ್ನು ನಿರ್ವಹಣೆ ಮಾಡಿದ ಖ್ಯಾತಿ ಹೊಂದಿದ್ದಾರೆ.

ಪ್ರಶಸ್ತಿ

ವಾಸ್ತುಶಿಲ್ಪದಲ್ಲಿನ ಅನುಪಮ ಸೇವೆಗಾಗಿ ಬಿಮಲ್ ಅವರಿಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 1992ರಲ್ಲಿ ಅಗಾ ಘಾನ್ ಅವಾರ್ಡ್, 1998ರಲ್ಲಿ ಯುನೈಡೆಟ್ ನೇಷನ್ಸ್ ಸೆಂಟರ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್ ಅವಾರ್ಡ್ ಆಫ್ ಎಕ್ಸ್‌ಲೆನ್ಸ್, 2001ರಲ್ಲಿ ವರ್ಲ್ಡ್ ಆರ್ಕಿಟೆಕ್ಚರ್ ಅವಾರ್ಡ್, 2006 ಅರ್ಬನ್ ಪ್ಲ್ಯಾನಿಂಗ್ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪುರಸ್ಕಾರ ಕೂಡ ಸಂದಿದೆ.

ಎಚ್‌ಸಿಪಿ ಡಿಸೈನ್ಸ್ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸಿದೆ. ಸಂಸ್ಥೆ ಕನ್ಸಲ್ಟನ್ಸಿ ಸರ್ವೀಸ್‌ಗೆ ಶುಲ್ಕವಾಗಿ 229.75 ಕೋಟಿ ರೂ. ಪಡೆದುಕೊಳ್ಳಲಿದೆ ಎಂದು ಈ ಹಿಂದೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು. ಪ್ರಾಜೆಕ್ಟ್‌ನ ಮಾಸ್ಟರ್ ಪ್ಲ್ಯಾನ್, ಡಿಸೈನ್, ವೆಚ್ಚ ಅಂದಾಜು ಮತ್ತಿತರ ಕಾರ್ಯಗಳಿಗೆ ಶುಲ್ಕ ಪಾವತಿಸಲಾಗಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *