
ದಾಂಪತ್ಯದಲ್ಲಿ ತೀವ್ರ ಭಿನ್ನಾಭಿಪ್ರಾಯವಿದ್ದಾಗ ಗಂಡ-ಹೆಂಡತಿಯನ್ನು ಒಟ್ಟಿಗೆ ಇಡುವುದು ಕ್ರೌರ್ಯ – ವಿಚ್ಛೇದನದ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂ ಅಭಿಪ್ರಾಯ..
- ರಾಷ್ಟ್ರೀಯ ಸುದ್ದಿ
- August 31, 2023
- No Comment
- 43
ನ್ಯೂಸ್ ಆ್ಯರೋ : ದಾಂಪತ್ಯ ಮುರಿದುಬೀಳುವ ಅಂಚಿನಲ್ಲಿದ್ದು, ಉಳಿಸಲು ಯಾವುದೇ ಅವಕಾಶವಿಲ್ಲದಿದ್ದಾಗ, ಗಂಡ ಮತ್ತು ಹೆಂಡತಿಯನ್ನು ಒಟ್ಟಿಗೆ ಇಡುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠವು ವಿವಾಹ ವಿಸರ್ಜನೆಗೆ ಸಂವಿಧಾನದ 142 ನೇ ವಿಧಿಯನ್ನು ಬಳಸುವಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ವಿವಾಹವು ಸರಿಪಡಿಸಲಾಗದಷ್ಟು ಮುರಿದುಹೋದಾಗ ಬೇರೆಯಾಗುವುದೇ ಪರಿಹಾರ ಎಂದು ನ್ಯಾಯಪೀಠ ಹೇಳಿದೆ. ಪತಿ ಸಲ್ಲಿಸಿದ ಮೇಲ್ಮನವಿಯನ್ನು ಪರಿಗಣಿಸಿದ ನ್ಯಾಯಪೀಠ, ಇದು ವಿವಾಹದ ಸರಿಪಡಿಸಲಾಗದ ಕುಸಿತದ ಅತ್ಯುತ್ತಮ ಪ್ರಕರಣವಾಗಿದೆ ಎಂದು ಹೇಳಿದೆ.
ಇನ್ನೂ ಕೊಟ್ಟ ಕಾಲಾವಕಾಶದಲ್ಲಿ ಮಕ್ಕಳ ಹಿತದೃಷ್ಟಿಯಿಂದ, ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಒಟ್ಟಿಗೆ ವಾಸಿಸಲು ನಿರ್ಧರಿಸಿದರೆ ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ವಿವಾಹ ವಿಸರ್ಜನಾ ಕುರಿತ ತನ್ನ ಇತ್ತೀಚಿನ ಎರಡು ನಿರ್ಣಯಗಳನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಒಂದು ರೀತಿಯಲ್ಲಿ ಮುರಿದುಬಿದ್ದ ಮದುವೆಗಳನ್ನು ಕ್ರೌರ್ಯದ ಆಧಾರದ ಮೇಲೆ ರದ್ದುಗೊಳಿಸಬಹುದು ಎಂದು ಅದು ತೀರ್ಪಿನಲ್ಲಿ ತಿಳಿಸಿದೆ. ಮದುವೆಯ ಸರಿಪಡಿಸಲಾಗದ ಕುಸಿತದ ಆಧಾರದ ಮೇಲೆ ಮದುವೆಯನ್ನು ವಿಸರ್ಜಿಸಲು ಅನುಚ್ಛೇದ 142 ಅನ್ನು ಬಳಸಬಹುದು ಎಂದು ಎರಡನೇ ತೀರ್ಪು ಅಭಿಪ್ರಾಯಪಟ್ಟಿದೆ.