ನೂತನ ಸಂಸತ್ ಭವನದಲ್ಲಿ ಕನ್ನಡದ ಕಂಪು – ಗೋಡೆಯಲ್ಲಿ ಕಂಗೊಳಿಸುತ್ತಿದೆ ಬಸವಣ್ಣನ ವಚನ
- ರಾಷ್ಟ್ರೀಯ ಸುದ್ದಿ
- May 29, 2023
- No Comment
- 170
ನ್ಯೂಸ್ ಆ್ಯರೋ : ಪ್ರಧಾನಮಂತ್ರಿ ನರೇಂದ್ರ ಮೋದಿ ರವಿವಾರ ನೂತನ ಸಂಸತ್ ಭವನ ಉದ್ಘಾಟಿಸಿದ್ದಾರೆ. ವಿವಿಧ ರಾಜ್ಯಗಳಿಂದ ತರಿಸಿದ ಹಲವು ವಸ್ತುಗಳಿಂದ ಈ ಸಂಸತ್ ಭವನ ನಿರ್ಮಾಣವಾಗಿದೆ.
ಬೇರೆ ಬೇರೆ ರಾಜ್ಯಗಳಿಂದ ಗ್ರಾನೈಟ್, ಮಾರ್ಬಲ್, ಕಲ್ಲು, ಬಿದಿರನ ಛಾವಣಿ ಮುಂತಾದ ವಸ್ತುಗಳನ್ನು ಈ ಭವ್ಯ ಮಂದಿರದ ರಚನೆಗೆ ಬಳಸಲಾಗಿದೆ. ಜೊತೆಗೆ ಈ ಭವನ ನಮ್ಮ ಕರುನಾಡ ಕಂಪನ್ನೂ ಬೀರುತ್ತಿದೆ. ಅದರ ಕುರಿತಾದ ವಿವರ ಇಲ್ಲಿದೆ.
ಸಂಸತ್ ಭವನದ ಗೋಡೆಯಲ್ಲಿ ಹಂಪಿನ ಕಲ್ಲಿನ ರಥವನ್ನು ಕೆತ್ತಲಾಗಿದೆ. ಜೊತೆಗೆ ಇದರ ಮೇಲೆ ಭಾರತದ ಮಹಾನ್ ದಾರ್ಶನಿಕರ ಚಿತ್ರಗಳನ್ನು ಅಳವಡಿಸಲಾಗಿದೆ. ಈ ಪೈಕಿ ಬಸವೇಶ್ವರ ಅವರ ಚಿತ್ರವೂ ಇದೆ.
ಮಾತ್ರವಲ್ಲ ಬಸವಣ್ಣ ಅವರ ಪ್ರಸಿದ್ಧ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ದಿ’ ಎಂಬ ವಚನದ ಸಾಲನ್ನು ಕೆತ್ತಲಾಗಿದೆ.