ಕ್ಯಾನ್ಸರ್ ಕ್ಯಾಪಿಟಲ್ ಆಗಿದೆ ಮೇಘಾಲಯ – ಈ ರಾಜ್ಯದ ಪ್ರತಿ ಒಂದು ಲಕ್ಷ ಜನರ ಪೈಕಿ 131 ಜನರಿಗಿದೆ ಕ್ಯಾನ್ಸರ್..!!

ಕ್ಯಾನ್ಸರ್ ಕ್ಯಾಪಿಟಲ್ ಆಗಿದೆ ಮೇಘಾಲಯ – ಈ ರಾಜ್ಯದ ಪ್ರತಿ ಒಂದು ಲಕ್ಷ ಜನರ ಪೈಕಿ 131 ಜನರಿಗಿದೆ ಕ್ಯಾನ್ಸರ್..!!

ನ್ಯೂಸ್ ಆ್ಯರೋ‌ : ಕ್ಯಾನ್ಸರ್ ಕಾರಣದಿಂದ ಮೇಘಾಲಯದಲ್ಲಿ ಪ್ರತಿ ವರ್ಷ ಸುಮಾರು 8 ಸಾವಿರ ಮಂದಿ ಮರಣ ಹೊಂದುತ್ತಿದ್ದಾರೆ. ಇಡೀ ದೇಶದಲ್ಲೇ ಮೇಘಾಲಯದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚು. ಇದಕ್ಕೆ ತಂಬಾಕು ಸೇವನೆಯೇ ಮುಖ್ಯ ಕಾರಣ ಎಂದು NEIGRIHMSನ ಸರ್ಜಿಕಲ್ ಆಂಕಾಲಾಜಿ ಅಸೋಸಿಯೇಟ್ ಪ್ರೊಫೆಸರ್ ಡಾ. ಕಾಲೇಬ್ ಹ್ಯಾರಿಸ್ ತಿಳಿಸಿದ್ದಾರೆ.

ಮೇ 31ರಂದು ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅವರು ಮಾತನಾಡಿದರು. ಮೇಘಾಲಯದಲ್ಲಿ ಕಂಡು ಬರುವ ಕ್ಯಾನ್ಸರ್ ರೋಗಿಗಳ ಪೈಕಿ ಸುಮಾರು ಶೇ. 70ರಷ್ಟು ಮಂದಿ ತಂಬಾಕು ಉಪಯೋಗಿಸುತ್ತಾರೆ. ರಾಜ್ಯದಲ್ಲಿ ತಂಬಾಕು ಬಳಕೆಯನ್ನು ನಿಷೇಧಿಸಿದರೆ ಮೂರರಲ್ಲಿ ಎರಡರಷ್ಟು ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದು ಎಂದು ವಿವರಿಸಿದ್ದಾರೆ.

ಮೇಘಾಲಯದಲ್ಲಿ ಅನ್ನನಾಳದ ಕ್ಯಾನ್ಸರ್ ಪ್ರಮಾಣ ಹೆಚ್ಚು. ಇದು ದೇಶದ ಅಂಕಿ ಅಂಶಕ್ಕೆ ಹೋಲಿಸಿದರೆ ಸುಮಾರು ಹತ್ತು ಪಟ್ಟು ಅಧಿಕ. ದೇಶದಲ್ಲಿ ಪ್ರತಿ 1 ಲಕ್ಷ ಮಂದಿಯ ಪೈಕಿ 5 ಜನರಿಗೆ ಅನ್ನನಾಳದ ಕ್ಯಾನ್ಸರ್ ಇದ್ದರೆ ಮೇಘಾಲಯದಲ್ಲಿನ ಪ್ರಮಾಣ 50ರಿಂದ 70. ಇದು ದೇಶ ಮಾತ್ರವಲ್ಲ ವಿಶ್ವದಲ್ಲೇ ಅತೀ ಹೆಚ್ಚಿನ ಪ್ರಮಾಣದ್ದು ಎಂದು ಆತಂಕ ವ್ಯಕ್ತಪಡಿಸಿದರು.

ಅನ್ನನಾಳದ ಕ್ಯಾನ್ಸರ್ ಗೆ ಚಿಕಿತ್ಸೆ ನಿಡುವುದು ತುಂಬಾ ಕಠಿಣ. ಇದು ಬಾಧಿಸಿದರೆ ಗುಣಮುಖವಾಗುವ ಸಾಧ್ಯತೆ ಕೇವಲ ಶೇ, 20ರಿಂದ 25 ಮಾತ್ರ. NEIGRIHMS ವೈದ್ಯಕೀಯ ಸಂಸ್ಥೆಗೆ ಪ್ರತೀ ವರ್ಷ 1,000ದಿಂದ 1,200ದವರೆಗೆ ಕ್ಯಾನ್ಸರ್ ರೋಗಿಗಳು ದಾಖಲಾಗುತ್ತಾರೆ ಎಂದು ತಿಳಿಸಿದ್ದಾರೆ.

ಮಕ್ಕಳಲ್ಲಿ ಜಾಗೃತಿ

National Tobacco Control Programme (NTCP)ನ ನೋಡೆಲ್ ಅಧಿಕಾರಿ ಡಾ.ಲನಾ ಲಿಂಗ್ಡೊ ನೊಂಗ್ಬ್ರಿ ಮಾತನಾಡಿ, ಯುವ ಜನತೆ ಈಗಾಗಲೇ ವಿವಿಧ ರೂಪಗಳಲ್ಲಿನ ತಂಬಾಕನ್ನು ಬಳಸುತ್ತಿದೆ. ನಾವು ಮೇಘಾಲಯದ ಮಕ್ಕಳನ್ನು ತಂಬಾಕಿನ ಉಪಯೋಗದಿಂದ ರಕ್ಷಿಸಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಂಬಂಧ್ ಹೆಲ್ತ್ ಫೌಂಡೇಷನ್ ಜೊತೆಗೋಡಿ Tobacco-Free Educational Institutions (ToFEI) ಕಾರ್ಯಕ್ರಮವನ್ನು 2021ರಲ್ಲಿ ಆರಂಭಿಸಲಾಗಿದೆ. ಇದರ ಭಾಗವಾಗಿ ಪ್ರತೀ ಶಾಲೆಯಲ್ಲಿ ತಂಬಾಕು ಜಾಗೃತಿ ರ್ಯಾಲಿ ಮೂಡಿಸಲು ಸೂಚಿಸಲಾಗಿದೆ. ವಿಶ್ವ ತಂಬಾಕು ವಿರೋಧಿ ದಿನದ ಈ ವರ್ಷದ ನಮ್ಮ ಧ್ಯೇಯ ವಾಕ್ಯ ನನ್ನ ಮೇಘಾಲಯ-ತಂಬಾಕು ರಹಿತ ಮೇಘಾಲಯ ಎಂದು ಡಾ.ಲನಾ ಹೇಳಿದ್ದಾರೆ.

‘ಕ್ಯಾನ್ಸರ್ ರಾಜಧಾನಿ’

ಮೇಘಾಲಯವನ್ನು ಕ್ಯಾನ್ಸರ್ ರಾಜಧಾನಿ ಎಂದು ಕರೆಯಲಾಗುತ್ತದೆ. ಯಾಕೆಂದರೆ ಇಡೀ ದೇಶದಲ್ಲಿ ಅತೀ ಹೆಚ್ಚು ಕ್ಯಾನ್ಸರ್ ರೋಗಿಗಳು ಇರುವುದು ಇಲ್ಲಿ. ಅತಿ ಹೆಚ್ಚು ತಂಬಾಕು ಬಳಸುವುದೇ ಇದಕ್ಕೆ ಕಾರಣ. ಸಮೀಕ್ಷೆಯೊಂದರ ಪ್ರಕಾರ ಶೇ. 47ರಷ್ಟು ವಯಸ್ಕರು ಮತ್ತು ಶೇ. 34ರಷ್ಟು 13-15 ವಯಸ್ಸಿನವರು ತಂಬಾಕು ಬಳಸುತ್ತಾರೆ. ಈ ರಾಜ್ಯದಲ್ಲಿ ಪ್ರತೀ 1 ಲಕ್ಷ ಜನರ ಪೈಕಿ 131 ಮಂದಿಗೆ ಕ್ಯಾನ್ಸರ್ ಇದೆ ಎಂದು ಅಂಕಿ ಅಂಶ ಹೇಳುತ್ತದೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *