ವಿವಿಧ ಬ್ಯಾಂಕ್ ಗಳಲ್ಲಿ ಕೊಳೆಯುತ್ತಿರುವ ಈ ಕೋಟ್ಯಂತರ ರೂಪಾಯಿಗಳಿಗೆ ಅಡ್ರೆಸ್ಸೇ ಇಲ್ಲ!

ವಿವಿಧ ಬ್ಯಾಂಕ್ ಗಳಲ್ಲಿ ಕೊಳೆಯುತ್ತಿರುವ ಈ ಕೋಟ್ಯಂತರ ರೂಪಾಯಿಗಳಿಗೆ ಅಡ್ರೆಸ್ಸೇ ಇಲ್ಲ!

ನ್ಯೂಸ್ ಆ್ಯರೋ‌ : ಇದೊಂಥರಾ ವಿಚಿತ್ರ ಪರಿಸ್ಥಿತಿ. ನಮ್ಮ ದೇಶದಲ್ಲಿ ಬಡತನ ಒಂದು ಕಡೆಯಾದರೆ ಇನ್ನೊಂದು ಕಡೆ ಕೋಟಿಗಟ್ಟಲೆ ಹಣ ವಾರಸುದಾರರಿಲ್ಲದೆ ವಾಣಿಜ್ಯ ಬ್ಯಾಂಕ್ ಗಳಲ್ಲಿ ಹಾಗೆಯೇ ಬಿದ್ದುಕೊಂಡಿದೆ.

ಬರೋಬ್ಬರಿ 35 ಸಾವಿರ ಕೋಟಿ ರೂ.

ಹೀಗೆ ದೇಶಾದ್ಯಂತ ಇರುವ ಬ್ಯಾಂಕ್ ಗಳಲ್ಲಿ ನಿರ್ವಹಣೆಯಿಲ್ಲದ ನಿಷ್ಕ್ರಿಯ ಖಾತೆಗಳಲ್ಲಿ ಒಂದೆರಡು ಕೋಟಿ ರೂ. ಅಲ್ಲ; ಬದಲಾಗಿ ಬರೋಬ್ಬರಿ 35,012 ಕೋಟಿ ರೂ. ಇದೆ. ಇದೀಗ ಇವುಗಳ ಸೂಕ್ತ ವಿಲೇವಾರಿಗಾಗಿ ಆರ್.ಬಿ.ಐ. ಬ್ಯಾಂಕ್ ಗಳಿಗೆ ಗುರಿ ನಿಗದಿಪಡಿಸಿದೆ.

ಹೀಗೆ 2023ರ ಜೂ. 1ರಂದು ಆರಂಭವಾದ 100 ಡೇಸ್, 100 ಪೇಸ್ ಅಭಿಯಾನ ಸೆ. 8ರ ವರೆಗೆ ನಡೆಯಲಿದೆ. ಪ್ರತಿ ಜಿಲ್ಲೆಯ ಬ್ಯಾಂಕ್ ಗಳಲ್ಲಿರುವ 100 ನಿಷ್ಕ್ರಿಯ ಖಾತೆಗಳ ವಾರಸುದಾರರನ್ನು 100 ದಿನದೊಳಗೆ ಪತ್ತೆಹಚ್ಚಿ ಸೂಕ್ತ ದಾಖಲೆಗಳ ಆಧಾರದಲ್ಲಿ ಹಣ ಮರುಪಾವತಿ ಮಾಡಬೇಕು. ಅಥವಾ ಖಾತೆ ಚಾಲ್ತಿಯಲ್ಲಿಡಲು ಪ್ರಯತ್ನಿಸಬೇಕು. ಸಾಧ್ಯವಾಗದಿದ್ದರೆ ಆರ್.ಬಿ.ಐ. ನಿರ್ದೇಶನದಂತೆ ಪ್ರತ್ಯೇಕ ಖಾತೆಗೆ ವರ್ಗಾಯಿಸಬೇಕು.

ನಿಷ್ಕ್ರಿಯವಾಗುವುದು ಹೇಗೆ?

ಬ್ಯಾಂಕ್ ನ ಉಳಿತಾಯ ಖಾತೆ, ನಿರಖು ಠೇವಣಿ, ಆರ್.ಡಿ. ಇತ್ಯಾದಿ ವಿಧಾನಗಳ ಮೂಲಕ ದುಡ್ಡಿಟ್ಟು ಅವಧಿ ಮುಗಿದ, 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ವ್ಯವಹಾರ ನಡೆಸದಿದ್ದರೆ ಅದನ್ನು ನಿಷ್ಕ್ರಿಯ ಖಾತೆಯಾಗಿ ಪರಿಗಣಿಸಲಾಗುತ್ತದೆ. ಪತ್ನಿ, ಮಕ್ಕಳಿಗೆ ತನ್ನ ಸಂಪಾದನೆ ಹಣ ಗೊತ್ತಾಗಬಾರದೆಂದು ರಹಸ್ಯ ಕಾಪಾಡಿಕೊಂಡವರ ನಿಧನ ನಂತರ ಹಣ ಖಾತೆಯಲ್ಲೇ ಉಳಿದು ಬಿಡುತ್ತದೆ.

ಹಣ ಪಡೆಯುವುದು ಹೇಗೆ?

ನಿಷ್ಕ್ರಿಯ ಖಾತೆಗೆ ಸಂಬಂಧಿಸಿದ ವಾರಸುದಾರರು, ಉತ್ತರಾದಿಕಾರಿಗಳು ಕ್ಲೇಮ್ ಸಲ್ಲಿಸಿ ಖಾತೆಯಲ್ಲಿರುವ ಹಣವನ್ನು ಬಡ್ಡಿ ಸಮೇತ ಮರಳಿ ಪಡೆಯಲು ಅಭಿಯಾನ ಸಹಾಯ ಮಾಡುತ್ತದೆ. ಖಾತೆದಾರರ ಮರಣ ಪ್ರಮಾಣ ಪತ್ರ ಸಹಿತ ಇತರ ದಾಖಲೆಗಳನ್ನು ಸಲ್ಲಿಸಿ ನಿಷ್ಕ್ರಿಯ ಖಾತೆಯಿಂದ ಹಣ ಪಡೆಯಬಹುದು.

ಅನ್ ಕ್ಲೇಮ್ಡ್ ಮೊತ್ತ: ಯಾವ ಬ್ಯಾಂಕ್ ನಲ್ಲಿ ಎಷ್ಟು?

*ಎಸ್.ಬಿ.ಐ.-8,086 ಕೋಟಿ ರೂ.
*ಪಂಜಾಬ್ ನ್ಯಾಷನಲ್ ಬ್ಯಾಂಕ್-5,340 ಕೋಟಿ ರೂ.
*ಕೆನರಾ ಬ್ಯಾಂಕ್-4,558 ಕೋಟಿ ರೂ.
*ಬ್ಯಾಂಕ್ ಆಫ್ ಬರೋಡಾ-3,904 ಕೋಟಿ ರೂ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *