
ಕಿನ್ನಿಗೋಳಿ : ನಾಗರಹಾವಿನ ಮೇಲೆ ಡೀಸೆಲ್ ಎರಚಿದಾತನಿಗೆ ಮೈ ಉರಿ, ಆಸ್ಪತ್ರೆಗೆ ದಾಖಲು – ನಾಗದೇವರ ಶಾಪವೆಂದ ಭಕ್ತರು, ಏನಿದು ಘಟನೆ?
- ಕರಾವಳಿ
- September 16, 2023
- No Comment
- 240
ನ್ಯೂಸ್ ಆ್ಯರೋ : ಕರಾವಳಿ ಜನರಿಗೆ ನಾಗದೇವರ ಮೇಲಿನ ಭಕ್ತಿ ಅಪಾರ. ಹಾಗೆಯೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅದೆಷ್ಟೋ ಮಂದಿ ಸೆಲೆಬ್ರಿಟಿಗಳು ಭೇಟಿ ನೀಡಿ ನಾಗದೇವರ ಕೃಪೆಗೆ ಪಾತ್ರವಾಗಿ ಜೀವನದಲ್ಲಿ ಸಕ್ಸಸ್ ಕಂಡ ಹಲವು ಪ್ರಕರಣಗಳಿವೆ. ಬಹುಜನರ ಆರಾಧನೆಯ ನಾಗನ ಮೂರ್ತರೂಪದಂತೆ ಆರಾಧಿಸುವ ನಾಗರಹಾವಿಗೆ ಡೀಸೆಲ್ ಎರಚಿದಾತ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.
ಏನಿದು ಘಟನೆ?
ಮಂಗಳೂರಿನ ಹೊರವಲಯದ ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದ ವಾರ ನಾಗರ ಹಾವೊಂದು ಕಂಡು ಬಂದಿದ್ದು ಇದನ್ನು ಕಂಡ ಕಟ್ಟಡದ ಕಾವಲುಗಾರ ನಾಗರ ಹಾವಿಗೆ ಡೀಸೆಲ್ ಎರಚಿದ್ದ. ಇದರಿಂದಾಗಿ ಮೈ ಉರಿಯಿಂದ ನಾಗರ ಹಾವು ಒದ್ದಾಡತೊಡಗಿದಾಗ, ಸ್ಥಳೀಯರು ಇದನ್ನು ಕಂಡು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ತಿಳಿಸಿದ್ದರು.
ಬಳಿಕ ಯತೀಶ್ ಕಟೀಲು ಅವರು ಸ್ಥಳಕ್ಕೆ ಆಗಮಿಸಿ ಶ್ಯಾಂಪು ಮೂಲಕ ಅದನ್ನು ತೊಳೆದು ಸಹಜ ಸ್ಥಿತಿಗೆ ಬಂದ ನಂತರ ಕಾಡಿಗೆ ಬಿಟ್ಟಿದ್ದಾರೆ, ಒಂದು ವಾರ ಕಳೆಯುವಷ್ಟರಲ್ಲಿ ಡೀಸೆಲ್ ಎರಚಿದ ಕಾರ್ಮಿಕ ಕೂಡ ನಾಗರ ಹಾವಿನಂತೆ ಮೈ ಉರಿಯಿಂದ ಬಳಲಲು ಪ್ರಾರಂಭಿಸಿದ್ದಾನೆ ಎನ್ನಲಾಗಿದೆ.
ಸದ್ಯ ಆತನ ಸಂಬಂಧಿಕರು ಕಾವಲುಗಾರನ ಊರು ಉತ್ತರ ಕರ್ನಾಟಕಕ್ಕೆ ಆತನನ್ನು ಕರೆದೊಯ್ದಿದ್ದು ಇದೀಗ ಅಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ಉರಗ ರಕ್ಷಕ ಯತೀಶ್ ಕಟೀಲು ತಿಳಿಸಿದ್ದಾರೆ. ಈ ಘಟನೆಯನ್ನು ಕೆಲವರಂತೂ ನಾಗದೇವರ ಶಾಪ ಎಂದು ಮಾತನಾಡಲು ಆರಂಭಿಸಿದ್ದು, ನಾಗದೇವರ ಮೇಲೆ ಕಾವಲುಗಾರನಿಗೆ ಈಗ ಭಕ್ತಿ ಬಂದಿರಬಹುದು ಎಂದು ಅಣಕವಾಡಿದ್ದಾರೆ.